Home / ಕವನ / ಕವಿತೆ / ನಮ್ಮ ಉಗಾದಿ…

ನಮ್ಮ ಉಗಾದಿ…

ಉಗಾದಿ ಬಂದಿದೆ, ತಗಾದಿ ತಂದಿದೇ…
ಮನ ಮನೆಗೆ! ಬೇವು ಬೆಲ್ಲ ತಂದಿದೆ!
ಮುರುಕು ಗೋಡೆಗೆ… ಕೆಮ್ಮಣ್ಣು, ಸುಣ್ಣ, ಬಣ್ಣ, ಬಂದಿದೆ!
ಅಂಗಳಕೆ ಕುಂಕುಮ, ಚಂದ್ರ ಬುಕ್ಕಿಟ್ಟು ಚೆಲ್ಲಿ, ರಂಗೋಲಿ ತಂದಿದೆ.


ಹರಕು ಚೊಣ್ಣ, ಮುರುಕು ಮುದ್ದೆ… ಹೋಗಿ,
ಬಿಸಿ ಬಿಸಿ… ಹೋಳಿಗೆ, ತುಪ್ಪ, ಬಾನ, ಚಾರೂ ತಂದಿದೆ!!
ಒಣ ಮರ ಮರದಾ, ಗಿಣ್ಣೆ ಗಿಣ್ಣೆಗೆ, ಜೀವ ಸೆಲೆ ತಂದಿದೆ
ಬಡ ಜನತೆ ಕೊರಳಿಗೆ, ಸಾಲದಾ ಉರಲು ತಂದಿದೆ!


ಯುಗ ಯುಗಕೂ, ನಗು ನಗು ತರುವುದೇ ಉಗಾದಿ,
ಉಗಾದಿ ಕಳೆದ, ಮಾರನೆ ದಿನ, ನಮ್ಮ ಕೇರಿಗೆ ಬಂತು ತಗಾದಿ!
ಇಂಥಾ ಹಬ್ಬಕ್ಕೆಂದೇ, ಹೊಸತು ಬಟ್ಟೆ, ಹೊಸದು ಅಡಿಗೆ ನಮ್ಮದೇ…
ನಿತ್ಯ ಹರಕು ಬಟ್ಟೆ, ಹಳಸಿ, ಹಸಿದ ಹೊಟ್ಟೆ, ನಿತ್ಯ ಸತ್ಯ ಉಗಾದಿ!


ಇದ್ದವರಿಗೆ… ದಿನ ದಿನ ಸಂತಸ, ಸಂಭ್ರಮಗಳೇ ಉಗಾದಿ,
ಇಲ್ಲದವರಿಗೆ ತೊಡಲು ಬಟ್ಟೆ, ಹಸಿದ ಹೊಟ್ಟೆದೇ ತಗಾದಿ!
ಮಾವು ಚಿಗುರು, ಹೊಂಗೆ ನೆರಳಿಗೆ, ಹೊಟ್ಟೆ ತುಂಬಿರೇ…
ನಿತ್ಯ ಕೂಡಿ, ಪಾಡಿ, ಹಾಡರೆ, ಕುಹು ಕುಹು ಕೋಗಿಲೆದೀ ಜನಾಽ…??


ಉಳ್ಳವರಿಗೆ-ದಿನ ನಿತ್ಯ, ಉಗಾದಿಯ ಸಿಹಿಸಿಹಿ ಮೂತ್ರ…
ಇಲ್ಲದವರಿಗೆ ಉಗಾದಿ ದಿನದಂದು ಸಿಹಿ ಸಿಹಿ ಹೂರಣ!
ಪ್ರಕೃತಿ ತೊಡುವ, ಚೈತ್ರದ, ಚೈತನ್ಯದ ಮುಂದೆ,
ಈ ಹುಲುಮನುಜರ ತಂತ್ರ, ಪಕ್ಷಪಾತ, ಬೇವಿಗೂ ಕಹಿ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...