Home / ಲೇಖನ / ವಿಜ್ಞಾನ / ಗುರುಭ್ಯೋನಮಃ

ಗುರುಭ್ಯೋನಮಃ

ಚಿತ್ರ: ಡೇವಿಡ್ ಮಾರ್ಕ್
ಚಿತ್ರ: ಡೇವಿಡ್ ಮಾರ್ಕ್

ನಮ್ಮ ಪರಂಪರೆಯುದ್ದಕ್ಕೂ ‘ಗುರು’ ಎಂಬ ಪದವನ್ನು ಶ್ರೇಷ್ಠವೆಂದು ಬಗೆದು ಅದಕ್ಕೆ ಉನ್ನತ ಸ್ಥಾನಮಾನಗಳನ್ನು ಕಲ್ಪಿಸಿದೆ. ‘ಗುರು’ ಎಂದರೆ ದೊಡ್ಡದೆಂದೇ ಇಂದಿನ ಮಾನವ ಭೌತಿಕ ಜಗತ್ತಿನಲ್ಲಿ ಪೂಜ್ಯ ಭಾವನೆಯನ್ನು ಕೊಡುತ್ತಾ ಬಂದಿದಾನೆ. ‘ಗುರು’ ಎಂಬುವುದು ಸೂರ್ಯನ ಸುತ್ತಲೂ ಸುತ್ತುತ್ತಿರುವ ಅತ್ಯಂತ ದೊಡ್ಡ ಗ್ರಹ. ನಾವು ವಾಸಿಸುವ ಅಥವಾ ಇತರ ಗ್ರಹಗಳಿಗಿಂತಲೂ ಅತ್ಯಂತ ದೊಡ್ಡದಾಗಿದ್ದರಿಂದ ಭೌತಿಕ ಜಗತ್ತಿನಲ್ಲಿಯೂ ಈ ‘ಗುರು’ ಪದವು ಮೇಲ್ಮಟ್ಟದ್ದಾಗಿ ಬೆಳೆಯಿತು.

ಸೂರ್ಯಮಂಡಲದಲ್ಲಿ ಇದೊಂದು ವಿಶಿಷ್ಟವಾದ ಗ್ರ್‍ಅಹ. ಇದು ದೊಡ್ಡ ಗ್ರಹವೂ ಹೌದು ಚಿಕ್ಕ ಸೂರ್ಯಮಂಡಲವೂ ಹೌದು. ಇದಕ್ಕೆ ೧೧ಕ್ಕೂ ಕಡಿಮೆ ಇಲ್ಲದಷ್ಟು ಉಪಗ್ರಹಗಳಿವೆ. ಚಂದ್ರನಂತಹ ಅನೇಕ ಉಪಗ್ರಹಗಳು ಗುರುಗ್ರಹದ ಸುತ್ತಲೂ ಸುತ್ತುತ್ತಲಿವೆ. ೪ ಗ್ರಹಗಳು ಚಂದ್ರನಷ್ಟೇ ದೊಡ್ಡವಾಗಿವೆ. ಎರಡು ಉಪಗ್ರಹಗಳು ಕೇವಲ ೩೦ ಮೈಲಿಗಳ ವ್ಯಾಸವನ್ನು ಹೊಂದಿದ್ದರೆ, ಮೂರು ಗ್ರಹಗಳು ಕೇವಲ ೧೫ ಮೈಲಿಗಳ ವ್ಯಾಸವನ್ನು ಹೊಂದಿವೆ. ಗುರುಗ್ರಹದ ವ್ಯಾಸವು ಭೂಮಿಯ ವ್ಯಾಸಕ್ಕಿಂತಲೂ ೧,೩೦೦ ಪಟ್ಟು ದೊಡ್ಡದು. ಅಂದರೆ ಭೂಮಿಗಿಂತ ೩೬೭,೦೦೦,೦೦೦ ಮೈಲುಗಳ ಅಂತರದಲ್ಲಿದ್ದರೂ ಬರಿಗಣ್ಣಿಗೆ ಕಾಣುತ್ತದೆ. (ಕೆಲವೆಡೆ ಮಾತ್ರ) ಖಗೋಳ ಶಾಸ್ತ್ರಜ್ಞರು ಟೆಲಿಸ್ಕೋಪಿನಿಂದ ನೋಡಿದಾಗ ಗುರುಗ್ರಹಕ್ಕೆ ಕಪ್ಪುಪಟ್ಟಿಗಳು ಇರುವುದನ್ನು ಮತ್ತು ಅವು ವಲಯಗಳಿಂದ ಬೇರ್ಪಟ್ಟಿರುವುದನ್ನು ಕಂಡುಕೊಂಡಿದ್ದಾರೆ. ಈ ಪಟ್ಟಿಗಳು, ವಲಯಗಳು ಬದಲಾಗುತ್ತ ಇರುತ್ತವೆ. ಆಸಕ್ತಿಯ ವಿಷಯವೆಂದರೆ ಗುರುಗ್ರಹದ ಮೇಲೊಂದು ‘ಕೆಂಪುತಲೆ’ ಇದ್ದು ಅದು ಸು. ೩೦,೦೦೦ ಮೈಲುಗಳ ಉದ್ದ ಮತ್ತು ೮,೦೦೦ ಮೈಲುಗಳ ಅಗಲವನ್ನು ಹೊಂದಿದೆ. ಕಲೆ ಕೆಲವೊಮ್ಮೆ ಕಾಣಿಸುವುದೇ ಇಲ್ಲ, ಕೆಲವೊಮ್ಮೆ ಚಲಿಸುತ್ತಿರುವಂತೆ ಕಾಣಿಸುತ್ತದೆ.
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...