ನಮ್ಮ ಉಗಾದಿ…

ಉಗಾದಿ ಬಂದಿದೆ, ತಗಾದಿ ತಂದಿದೇ…
ಮನ ಮನೆಗೆ! ಬೇವು ಬೆಲ್ಲ ತಂದಿದೆ!
ಮುರುಕು ಗೋಡೆಗೆ… ಕೆಮ್ಮಣ್ಣು, ಸುಣ್ಣ, ಬಣ್ಣ, ಬಂದಿದೆ!
ಅಂಗಳಕೆ ಕುಂಕುಮ, ಚಂದ್ರ ಬುಕ್ಕಿಟ್ಟು ಚೆಲ್ಲಿ, ರಂಗೋಲಿ ತಂದಿದೆ.


ಹರಕು ಚೊಣ್ಣ, ಮುರುಕು ಮುದ್ದೆ… ಹೋಗಿ,
ಬಿಸಿ ಬಿಸಿ… ಹೋಳಿಗೆ, ತುಪ್ಪ, ಬಾನ, ಚಾರೂ ತಂದಿದೆ!!
ಒಣ ಮರ ಮರದಾ, ಗಿಣ್ಣೆ ಗಿಣ್ಣೆಗೆ, ಜೀವ ಸೆಲೆ ತಂದಿದೆ
ಬಡ ಜನತೆ ಕೊರಳಿಗೆ, ಸಾಲದಾ ಉರಲು ತಂದಿದೆ!


ಯುಗ ಯುಗಕೂ, ನಗು ನಗು ತರುವುದೇ ಉಗಾದಿ,
ಉಗಾದಿ ಕಳೆದ, ಮಾರನೆ ದಿನ, ನಮ್ಮ ಕೇರಿಗೆ ಬಂತು ತಗಾದಿ!
ಇಂಥಾ ಹಬ್ಬಕ್ಕೆಂದೇ, ಹೊಸತು ಬಟ್ಟೆ, ಹೊಸದು ಅಡಿಗೆ ನಮ್ಮದೇ…
ನಿತ್ಯ ಹರಕು ಬಟ್ಟೆ, ಹಳಸಿ, ಹಸಿದ ಹೊಟ್ಟೆ, ನಿತ್ಯ ಸತ್ಯ ಉಗಾದಿ!


ಇದ್ದವರಿಗೆ… ದಿನ ದಿನ ಸಂತಸ, ಸಂಭ್ರಮಗಳೇ ಉಗಾದಿ,
ಇಲ್ಲದವರಿಗೆ ತೊಡಲು ಬಟ್ಟೆ, ಹಸಿದ ಹೊಟ್ಟೆದೇ ತಗಾದಿ!
ಮಾವು ಚಿಗುರು, ಹೊಂಗೆ ನೆರಳಿಗೆ, ಹೊಟ್ಟೆ ತುಂಬಿರೇ…
ನಿತ್ಯ ಕೂಡಿ, ಪಾಡಿ, ಹಾಡರೆ, ಕುಹು ಕುಹು ಕೋಗಿಲೆದೀ ಜನಾಽ…??


ಉಳ್ಳವರಿಗೆ-ದಿನ ನಿತ್ಯ, ಉಗಾದಿಯ ಸಿಹಿಸಿಹಿ ಮೂತ್ರ…
ಇಲ್ಲದವರಿಗೆ ಉಗಾದಿ ದಿನದಂದು ಸಿಹಿ ಸಿಹಿ ಹೂರಣ!
ಪ್ರಕೃತಿ ತೊಡುವ, ಚೈತ್ರದ, ಚೈತನ್ಯದ ಮುಂದೆ,
ಈ ಹುಲುಮನುಜರ ತಂತ್ರ, ಪಕ್ಷಪಾತ, ಬೇವಿಗೂ ಕಹಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀವಿಬ್ರೂ ಒಂದೇ
Next post ಲಲಿತಾಂಗಿ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ಸಾವು

    ಈ ಗೊಂಡಾರಣ್ಯದಲ್ಲಿ ನಾನು ಬಂದುದಾದರೂ ಹೇಗೆ? ಅಗೋ ಅಲ್ಲಿ ಲಾಸ್ಯವಾಗಿ ಬಳುಕುತ್ತಾ ನಲಿಯುತ್ತಾ ತುಂತುರು ತುಂತುರಾಗಿ ಮುತ್ತಿನ ಹನಿಗಳನ್ನು ಪ್ರೋಕ್ಷಿಸುತ್ತಿರುವ ಝರಿಯ ರಮಣೀಯತೆಯನ್ನೂ ಮೀರುವಂತಹ ಭಯಾನಕತೆ ವ್ಯಾಪಿಸಿದೆಯಲ್ಲಾ… Read more…