ಮಲಗೆನ್ನ ಮುದ್ದುಮರಿ

ಮಲಗೆನ್ನ ಮುದ್ದುಮರಿ ಚಿನ್ನ
ನಿದ್ದೆ ನೇವರಿಸುತಿದೆ ಕಣ್ಣ

ನಡುರಾತ್ರಿ ದಾಟುತಿದೆ ಗಡಿಯ
ಇರುಳು ಬಿಚ್ಚಿದೆ ಕಪ್ಪು ಜಡೆಯ
ಲೋಕವೇ ಮಲಗಿರಲು ಹೊದ್ದು
ಆಟ ಸುರುಮಾಡುವರೆ ಮುದ್ದು?

ಕಣ್ಣೆ ಇದು, ಕಾಂತಿಯಾ ಚಿಲುಮೆ
ಹುಣ್ಣಿಮೆಗು ಇಲ್ಲ ಈ ಹಿರಿಮೆ
ನಿನ್ನ ಕುಲು ಕುಲು ನಗೆಯ ಹನಿಯು
ಬೃಂದಾವನದ ಕೊಳಲ ಹನಿಯು

ಹೂವಿಗೂ ಮಿದುವಾದ ಹೆಜ್ಜೆ-ಆಹ
ಜೀವ ಝಲ್ಲೆನಿಸುವಾ ಗೆಜ್ಜೆ!
ನಿನ್ ತೂಗುವ ಭಾಗ್ಯಕೆಂದೇ
ತೊರೆದೆ ಮರಿ, ಮನೆ ಮಾರು ಲಜ್ಜೆ

ಮೂಗು ತಿದ್ದಿದಳೇನೊ ರಂಭೆ
ನಗಲು ಕಲಿಸಿದಳೋ ಜಗದಂಬೆ
ನನ್ನ ಮಗುವೇ? ನಾನೆ ನಂಬೆ, ದೇವಲೋಕದ್ದೆ ಈ ಗೊಂಬೆ?

ಜೀವದಾಳದ ಬಯಕೆ ನೀನು
ಜನುಮ ಜನುಮದ ಕನಸು ನೀನು
ಒಲುಮೆಯಿಂಪನು ಹೀರಿ ಬೆಳೆದ ಕೆಂಪುತೋಟದ ಕಂಪು ನೀನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ಯೆ
Next post ಮಂಥನ – ೩

ಸಣ್ಣ ಕತೆ

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…