ಶೇಖರ ಮತ್ತು ಶಂಕರ ಇಬ್ಬರೂ ಸ್ನೇಹಿತರು. ಒಂದು ದಿನ ಟೈಂಪಾಸ್ಗೆಂದು ಶೇಖರ ಸ್ನೇಹಿತನ ಮನೆಗೆ ಬಂದು ಆದೂ ಇದೂ ಮಾತನಾಡತೊಡಗಿದ.
ಶೇಖರ: ‘ನೀನು ಒಂದು ಹುಲಿಯ ಗುಹೆಗೆ ಹೋಗಿ ಆಲ್ಲಿ ಅರ್ಧಘಂಟೆ ಇದ್ದು ನಂತರ ಈಚೆಗೆ ಬರಬಲ್ಲಯಾ?’
ಶಂಕರ: “ಖಂಡಿತವಾಗಿ ಹುಲಿಗುಹೆಗೆ ಹೋಗಿ ಎಷ್ಟೊತ್ತು ಬೇಕಾದರೂ ಇದ್ದು ಬರಬಲ್ಲೆ. ನನಗೆ ಧೈರ್ಯ ಬೇಕಾದಷ್ಟು ಇದೆ. ಆದರೆ ಒಂದು ವಿಷಯ. ಹುಲಿ ಮಾತ್ರ ಆ ಸಮಯದಲ್ಲಿ ಗುಹೆಯೊಳಗೆ ಇರಬಾರದು, ಅಷ್ಟೆ!”
***