ಮಲಗೆನ್ನ ಮುದ್ದುಮರಿ

ಮಲಗೆನ್ನ ಮುದ್ದುಮರಿ ಚಿನ್ನ
ನಿದ್ದೆ ನೇವರಿಸುತಿದೆ ಕಣ್ಣ

ನಡುರಾತ್ರಿ ದಾಟುತಿದೆ ಗಡಿಯ
ಇರುಳು ಬಿಚ್ಚಿದೆ ಕಪ್ಪು ಜಡೆಯ
ಲೋಕವೇ ಮಲಗಿರಲು ಹೊದ್ದು
ಆಟ ಸುರುಮಾಡುವರೆ ಮುದ್ದು?

ಕಣ್ಣೆ ಇದು, ಕಾಂತಿಯಾ ಚಿಲುಮೆ
ಹುಣ್ಣಿಮೆಗು ಇಲ್ಲ ಈ ಹಿರಿಮೆ
ನಿನ್ನ ಕುಲು ಕುಲು ನಗೆಯ ಹನಿಯು
ಬೃಂದಾವನದ ಕೊಳಲ ಹನಿಯು

ಹೂವಿಗೂ ಮಿದುವಾದ ಹೆಜ್ಜೆ-ಆಹ
ಜೀವ ಝಲ್ಲೆನಿಸುವಾ ಗೆಜ್ಜೆ!
ನಿನ್ ತೂಗುವ ಭಾಗ್ಯಕೆಂದೇ
ತೊರೆದೆ ಮರಿ, ಮನೆ ಮಾರು ಲಜ್ಜೆ

ಮೂಗು ತಿದ್ದಿದಳೇನೊ ರಂಭೆ
ನಗಲು ಕಲಿಸಿದಳೋ ಜಗದಂಬೆ
ನನ್ನ ಮಗುವೇ? ನಾನೆ ನಂಬೆ, ದೇವಲೋಕದ್ದೆ ಈ ಗೊಂಬೆ?

ಜೀವದಾಳದ ಬಯಕೆ ನೀನು
ಜನುಮ ಜನುಮದ ಕನಸು ನೀನು
ಒಲುಮೆಯಿಂಪನು ಹೀರಿ ಬೆಳೆದ ಕೆಂಪುತೋಟದ ಕಂಪು ನೀನು!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ಯೆ
Next post ಮಂಥನ – ೩

ಸಣ್ಣ ಕತೆ

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys