Home / ಕವನ / ಕವಿತೆ / ಕಾಡು ಹಕ್ಕಿಯ ಹಾಡು

ಕಾಡು ಹಕ್ಕಿಯ ಹಾಡು

ಕನಸಿಳಿಯದ ಗಂಟಲಿನಲಿ
ನೋವುಗಳ ತುಂಬಿಸಿದಂತೆ!

ಒಡಲಾಳದೊಳಗೆ ಮಥಿಸಿ ಮಥಿಸಿ
ಲಾವಾರಸವಾದ ಅಮೂರ್ತ ನೋವುಗಳು
ಸಿಡಿಯಲಾಗದ ಜ್ವಾಲಾಮುಖಿಯಂತೆ!

ಧ್ವನಿಯಡಗಿಸಿದ ಕಂಠವಾಗಿ
ಹನಿಯಡಗಿಸಿದ ಕಡಲಾಗಿ
ಅವ್ಯಕ್ತಗಳ ಹಿಡಿದಿರಿಸಿದ ಒಡಲಾಗಿ
ನೋವುಗಳು ಮಾತಾಗುವುದೇ ಇಲ್ಲ
ಬದಲಿಗೆ ಹಾಡಾಗುತ್ತವಲ್ಲಾ!

ಆಳದಲ್ಲೆಲ್ಲೋ ಮದ್ದುಗುಂಡುಗಳು
ಸಿಡಿದು, ಎದೆಯೊಳಗೆಲ್ಲಾ ದಹಿಸಿ
ಆಡಲಾಗದ ಅನುಭವಿಸಲಾಗದ ಕಸಿವಿಸಿ
ಎರಡು ಪದರು ರೊಟ್ಟಿಯೊಳಗೆ
(ಅತ್ತ ದರಿ-ಇತ್ತ ಪುಲಿಯಂತೆ)
ಸ್ಯಾಂಡ್‌ವಿಚ್ ಆಗುವ ಹಸಿ-ಬಿಸಿ!
ಮತ್ತೆ ಉಲಿಯುವುದು ಅಶಾಸ್ತ್ರೀಯ ಹಾಡೇ!

ಹಾಡಬಹುದೇ ರಾಗವಿಲ್ಲದೇ
ತಾಳವಿಲ್ಲದೇ, ಭಾವವಿಲ್ಲದೇ ಹೀಗೆ?
ಬರೀ ನೋವು ತುಂಬಿದ ಹಾಡು?
ಶಾಸ್ತ್ರೀಯ ಸಂಗೀತವರಿಯದ
ಕಾಡುಹಕ್ಕಿಯ ಪಾಡು!

ತಾನೊದರಿದ್ದೆಲ್ಲಾ ಸಂಗೀತವೇ
ಎಂಬ ಹಠವಿಲ್ಲ ಹಕ್ಕಿಗೆ
ಯಾರು ಕೇಳಲಿ ಬಿಡಲಿ
ತನ್ನೆದೆಯ ನೋವುಗಳ
ತಾಳಲಾಗದ ಭಾವಗಳ
ಹಾಡಾಗಿಸಿ ತಾನೇ ನಲಿಯುತ್ತದೆ
ತನ್ನ ಹಾಡಿಗೆ!
ನಗುತ್ತದೆ;
ತನ್ನ ಪಾಡಿಗೆ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...