ಸಂತೆಯೊಳಗಿಳಿದಿದ್ದೇವೆ

ಆಗಲೇ ಇಟ್ಟ ನೂರಾರು
ಹೆಜ್ಜೆಗಳ ಮೇಲೆ
ನಾವೂ ಹೆಜ್ಜೆ ಇಟ್ಟು
ಸಂತೆಯೊಳಗಿಳಿದಿದ್ದೇವೆ
ಗೊಡ್ಡು ಸಂಪ್ರದಾಯಗಳ ಗಂಟು
ಕಟ್ಟಿ ಅಜ್ಜನ ಪೆಟ್ಟಿಗೆಯಲ್ಲಿ ಒಗೆದು
ಅಜ್ಜನ ಕಂಬಳಿ ಎಳೆದು ತುಳಿದು
ಸಂತೆಯೊಳಗಿಳಿದಿದ್ದೇವೆ.
ಹೆಜ್ಜೆಯ ಮೇಲೆ ಹೆಜ್ಜೆ
ಇಡುತ್ತಲೇ ಬಂದಿರುವ ನೀವು
ಕ್ಷುಲ್ಲಕ ವಿಚಾರಗಳ
ಪ್ರಕ್ಷುಬ್ದ ವಾತಾವರಣದ
ಸಂತೆಯಲ್ಲಿ ಬೇಕು ಬೇಡದಕ್ಕೆಲ್ಲ
ಕಣ್ಣು ಹಾಯಿಸುತ್ತ ಸತ್ವವನ್ನೇ
ಮರೆತ ತೊಂಡರಗೊಳಿಗಳಾಗಿ ತಿರುಗಿ
ಬೇಕೆಂದಿದ್ದೆಲ್ಲಾ ಬಯಸಿದಾಗ,
ಸಂತೆಯಲ್ಲಿಟ್ಟು ವಸ್ತುವೇ ನಿನಗೆ
ಹಣ ಕೊಟ್ಟು ನಿನ್ನಲ್ಲಿ ಬಿಕರಿಯಾಗುತ್ತದೆ
ಹಣವೂ ಕೊಟ್ಟು ತನ್ನನ್ನೂ ಕೊಟ್ಟಿರುವ
ಜೀವಂತ ಸಂತೆಯು
ನೀವು ಅಟ್ಟಹಾಸಗೈದು
ಮನೆಗೊಯ್ದಾಗ….
ಸಂತೆಯ ಈ ಬೊಂಬೆ
ಗಿಳಿಯಾಗಿ, ಆಡಿಸಿದಂತೆ ಆಡುವ
ದೊಂಬರಾಟದ ಹುಡುಗಿಯಾಗಿ
ಮುದುಡಿಕೊಳ್ಳುವಾಗ,
ನಿಮ್ಮ ರಾತ್ರಿಗಳ ವಿಕೃತ
ಕಾಮನೆಗಳು ತಲೆ ಬುಡವಿಲ್ಲದೇ
ಬಿಚ್ಚಿಕೊಳ್ಳುತ್ತವೆ.
ಬಿಕರಿಯಾದವರ ರಾತ್ರಿಗಳು ತಮ್ಮ
ಆಶಾವಾದಿ, ಕ್ರಾಂತಿವಾದಿ ಆದರ್ಶಗಳನ್ನೆಲ್ಲ
ಮೂಟೆಕಟ್ಟಿ ಜಲಪಾತಕ್ಕೆ
ತಳ್ಳುತ್ತಲೇ ಇದ್ದಾರೆ.
ಆಕಾಶದೆತ್ತರಕ್ಕೇರಿ…. ಸಮುದ್ರದಾಳಕ್ಕಿಳಿದು
ಜಗದಗಲ ಪರಿಚಯಿಸಿಕೊಂಡ ನಾವು
ನಮ್ಮ ಸಮಾನತೆಗೆ
ನಮ್ಮ ಭಾವನೆಗಳಿಗೆ ಸ್ಪಂದಿಸುವ
ನಮ್ಮೆತ್ತರಕ್ಕೇರುವ ನಿಮ್ಮನ್ನು
ಆರಿಸಿಕೊಳ್ಳಲು ಇಂದು
ಪೇಟೆಗೆ ಬಂದಿದ್ದೇವೆ.
ನಿಮ್ಮ ಮೊದಲ ಹೆಜ್ಜೆಗಳೆಲ್ಲ
ಸವೆದು ಹೋಗುವಂತೆ ಮಾಡಿ
ಅವುಗಳ ಮೇಲೀಗ ಕಾಂಕ್ರೀಟು ಹಾಕಿ
ಮೊನಚು ಚಪ್ಪಲಿಗಳು ಹಾಕಿಕೊಂಡು
ಸಂತೆಯೊಳಗಿಳಿದಿದ್ದೇವೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಲಾರ್‌ಜಂಗ್ ಮ್ಯೂಸಿಯಂನಿಂದ
Next post ದೋಸ್ತಿ

ಸಣ್ಣ ಕತೆ

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಏಡಿರಾಜ

    ಚಲೋ ವಂದು ಅರಸು ಮನಿ, ಗಂಡ-ಹೆಂಡ್ತಿ ದೊಡ್ಡ ಮನ್ತಾನದಲ್ ಆಳ್ಕತಿದ್ರು. ಆವಾಗೆ ಆ ಅರಸೂಗೆ ಗಂಡ್ ಹುಡ್ಗರಿಲ್ಲ. ಸಂತತ್ಯಲ್ಲ, ಇದ್ರದು ನಿಚ್ಚಾ ಕೆಲ್ಸಯೇನಪ್ಪ ಅರಸು ಹಿಂಡ್ತಿದು, ಮನಿ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…