Home / ಕವನ / ಕವಿತೆ / ಈ ಪೇಟೆಗೊಂದು ಒಳಚರಂಡಿ

ಈ ಪೇಟೆಗೊಂದು ಒಳಚರಂಡಿ

ಈ ಪೇಟೆಗೊಂದು ಒಳಚರಂಡಿ
ವ್ಯವಸ್ಥೆ ಬೇಕೆ ಬೇಡವೆ ಹೇಳಿ, ಹೋಟೆಲು
ಕಸಾಯಿಖಾನೆಗಳಿಂದ ಹರಿಯುವ ಕೊಚ್ಚೆ
ರೋಡಿನ ಮೇಲೆ ಹಪ್ಪುಗಟ್ಟುತ್ತದೆ.
ಜರಿಯಬೇಕೆ ಇಲ್ಲಿ, ಸಂಜೆಗೆ ಹಾಯಾಗಿ
ವಾಯು ಸೇವನೆಗೆ ಅಡ್ಡಾಡುವ ನಮ್ಮ ಮಂಡಿ?

ಹಾಗೇನೆ ಒಂದು ಸಾರ್ವಜನಿಕ ಮೂತ್ರ ದೊಡ್ಡಿ
ಇಲ್ಲದೆ ಬರುವ ಕಷ್ಟ ಎಲ್ಲರಿಗೂ ಗೊತ್ತು
ಈಗಿರುವ ಮರಗಿಡಗಳೆಷ್ಟು ಜನಕ್ಕೆ ಸಾಕು?
ಮುರಿದ ಗೋಡೆಗಳು ಬರುತ್ತವೆಷ್ಟು ದಿನಕ್ಕೆ?
ಒದ್ದೆಯಾಗಬೇಕೆ ಹೀಗೆ ಕ್ಷಣವೂ ಪುರುಸೊತ್ತಿಲ್ಲದ
ಆಧುನಿಕ ಮನುಷ್ಯನ ಚಡ್ಡಿ?

ಬೇಕು ಮುಂದರಿದ ಮಹಿಳೆಯರಿಗೊಂದು ಕ್ಲಬ್ಬು
ಒಂದು ಬ್ಯೂಟಿ ಸೆಲೂನು ಎಲ್ಲರಿಗೂ
ಒಂದು ಈಜುಕೊಳ.  ಹೊಸ ಆಶಯಗಳನ್ನು
ಒಳಗೊಳ್ಳುವುದಕ್ಕೆ, ಈ ಪೇಟೆಯ
ಸೌಂದರ್ಯಗಳನ್ನು ಹೆಚ್ಚಿಸುವುದಕ್ಕೆ, ಇದ್ದವರಿಗೆ
ಕರಗಿಸುವುದಕ್ಕೆ ತೊಡೆಗಳ ಕೊಬ್ಬು

ಬೇಡವೇ ಚಿಕ್ಕ ದೊಡ್ಡ ಪಾರ್ಕುಗಳು ಅಲ್ಲಲ್ಲಿ?
ಉದಾ: ಮುನಿಸಿಪಾಲಿಟಿ, ತಾಲೂಕಾಫೀಸು,
ತಲೆತಲಾಂತರಗಳ ಕುಟುಂಬಸ್ಥರ ಮನೆ
ಮುಂದೆ, ಎಲ್ಲರಿಗೂ ಕಾಣಿಸುವಂತೆ.  ಇಲ್ಲದಿದ್ದರೆ
ಈ ಸ್ಥಳೀಯ ಶ್ರೇಷ್ಠರ ಪ್ರತಿಮೆಗಳನ್ನು
ನಿಲ್ಲಿಸಬೇಕು ಯಾರು ಎಲ್ಲಿ?

ಕೊಡಬೇಕು ದೊಡ್ಡವರಿಗೆ ದೊಡ್ಡವರ ಸ್ಥಾನ
ಮುಂದಾಳುಗಳನ್ನು, ಮನೆತನ ಉಳ್ಳವರನ್ನು
ಗೌರವಿಸಬೇಕು, ಈ ನೆಲದ ದರಿದ್ರ ಧೂಳು
ಸೋಂಕದಂತೆ.  ಬರಿಗಾಲಲ್ಲಿ ನಡೆಯದವರನ್ನು
ಎಲ್ಲರೊಂದಿಗೆ ಮಲಗಿಸುವುದೆಂದರೇನು!
ಬೇಕು ಈ ಪೇಟೆಗೊಂದು ಸ್ಪೆಶಲ್ ಶ್ಮಶಾನ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...