Home / ಕವನ / ಕವಿತೆ / ಈ ಪೇಟೆಗೊಂದು ಒಳಚರಂಡಿ

ಈ ಪೇಟೆಗೊಂದು ಒಳಚರಂಡಿ

ಈ ಪೇಟೆಗೊಂದು ಒಳಚರಂಡಿ
ವ್ಯವಸ್ಥೆ ಬೇಕೆ ಬೇಡವೆ ಹೇಳಿ, ಹೋಟೆಲು
ಕಸಾಯಿಖಾನೆಗಳಿಂದ ಹರಿಯುವ ಕೊಚ್ಚೆ
ರೋಡಿನ ಮೇಲೆ ಹಪ್ಪುಗಟ್ಟುತ್ತದೆ.
ಜರಿಯಬೇಕೆ ಇಲ್ಲಿ, ಸಂಜೆಗೆ ಹಾಯಾಗಿ
ವಾಯು ಸೇವನೆಗೆ ಅಡ್ಡಾಡುವ ನಮ್ಮ ಮಂಡಿ?

ಹಾಗೇನೆ ಒಂದು ಸಾರ್ವಜನಿಕ ಮೂತ್ರ ದೊಡ್ಡಿ
ಇಲ್ಲದೆ ಬರುವ ಕಷ್ಟ ಎಲ್ಲರಿಗೂ ಗೊತ್ತು
ಈಗಿರುವ ಮರಗಿಡಗಳೆಷ್ಟು ಜನಕ್ಕೆ ಸಾಕು?
ಮುರಿದ ಗೋಡೆಗಳು ಬರುತ್ತವೆಷ್ಟು ದಿನಕ್ಕೆ?
ಒದ್ದೆಯಾಗಬೇಕೆ ಹೀಗೆ ಕ್ಷಣವೂ ಪುರುಸೊತ್ತಿಲ್ಲದ
ಆಧುನಿಕ ಮನುಷ್ಯನ ಚಡ್ಡಿ?

ಬೇಕು ಮುಂದರಿದ ಮಹಿಳೆಯರಿಗೊಂದು ಕ್ಲಬ್ಬು
ಒಂದು ಬ್ಯೂಟಿ ಸೆಲೂನು ಎಲ್ಲರಿಗೂ
ಒಂದು ಈಜುಕೊಳ.  ಹೊಸ ಆಶಯಗಳನ್ನು
ಒಳಗೊಳ್ಳುವುದಕ್ಕೆ, ಈ ಪೇಟೆಯ
ಸೌಂದರ್ಯಗಳನ್ನು ಹೆಚ್ಚಿಸುವುದಕ್ಕೆ, ಇದ್ದವರಿಗೆ
ಕರಗಿಸುವುದಕ್ಕೆ ತೊಡೆಗಳ ಕೊಬ್ಬು

ಬೇಡವೇ ಚಿಕ್ಕ ದೊಡ್ಡ ಪಾರ್ಕುಗಳು ಅಲ್ಲಲ್ಲಿ?
ಉದಾ: ಮುನಿಸಿಪಾಲಿಟಿ, ತಾಲೂಕಾಫೀಸು,
ತಲೆತಲಾಂತರಗಳ ಕುಟುಂಬಸ್ಥರ ಮನೆ
ಮುಂದೆ, ಎಲ್ಲರಿಗೂ ಕಾಣಿಸುವಂತೆ.  ಇಲ್ಲದಿದ್ದರೆ
ಈ ಸ್ಥಳೀಯ ಶ್ರೇಷ್ಠರ ಪ್ರತಿಮೆಗಳನ್ನು
ನಿಲ್ಲಿಸಬೇಕು ಯಾರು ಎಲ್ಲಿ?

ಕೊಡಬೇಕು ದೊಡ್ಡವರಿಗೆ ದೊಡ್ಡವರ ಸ್ಥಾನ
ಮುಂದಾಳುಗಳನ್ನು, ಮನೆತನ ಉಳ್ಳವರನ್ನು
ಗೌರವಿಸಬೇಕು, ಈ ನೆಲದ ದರಿದ್ರ ಧೂಳು
ಸೋಂಕದಂತೆ.  ಬರಿಗಾಲಲ್ಲಿ ನಡೆಯದವರನ್ನು
ಎಲ್ಲರೊಂದಿಗೆ ಮಲಗಿಸುವುದೆಂದರೇನು!
ಬೇಕು ಈ ಪೇಟೆಗೊಂದು ಸ್ಪೆಶಲ್ ಶ್ಮಶಾನ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...