Home / ಕವನ / ಕವಿತೆ / ಇಂಕದವನ ಕವಿತೆ

ಇಂಕದವನ ಕವಿತೆ

‘ಸರ್ ಕವಿತೆ ಸಿರಿಯಸ್ ಅಗಿ ಇರಬೇಕಾ
ಅಥವಾ ಲೈಽಟ್ ಆಗಿ ಓದಿಬಿಡಬೇಕಾ…
ಅಂತ
ಅಪರೂಪಕ್ಕೆ ಸ್ಟೇಜ ಹತ್ತಿದ ಕವಿ ಸುಂದರೇಶು
ಎದುರುಸಾಲಿನಲ್ಲಿ ಕುಳಿತ
ತನ್ನ ೪-೫ ಸಂಕಲನಕ್ಕೆ ಮುನ್ನುಡಿ ಬರೆದ
ವಗೈರೆ ವಗೈರೆ ಕವಿಗಳಿಗೆ
ಚುಚ್ಚಿ ಚುಚ್ಚಿ ಎರಡೆರಡು ಸಲ ಕೇಳಿಯೇ ಬಿಟ್ಟ.

– ಬಂಡಾಯದವ ಬಂಡಾಯ ಎಬ್ಬಿಸು ಅಂದಿದ್ದ
– ನವ್ಯದವ ಸರಳ ಸೂಕ್ಷ್ಮವಾಗಿ ಹೇಳು ಅಂದಿದ್ದ
– ನವೋದಯದವ ಒಂದಿಷ್ಟು ಉಲ್ಟಾಪಲ್ಟಾ ಶಬ್ದಗಳನ್ನಿಡು ಅಂದಿದ್ದ
– ದಲಿತರವ ಹೇಳಿದ್ದ,
ಲೈಟ್ ಆಗಿಯೂ ಬೇಡ ಸಿರಿಯಸ್ಸಾಗಿಯೂ ಬೇಡ
ಒಬ್ಬೊಬ್ಬರನ್ನ ಅಟ್ಯಾಕ್ ಅಟ್ಯಾಕ್ ಮಾಡು ಅಂದಿದ್ದ
– ಸ್ತ್ರೀವಾದಿಯೊಬ್ಬಳು,
ಹೆಣ್ಣಿನ ಸೌಂದರ್ಯ ಅದೆಷ್ಟು ವರ್ಣಿಸಿದ್ದಿಯಪ್ಪಾ!
ಎಲ್ಲಾ ಸಮಸಮವಾಗಿಯೇ ಬರೆ, ಛೂ ಬಿಟ್ಟದ್ದಳು.

ಸುಂದರೇಶು ಸುಸ್ತಾಗಿದ್ದ
ಅವರವರ ಗುಣ ನಡತೆಗಳ
ಮುನ್ನುಡಿ ಹಿನ್ನುಡಿಗಳ ಸಲಹೆ ಓದಿ ಓದಿ.

ಆದರೂ ಕವಿಗೋಷ್ಠಿಯ ಅವಕಾಶ ಬಿಟ್ಟಾನೆಯೇ!
ಎಲ್ಲರ ಮನ ಗೆಲ್ಲಲೋ ಕೊಲ್ಲಲೋ
‘ಅವರವರ ಭಕುತಿಗೆ ಒಲೆಯುತಿಹನು
ಶಿವ’ ಎಂಬಂತೆ
ಅವರೆಲ್ಲ ಬಯಸಿದ ಮಾತು ಕತೆಗಳನು
ಝಾಲಾಡಿಸಿ ಬೇಸತ್ತು
ಕೊನೆಗೆ
ಎಲ್ಲರ ಸಲಹೆ ಸೂಚನೆ ಧಿಕ್ಕರಿಸಿ
ತಾನೂ ಒಬ್ಬ ವಿಶೇಷತೆ ಉಳಿಸಿಕೊಳ್ಳುವ
ಇಂಕದವನಾಗಿ (ಇಂ+ ಕ, ಇಂಗ್ಲಿಷ್‌+ಕನ್ನಡ)
ಇಂಕದ ಪದ್ಯ ಓದುತ್ತ
ಒಬೊಬ್ಬರನ್ನೇ ದುರುಗುಟ್ಟುತ್ತಿದ್ದ.
*****

Tagged:

Leave a Reply

Your email address will not be published. Required fields are marked *

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...