Home / ಕವನ / ಕವಿತೆ / ಈಗೋ ಉತ್ತರ…

ಈಗೋ ಉತ್ತರ…

ಅದೆಶ್ಟು ಬಿರುಸು
ಅಶ್ಟೆ ಹುಲುಸು
ಘಮ ಘಮ ಹಲಸಿನಂತೆ!
ಪುಟ್ಟ ಚಂದ್ರ ಚಕೋರ,
ಧರೆಗಿಳಿದು ಬೆರಗು ಮೂಡಿಸಿದನಲ್ಲ?
ನವ ಮಾಸ ಕಳೆದ,
ನವ ನೀತ ಚೋರ!
ಪುಟ್ಟ ಪೋರಾ!
ತಂದೆಯ ರೂಪ,
ತಾಯಿಯ ಕೋಪ,
ಜಗದಾ ಪರಿತಾಪ ಎಲ್ಲವೂ…
*

ಹಾಲುಗೆನ್ನೆಯ ಹಸುಗೂಸು
ಮುದ್ದು ಮುದ್ದು ಮುಖಾರವಿಂದ
ತೊಂಡೆಣ್ಣೆನ ತುಟಿ, ದಾಳಿಂಬೆ ಹಲ್ಲು
ಗೋಲಿಗಣ್ಣು, ಸೇಬುಗಲ್ಲ, ಹಾಲು ಹಲ್ಲು
ಬೇವಿನ ಎಸಳ ನೋಟ!
ಆಟ, ಪಾಠ, ನೋಟವೆಲ್ಲ ಲವಕುಶರ ಹಠ!
ತೊದಲು ಮಾತು, ಅಂಬೆಗಾಲು
ನವಿಲು ಕುಣಿತ ಸಾಧ್ಯವು!
*

ಹಸಿ ಹಸಿ ಹಾಲ ಶಿಶು, ಪ್ರತಿಮನೆಯ ಶಶಿ!
ಮುಸಿ ಮುಸಿ ಮುಗ್ಧ ಹಸು!
ಹೋರಿಯಂಗೆ ಬೆಳೆದ ಪರಿಯೇ ಬೆರಗು
‘ಮೂರು ವರ್ಷದ ಬುದ್ಧಿ, ನೂರು ವರ್ಷ’
ಸದಾ ಜಿಂಕೆ ಮರಿಯಂಗೇ… ಜಿಗಿತ!
ವರ್ಷ ವರ್ಷ ಸದಾ, ಹರಿದು ಬರುವ ತೇರಿನಂಗೆ…
ಹರ್ಷ ಹರ್ಷವೆನಲು ಸ್ವಲ್ಪವೇ?!
*

ಎದ್ದು ಬಿದ್ದು ಬಾನಂಗಳಕೆ ಪುಟಿದ!
ನವ ವಸಂತಗಳ ದಾಟಿ, ಜಗದ ತೊಟ್ಟಿಲಿಳಿದ
ಕುಡಿ ಮೀಸೆ ಕುವರ, ಚೆಲುವ ಚೆನ್ನಿಗ!
ಬುದ್ಧ, ಬಸವ, ಪಂಪ, ರನ್ನ, ಹಂಸರಂಗೆ…
ಏನೆಲ್ಲ ಕನಸನೇರಿ
ಭಾರತಾಂಬೆಗೆ ಕೀರ್ತಿ ಶಿಖರ ತರುವ!
*

ಜಯಹೋ… ಕನ್ನಡ ಕೀರ್ತಿಕುವರ!
ಶೂರ, ವೀರ, ಧೀರ… ಧೀರಾಽಽ ಮಗಧೀರ…
ನವ ನವೋನ್ಮೇಶ, ಶ್ಯಾಮ ಶ್ರೀರಾಮನವತಾರ!
ದೇಶ, ವಿದೇಶ ಸುತ್ತಿ, ಮೆರೆವ ಧೃವತಾರೆ…
ಹಾಲುಜೇನು, ಒಟ್ಟಿಗೆ ಕರೆವ ಧಾರೆ!
ಜಗದ ಬೆಳಕೋ? ಯುಗದ ಬೆಳಕೋ? ಕಾಣೇ…
ಬೆಳೆ ಬೆಳೆದು ಆಲವಾದ, ಕನಸ್ಸಿನ ಕುವರನೇ…
ಭಾರತದ ಕೀರ್ತಿ ಶಿಖರ, ಭಾನೆತ್ತರ ಬೆಳಗೋ…
ಈ ಜಗವೇ ನಿನ್ನೊಳಗೆ… ಈಗೋ ಉತ್ತರ!!
‘ಮುಂದುಂದಿ ಮುಸಲ ಪಂಡುಗಽ…’ ಎಚ್ಚರ!
*****

Tagged:

Leave a Reply

Your email address will not be published. Required fields are marked *

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...