ಅವನೊಬ್ಬ ಕಲೆಗಾರ, ಕುಶಲಮತಿಗಳ ವೀರ;
ನಿಶಿತದಲಿ ಉದ್ಯಾನ – ಅದು ಅವನ ಬಿಡಾರ,
ನಟಶ್ರೇಷ್ಠನವನಲ್ಲ – ಕಲೆಗೆ ಅವನಿಗೆದುರಾರು ಇಲ್ಲ,
ಮನದಲ್ಲಿ ಬೆಳೆಸಿದ್ದ ಕಲೆಗಾರ ಒಲುವಿಂದ,
ಮೌನದೇವಿಯನು ಚಿತ್ರಿಸಲು ಬಗೆಯಿಂದ.
“ಕುಂಚಕೊನೆಯಲಿ ಮಿಂಚುದೇವಿಯನು”
ಕರೆಯಲೆತ್ನಿಸಿದ ಮೌನನಿಶಿತದಲಿ – ಸಂಧಾನತಾಣದಲಿ,
ಕಲೆಗಾರಬೀಡಿನಿಂದ.
ನಿಶ್ಚಲತೆ ಮೊಗದಲ್ಲಿ ತೋರಿತ್ತು ಶೋಭಾಂಕುರ,
ಕಲೆಗಾರನಾ ಉನ್ನತಧ್ಯೇಯಸಾಧನಾ-
ಮಾರ್ಗವ್ಯಾಪಾರಪಾರ.
ನಿಶಿತಸಮಯದಲಿ, ಸಂಧ್ಯಾಸಮೀರಣದಿ,
ಮಿನಿಗಿತ್ತುವರ್ಣ ಸ್ವರ್ಣವನುಹೊಳೆಸಿ.
ಮೌನದಲಿ ಕಲೆಗಾರ ನೆನೆದಿದ್ದ ದೇವಿಯನು,
ಒಮ್ಮೆ ದರ್ಶನವ ನೀಡೆಂದು ಚಿತ್ರಿಸಲು.
ನಿಶಿತದಲಿ ರೂಪಾರಾಧನೆ – ನಡೆದಿತ್ತು
ಉದ್ಯಾನದಲಿ, ಕಲೆಗಾರನಾಗುರಿಯ ಹಾದಿಯಲ್ಲಿ.
“ಕುಂಚಕೊನೆಯಲಿ ಮಿಂಚುದೇವಿಯನು”
ಕರೆಯಲೆತ್ನಿಸಿದ ಕಲೆಗಾರ!
ಮೌನನಿಶಿತದಲಿ, ಉದ್ಯಾನಬೀಡಿನಲಿ,
ಪೂಜಿಸಿದ ದೇವಿಯನು ತನ್ನ ತಾಮರೆತು.
ಕಲೆಗಾರನಾಪೂಜೆ ಮುಗಿದಿತ್ತು ನಿಶಿಯಲ್ಲಿ,
ಬಹುಕಾಲ ಧ್ಯಾನದಲಿ ಮೈಮರೆತಮೇಲೆ.
ಮೌನದೇವಿಯಪ್ರೀತಿ ಗಳಿಸಿದ್ದನವನು,
ದೀರ್ಘಸಾಧನೆಯೋಗ ನಿಶಿತದಲಿನಡಿಸಿ.
ಉದ್ಯಾನದಲಿ ಮಿನಿಗಿತ್ತು ನವಚೇತನ,
ಸಂಯಮಿಯ ದೇವತಾರ್ಚನೆಯಿಂದ.
ನಮಿಸಿದನು ಕಲೆಗಾರ, ದೇವಿಚರಣವಮುಟ್ಟಿ;
ನೆಮ್ಮದಿಯ ನಡುವಿನಲ್ಲಿ ಮುಳುಗಿ.
ಹರಿಸಿದಳು, ಮೌನದೇವಿ! ಕಲೆಗಾರನಾ ಕೃತಿಗೆ
ವೃಷ್ಟಿ ಧಾರೆಯ ಹರಿಸಿ ತೃಪ್ತಳಾಗಿ.
ಕಲೆಗಾರನಾಖಚಿತ ಕುಂಚದಕೆಲಸ ಮುಗಿಸಿತ್ತು
ರೂಪಾರಾಧನೆ – ಸ್ತುತ್ಯ ಪ್ರೇರಣೆ.
*****









