Home / ಲೇಖನ / ವಿಜ್ಞಾನ / ಕೇಶ ಉದುರಿದಾಗ ಚಿಗುರುವಂತೆ ಮಾಡುವ ತೈಲ

ಕೇಶ ಉದುರಿದಾಗ ಚಿಗುರುವಂತೆ ಮಾಡುವ ತೈಲ

ಬೊಕ್ಕ ತಲೆಯ ಜನರು ತಮ್ಮತಲೆಯ ಗತವೈಭವವನ್ನು ಮೆಲಕು ಹಾಕುತ್ತ ಏನೇನೋ ಚಿಕಿತ್ಸ ಮಾಡಿಸಿ ಮತ್ತೆ ಬೋಳಾಗುವ ಪರಿಯನ್ನು ಕಂಡು ವ್ಯಥೆಪಟ್ಟುಕೊಳ್ಳುತ್ತಲೇ ಇರುತ್ತಾರೆ. ಇಂದು ವಿಜ್ಞಾನ ಯುಗ. ತಂತ್ರಜ್ಞಾನದಿಂದ ಏನೆಲ್ಲವನ್ನು ಕಂಡು ಹಿಡಿದರೂ ಈ ಬೊಕ್ಕತಲೆಯ ಚಿಕಿತ್ಸೆಯನ್ನು ಮಾಡಿ ಪುನಃಕೂದಲು ಸಮೃದ್ಧಗೊಳ್ಳುವಂತೆ ಮಾಡಲು ಇನ್ನೂ ಪ್ರಯೋಗಗಳು ಆಗಿಲ್ಲ. ೫೦ ವರ್ಷದೊಳಗಿನ ಸ್ತ್ರೀ ಪುರುಷರಿಗೆ ಬೊಕ್ಕತಲೆಯಾದರೆ ಅಂಥವಹರಿಗೆ ಒಬ್ಬ ಸಾಮಾನ್ಯರು ಒಂದು ತೈಲವನ್ನು ಕಂಡು ಹಿಡಿದಿದ್ದಾರೆ. ಇದು ಇವರ ಇತ್ತೀಚಿನ ಶೋಧನೆ, ಮೇಲ್ನೋಟದಲ್ಲಿ ‘ಅರಳೆಕಾಯಿ ಪಾಂಡಿತ್ಯ’ವೆಂದಾದರೂ ಇದರಲ್ಲಿಯೂ ವೈಜ್ಞಾನಿಕ ಕ್ರಿಯೆಗಳು ನಡೆದೇ ಕೂದಲುಗಳು ಅಂಕುರಿಸುತ್ತವೆ, ಎಂಬುದು ಸತ್ಯ.

ಸದ್ಯ ಸಾಗರದ ನಾರಾಯಣ ಬಂಢಾರಿ ವೃತ್ತಿಯಲ್ಲಿ ಕ್ಷೌರಿಕ ೪೦ ವರ್ಷಗಳಿಂದಲೂ ಉದ್ಯೋಗ ಮಾಡುತ್ತಿದ್ದ ಇವರು ಇತ್ತೀಚೆಗೆ ಗಿಡಮೂಲಿಕೆಗಳ ಸಂಗ್ರಹದಿಂದ ತೈಲವೊಂದನ್ನು ಕಂಡು ಹಿಡಿದು ಪ್ರಯೋಗಿಸಿ ಯಶಸ್ವಿಯಾದರು. ಈ ತೈಲದ ಹೆಸರು “ಕನಕ ಸಿಂಹಾದ್ರಿತೈಲ”. ಈಗಾಗಲೇ ಸಾವಿರಾರು ಜನ ಇದನ್ನು ಉಪಯೋಗಿಸಿ ಯಶಸ್ವಿಯಾಗಿದ್ದಾರೆ. ಸ್ನಾನದ ನಂತರ ದಿನ ಬಿಟ್ಟು ದಿನ ಹೀಗೆ ೪ ಬಾಟಲ್ ಮುಗಿಯುವವರೆಗೂ ಹಚ್ಚಿದರೆ ಕೇಶಗಳು ಪುನರ್‌ಸೃಷ್ಟಿಗೊಳ್ಳುತ್ತವೆ. ಇದರ ತಯಾರಿಕೆಯ ಮೂಲವನ್ನು ನಾರಾಯಣ ಬಂಢಾರಿ ಹೇಳಿಲ್ಲ. ಕೆಲವು ವಿದೇಶಿಯರೂ ಕೂಡ ಈ ತೈಲವನ್ನು ಕೊಂಡೊಯ್ದಿದ್ದಾರೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...