ಒಂದು ಹಣತೆ ಸಾಕು

ಒಂದು ಹಣತೆ ಸಾಕು
ಮನೆಯ ಬೆಳಗಲು
ಕೋಟಿ ಕಿರಣಗಳೆ ಬೇಕು
ತಾಯಿನಾಡ ಬೆಳಗಲು ||

ಕೋಟಿ ಕಿರಣಗಳಲಿ ಬೇಕು
ಸ್ವಚ್ಛಂದ ಮನಸ್ಸು
ಮನಸ್ಸುಗಳಿಗೆ ಬೇಕು ತಾಯಿ
ನುಡಿ ಆರಾಧಿಸುವ ಮನಸು ||

ನಮ್ಮ ಮನೆ ಅಲ್ಲ ಇದು ನಿಮ್ಮ
ಮನೆ ಅಲ್ಲ ಒಂದಾಗಿ ಬಾಳುವ
ನಮ್ಮೆಲ್ಲರ ಮನೆ ನಮ್ಮ ತಾಯಿ ಇವಳು
ನಿಮ್ಮ ತಾಯಿ ಎಂದಲ್ಲ ತಾಯಿ ನಾಡತಾಯಿ ||

ತಾಯಿ ಕುಲದ ತಾಯಿ ನಮ್ಮ ಉಸಿರು
ಹೆತ್ತವಳು ಅವಳು ನಮ್ಮ ತಾಯಿ
ಅನ್ನ ನೀಡುವಳು ಭೂಮಿತಾಯಿ
ನಾಡನುಡಿ ತಾಯಿ ಕರುನಾಡ ತಾಯಿ ||

ಜಗದಗಲ ಭೂಮಿಯಗಲ
ಬೆಳಕು ಅನುರಣೀಯ ಅನುಸಂಧಾನ
ಹೂಗಳು ಅರಳಿದವು ನೋಡಲ್ಲಿ ಆಗಸದಲ್ಲಿ
ಚುಕ್ಕಿ ಚಂದ್ರಮರ ನಡುವೆ
ಹೂದಾನಿಗಳ ಹಾಡು
ಸಂಭ್ರಮದ ನೆಲೆಬೀಡು
ನೋಡಿಲ್ಲಿ ತುಂಟ ಮಕ್ಕಳು
ಚಟಾಕಿ ಪಟಾಕಿ ಪಾಡು ||

ಕೋಟಿ ಕೋಟಿ ಕಿರಣಗಳ
ಒಂದೊಂದು ಹಣತೆ ಹಚ್ಚಲು
ಸೃಷ್ಟಿ ಚೈತನ್ಯ ಭಾವ
ಹೊನಲು ನೋಡಲ್ಲಿ ಅದರಲ್ಲಿ
ತಾಯಿ ಸಂತಸದ ಹೊನಲು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಪ್ಪಿಕೊ ಪರಾಭವ!
Next post ಕೋಳಿ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…