ಕೇಶ ಉದುರಿದಾಗ ಚಿಗುರುವಂತೆ ಮಾಡುವ ತೈಲ

ಬೊಕ್ಕ ತಲೆಯ ಜನರು ತಮ್ಮತಲೆಯ ಗತವೈಭವವನ್ನು ಮೆಲಕು ಹಾಕುತ್ತ ಏನೇನೋ ಚಿಕಿತ್ಸ ಮಾಡಿಸಿ ಮತ್ತೆ ಬೋಳಾಗುವ ಪರಿಯನ್ನು ಕಂಡು ವ್ಯಥೆಪಟ್ಟುಕೊಳ್ಳುತ್ತಲೇ ಇರುತ್ತಾರೆ. ಇಂದು ವಿಜ್ಞಾನ ಯುಗ. ತಂತ್ರಜ್ಞಾನದಿಂದ ಏನೆಲ್ಲವನ್ನು ಕಂಡು ಹಿಡಿದರೂ ಈ ಬೊಕ್ಕತಲೆಯ ಚಿಕಿತ್ಸೆಯನ್ನು ಮಾಡಿ ಪುನಃಕೂದಲು ಸಮೃದ್ಧಗೊಳ್ಳುವಂತೆ ಮಾಡಲು ಇನ್ನೂ ಪ್ರಯೋಗಗಳು ಆಗಿಲ್ಲ. ೫೦ ವರ್ಷದೊಳಗಿನ ಸ್ತ್ರೀ ಪುರುಷರಿಗೆ ಬೊಕ್ಕತಲೆಯಾದರೆ ಅಂಥವಹರಿಗೆ ಒಬ್ಬ ಸಾಮಾನ್ಯರು ಒಂದು ತೈಲವನ್ನು ಕಂಡು ಹಿಡಿದಿದ್ದಾರೆ. ಇದು ಇವರ ಇತ್ತೀಚಿನ ಶೋಧನೆ, ಮೇಲ್ನೋಟದಲ್ಲಿ ‘ಅರಳೆಕಾಯಿ ಪಾಂಡಿತ್ಯ’ವೆಂದಾದರೂ ಇದರಲ್ಲಿಯೂ ವೈಜ್ಞಾನಿಕ ಕ್ರಿಯೆಗಳು ನಡೆದೇ ಕೂದಲುಗಳು ಅಂಕುರಿಸುತ್ತವೆ, ಎಂಬುದು ಸತ್ಯ.

ಸದ್ಯ ಸಾಗರದ ನಾರಾಯಣ ಬಂಢಾರಿ ವೃತ್ತಿಯಲ್ಲಿ ಕ್ಷೌರಿಕ ೪೦ ವರ್ಷಗಳಿಂದಲೂ ಉದ್ಯೋಗ ಮಾಡುತ್ತಿದ್ದ ಇವರು ಇತ್ತೀಚೆಗೆ ಗಿಡಮೂಲಿಕೆಗಳ ಸಂಗ್ರಹದಿಂದ ತೈಲವೊಂದನ್ನು ಕಂಡು ಹಿಡಿದು ಪ್ರಯೋಗಿಸಿ ಯಶಸ್ವಿಯಾದರು. ಈ ತೈಲದ ಹೆಸರು “ಕನಕ ಸಿಂಹಾದ್ರಿತೈಲ”. ಈಗಾಗಲೇ ಸಾವಿರಾರು ಜನ ಇದನ್ನು ಉಪಯೋಗಿಸಿ ಯಶಸ್ವಿಯಾಗಿದ್ದಾರೆ. ಸ್ನಾನದ ನಂತರ ದಿನ ಬಿಟ್ಟು ದಿನ ಹೀಗೆ ೪ ಬಾಟಲ್ ಮುಗಿಯುವವರೆಗೂ ಹಚ್ಚಿದರೆ ಕೇಶಗಳು ಪುನರ್‌ಸೃಷ್ಟಿಗೊಳ್ಳುತ್ತವೆ. ಇದರ ತಯಾರಿಕೆಯ ಮೂಲವನ್ನು ನಾರಾಯಣ ಬಂಢಾರಿ ಹೇಳಿಲ್ಲ. ಕೆಲವು ವಿದೇಶಿಯರೂ ಕೂಡ ಈ ತೈಲವನ್ನು ಕೊಂಡೊಯ್ದಿದ್ದಾರೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದಿಕ್ಕು
Next post ಲೊರೇನ್

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

cheap jordans|wholesale air max|wholesale jordans|wholesale jewelry|wholesale jerseys