ಮಲಗೆನ್ನ ಮುದ್ದುಮರಿ

ಮಲಗೆನ್ನ ಮುದ್ದುಮರಿ ಚಿನ್ನ
ನಿದ್ದೆ ನೇವರಿಸುತಿದೆ ಕಣ್ಣ

ನಡುರಾತ್ರಿ ದಾಟುತಿದೆ ಗಡಿಯ
ಇರುಳು ಬಿಚ್ಚಿದೆ ಕಪ್ಪು ಜಡೆಯ
ಲೋಕವೇ ಮಲಗಿರಲು ಹೊದ್ದು
ಆಟ ಸುರುಮಾಡುವರೆ ಮುದ್ದು?

ಕಣ್ಣೆ ಇದು, ಕಾಂತಿಯಾ ಚಿಲುಮೆ
ಹುಣ್ಣಿಮೆಗು ಇಲ್ಲ ಈ ಹಿರಿಮೆ
ನಿನ್ನ ಕುಲು ಕುಲು ನಗೆಯ ಹನಿಯು
ಬೃಂದಾವನದ ಕೊಳಲ ಹನಿಯು

ಹೂವಿಗೂ ಮಿದುವಾದ ಹೆಜ್ಜೆ-ಆಹ
ಜೀವ ಝಲ್ಲೆನಿಸುವಾ ಗೆಜ್ಜೆ!
ನಿನ್ ತೂಗುವ ಭಾಗ್ಯಕೆಂದೇ
ತೊರೆದೆ ಮರಿ, ಮನೆ ಮಾರು ಲಜ್ಜೆ

ಮೂಗು ತಿದ್ದಿದಳೇನೊ ರಂಭೆ
ನಗಲು ಕಲಿಸಿದಳೋ ಜಗದಂಬೆ
ನನ್ನ ಮಗುವೇ? ನಾನೆ ನಂಬೆ, ದೇವಲೋಕದ್ದೆ ಈ ಗೊಂಬೆ?

ಜೀವದಾಳದ ಬಯಕೆ ನೀನು
ಜನುಮ ಜನುಮದ ಕನಸು ನೀನು
ಒಲುಮೆಯಿಂಪನು ಹೀರಿ ಬೆಳೆದ ಕೆಂಪುತೋಟದ ಕಂಪು ನೀನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ಯೆ
Next post ಮಂಥನ – ೩

ಸಣ್ಣ ಕತೆ

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಮೇಷ್ಟ್ರು ರಂಗಪ್ಪ

    ಪ್ರಕರಣ ೫ ರಂಗಣ್ಣ ರೇಂಜಿನಲ್ಲಿ ಅಧಿಕಾರ ವಹಿಸಿ ನಾಲ್ಕು ತಿಂಗಳಾದುವು. ಸುಮಾರು ನಲವತ್ತು ಐವತ್ತು ಪಾಠಶಾಲೆಗಳ ತನಿಖೆ ಮತ್ತು ಭೇಟಿಗಳಿಂದ ಪ್ರಾಥಮಿಕ ವಿದ್ಯಾಭ್ಯಾಸದ ಸ್ಥಿತಿ ತಕ್ಕ ಮಟ್ಟಿಗೆ… Read more…