ಈಗೋ ಉತ್ತರ…

ಅದೆಶ್ಟು ಬಿರುಸು
ಅಶ್ಟೆ ಹುಲುಸು
ಘಮ ಘಮ ಹಲಸಿನಂತೆ!
ಪುಟ್ಟ ಚಂದ್ರ ಚಕೋರ,
ಧರೆಗಿಳಿದು ಬೆರಗು ಮೂಡಿಸಿದನಲ್ಲ?
ನವ ಮಾಸ ಕಳೆದ,
ನವ ನೀತ ಚೋರ!
ಪುಟ್ಟ ಪೋರಾ!
ತಂದೆಯ ರೂಪ,
ತಾಯಿಯ ಕೋಪ,
ಜಗದಾ ಪರಿತಾಪ ಎಲ್ಲವೂ…
*

ಹಾಲುಗೆನ್ನೆಯ ಹಸುಗೂಸು
ಮುದ್ದು ಮುದ್ದು ಮುಖಾರವಿಂದ
ತೊಂಡೆಣ್ಣೆನ ತುಟಿ, ದಾಳಿಂಬೆ ಹಲ್ಲು
ಗೋಲಿಗಣ್ಣು, ಸೇಬುಗಲ್ಲ, ಹಾಲು ಹಲ್ಲು
ಬೇವಿನ ಎಸಳ ನೋಟ!
ಆಟ, ಪಾಠ, ನೋಟವೆಲ್ಲ ಲವಕುಶರ ಹಠ!
ತೊದಲು ಮಾತು, ಅಂಬೆಗಾಲು
ನವಿಲು ಕುಣಿತ ಸಾಧ್ಯವು!
*

ಹಸಿ ಹಸಿ ಹಾಲ ಶಿಶು, ಪ್ರತಿಮನೆಯ ಶಶಿ!
ಮುಸಿ ಮುಸಿ ಮುಗ್ಧ ಹಸು!
ಹೋರಿಯಂಗೆ ಬೆಳೆದ ಪರಿಯೇ ಬೆರಗು
‘ಮೂರು ವರ್ಷದ ಬುದ್ಧಿ, ನೂರು ವರ್ಷ’
ಸದಾ ಜಿಂಕೆ ಮರಿಯಂಗೇ… ಜಿಗಿತ!
ವರ್ಷ ವರ್ಷ ಸದಾ, ಹರಿದು ಬರುವ ತೇರಿನಂಗೆ…
ಹರ್ಷ ಹರ್ಷವೆನಲು ಸ್ವಲ್ಪವೇ?!
*

ಎದ್ದು ಬಿದ್ದು ಬಾನಂಗಳಕೆ ಪುಟಿದ!
ನವ ವಸಂತಗಳ ದಾಟಿ, ಜಗದ ತೊಟ್ಟಿಲಿಳಿದ
ಕುಡಿ ಮೀಸೆ ಕುವರ, ಚೆಲುವ ಚೆನ್ನಿಗ!
ಬುದ್ಧ, ಬಸವ, ಪಂಪ, ರನ್ನ, ಹಂಸರಂಗೆ…
ಏನೆಲ್ಲ ಕನಸನೇರಿ
ಭಾರತಾಂಬೆಗೆ ಕೀರ್ತಿ ಶಿಖರ ತರುವ!
*

ಜಯಹೋ… ಕನ್ನಡ ಕೀರ್ತಿಕುವರ!
ಶೂರ, ವೀರ, ಧೀರ… ಧೀರಾಽಽ ಮಗಧೀರ…
ನವ ನವೋನ್ಮೇಶ, ಶ್ಯಾಮ ಶ್ರೀರಾಮನವತಾರ!
ದೇಶ, ವಿದೇಶ ಸುತ್ತಿ, ಮೆರೆವ ಧೃವತಾರೆ…
ಹಾಲುಜೇನು, ಒಟ್ಟಿಗೆ ಕರೆವ ಧಾರೆ!
ಜಗದ ಬೆಳಕೋ? ಯುಗದ ಬೆಳಕೋ? ಕಾಣೇ…
ಬೆಳೆ ಬೆಳೆದು ಆಲವಾದ, ಕನಸ್ಸಿನ ಕುವರನೇ…
ಭಾರತದ ಕೀರ್ತಿ ಶಿಖರ, ಭಾನೆತ್ತರ ಬೆಳಗೋ…
ಈ ಜಗವೇ ನಿನ್ನೊಳಗೆ… ಈಗೋ ಉತ್ತರ!!
‘ಮುಂದುಂದಿ ಮುಸಲ ಪಂಡುಗಽ…’ ಎಚ್ಚರ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುಡಿತಲೇ ಇರ್‍ತಾಳೆ
Next post ಗುಬ್ಬಿ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…