Home / ಕವನ / ಕವಿತೆ / ರೂಪಾರಾಧನೆ

ರೂಪಾರಾಧನೆ

ಅವನೊಬ್ಬ ಕಲೆಗಾರ, ಕುಶಲಮತಿಗಳ ವೀರ;
ನಿಶಿತದಲಿ ಉದ್ಯಾನ – ಅದು ಅವನ ಬಿಡಾರ,
ನಟಶ್ರೇಷ್ಠನವನಲ್ಲ – ಕಲೆಗೆ ಅವನಿಗೆದುರಾರು ಇಲ್ಲ,
ಮನದಲ್ಲಿ ಬೆಳೆಸಿದ್ದ ಕಲೆಗಾರ ಒಲುವಿಂದ,
ಮೌನದೇವಿಯನು ಚಿತ್ರಿಸಲು ಬಗೆಯಿಂದ.
“ಕುಂಚಕೊನೆಯಲಿ ಮಿಂಚುದೇವಿಯನು”
ಕರೆಯಲೆತ್ನಿಸಿದ ಮೌನನಿಶಿತದಲಿ – ಸಂಧಾನತಾಣದಲಿ,
ಕಲೆಗಾರಬೀಡಿನಿಂದ.
ನಿಶ್ಚಲತೆ ಮೊಗದಲ್ಲಿ ತೋರಿತ್ತು ಶೋಭಾಂಕುರ,
ಕಲೆಗಾರನಾ ಉನ್ನತಧ್ಯೇಯಸಾಧನಾ-
ಮಾರ್ಗವ್ಯಾಪಾರಪಾರ.
ನಿಶಿತಸಮಯದಲಿ, ಸಂಧ್ಯಾಸಮೀರಣದಿ,
ಮಿನಿಗಿತ್ತುವರ್ಣ ಸ್ವರ್ಣವನುಹೊಳೆಸಿ.
ಮೌನದಲಿ ಕಲೆಗಾರ ನೆನೆದಿದ್ದ ದೇವಿಯನು,
ಒಮ್ಮೆ ದರ್ಶನವ ನೀಡೆಂದು ಚಿತ್ರಿಸಲು.
ನಿಶಿತದಲಿ ರೂಪಾರಾಧನೆ – ನಡೆದಿತ್ತು
ಉದ್ಯಾನದಲಿ, ಕಲೆಗಾರನಾಗುರಿಯ ಹಾದಿಯಲ್ಲಿ.

“ಕುಂಚಕೊನೆಯಲಿ ಮಿಂಚುದೇವಿಯನು”
ಕರೆಯಲೆತ್ನಿಸಿದ ಕಲೆಗಾರ!
ಮೌನನಿಶಿತದಲಿ, ಉದ್ಯಾನಬೀಡಿನಲಿ,
ಪೂಜಿಸಿದ ದೇವಿಯನು ತನ್ನ ತಾಮರೆತು.
ಕಲೆಗಾರನಾಪೂಜೆ ಮುಗಿದಿತ್ತು ನಿಶಿಯಲ್ಲಿ,
ಬಹುಕಾಲ ಧ್ಯಾನದಲಿ ಮೈಮರೆತಮೇಲೆ.
ಮೌನದೇವಿಯಪ್ರೀತಿ ಗಳಿಸಿದ್ದನವನು,
ದೀರ್ಘಸಾಧನೆಯೋಗ ನಿಶಿತದಲಿನಡಿಸಿ.
ಉದ್ಯಾನದಲಿ ಮಿನಿಗಿತ್ತು ನವಚೇತನ,
ಸಂಯಮಿಯ ದೇವತಾರ್ಚನೆಯಿಂದ.
ನಮಿಸಿದನು ಕಲೆಗಾರ, ದೇವಿಚರಣವಮುಟ್ಟಿ;
ನೆಮ್ಮದಿಯ ನಡುವಿನಲ್ಲಿ ಮುಳುಗಿ.
ಹರಿಸಿದಳು, ಮೌನದೇವಿ! ಕಲೆಗಾರನಾ ಕೃತಿಗೆ
ವೃಷ್ಟಿ ಧಾರೆಯ ಹರಿಸಿ ತೃಪ್ತಳಾಗಿ.
ಕಲೆಗಾರನಾಖಚಿತ ಕುಂಚದಕೆಲಸ ಮುಗಿಸಿತ್ತು
ರೂಪಾರಾಧನೆ – ಸ್ತುತ್ಯ ಪ್ರೇರಣೆ.
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...