Home / ಕವನ / ಕವಿತೆ / ಈಗೋ ಉತ್ತರ…

ಈಗೋ ಉತ್ತರ…

ಅದೆಶ್ಟು ಬಿರುಸು
ಅಶ್ಟೆ ಹುಲುಸು
ಘಮ ಘಮ ಹಲಸಿನಂತೆ!
ಪುಟ್ಟ ಚಂದ್ರ ಚಕೋರ,
ಧರೆಗಿಳಿದು ಬೆರಗು ಮೂಡಿಸಿದನಲ್ಲ?
ನವ ಮಾಸ ಕಳೆದ,
ನವ ನೀತ ಚೋರ!
ಪುಟ್ಟ ಪೋರಾ!
ತಂದೆಯ ರೂಪ,
ತಾಯಿಯ ಕೋಪ,
ಜಗದಾ ಪರಿತಾಪ ಎಲ್ಲವೂ…
*

ಹಾಲುಗೆನ್ನೆಯ ಹಸುಗೂಸು
ಮುದ್ದು ಮುದ್ದು ಮುಖಾರವಿಂದ
ತೊಂಡೆಣ್ಣೆನ ತುಟಿ, ದಾಳಿಂಬೆ ಹಲ್ಲು
ಗೋಲಿಗಣ್ಣು, ಸೇಬುಗಲ್ಲ, ಹಾಲು ಹಲ್ಲು
ಬೇವಿನ ಎಸಳ ನೋಟ!
ಆಟ, ಪಾಠ, ನೋಟವೆಲ್ಲ ಲವಕುಶರ ಹಠ!
ತೊದಲು ಮಾತು, ಅಂಬೆಗಾಲು
ನವಿಲು ಕುಣಿತ ಸಾಧ್ಯವು!
*

ಹಸಿ ಹಸಿ ಹಾಲ ಶಿಶು, ಪ್ರತಿಮನೆಯ ಶಶಿ!
ಮುಸಿ ಮುಸಿ ಮುಗ್ಧ ಹಸು!
ಹೋರಿಯಂಗೆ ಬೆಳೆದ ಪರಿಯೇ ಬೆರಗು
‘ಮೂರು ವರ್ಷದ ಬುದ್ಧಿ, ನೂರು ವರ್ಷ’
ಸದಾ ಜಿಂಕೆ ಮರಿಯಂಗೇ… ಜಿಗಿತ!
ವರ್ಷ ವರ್ಷ ಸದಾ, ಹರಿದು ಬರುವ ತೇರಿನಂಗೆ…
ಹರ್ಷ ಹರ್ಷವೆನಲು ಸ್ವಲ್ಪವೇ?!
*

ಎದ್ದು ಬಿದ್ದು ಬಾನಂಗಳಕೆ ಪುಟಿದ!
ನವ ವಸಂತಗಳ ದಾಟಿ, ಜಗದ ತೊಟ್ಟಿಲಿಳಿದ
ಕುಡಿ ಮೀಸೆ ಕುವರ, ಚೆಲುವ ಚೆನ್ನಿಗ!
ಬುದ್ಧ, ಬಸವ, ಪಂಪ, ರನ್ನ, ಹಂಸರಂಗೆ…
ಏನೆಲ್ಲ ಕನಸನೇರಿ
ಭಾರತಾಂಬೆಗೆ ಕೀರ್ತಿ ಶಿಖರ ತರುವ!
*

ಜಯಹೋ… ಕನ್ನಡ ಕೀರ್ತಿಕುವರ!
ಶೂರ, ವೀರ, ಧೀರ… ಧೀರಾಽಽ ಮಗಧೀರ…
ನವ ನವೋನ್ಮೇಶ, ಶ್ಯಾಮ ಶ್ರೀರಾಮನವತಾರ!
ದೇಶ, ವಿದೇಶ ಸುತ್ತಿ, ಮೆರೆವ ಧೃವತಾರೆ…
ಹಾಲುಜೇನು, ಒಟ್ಟಿಗೆ ಕರೆವ ಧಾರೆ!
ಜಗದ ಬೆಳಕೋ? ಯುಗದ ಬೆಳಕೋ? ಕಾಣೇ…
ಬೆಳೆ ಬೆಳೆದು ಆಲವಾದ, ಕನಸ್ಸಿನ ಕುವರನೇ…
ಭಾರತದ ಕೀರ್ತಿ ಶಿಖರ, ಭಾನೆತ್ತರ ಬೆಳಗೋ…
ಈ ಜಗವೇ ನಿನ್ನೊಳಗೆ… ಈಗೋ ಉತ್ತರ!!
‘ಮುಂದುಂದಿ ಮುಸಲ ಪಂಡುಗಽ…’ ಎಚ್ಚರ!
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...