Home / ಕವನ / ಕವಿತೆ / ಕುಚೇಲ!

ಕುಚೇಲ!

ಭಾಮಿನಿ

ಶ್ರೀರಮಾ ರಮಣೈಕ ಭಕ್ತನೆ!
ಚಾರು ಚರಿತ! ಕುಚೇಲ! ನಿನ್ನಯ-
ಸಾರ ಗುಣ ಗಣ ಯುಕ್ತ ಭಕ್ತಿಯ-
ನೆಂತು ಬಣ್ಣಿಪೆನು?

ವಾರಿಜೋದರ ದೇಹದಾ ನಿಜ
ಸಾರದಾಲಿಂಗನೆಯನಾ೦ತಿಹ
ಚಾರು ಸುಮನೋಹರ ಶರೀರವ-
ನೆಂತು ಚಿತ್ರಿಪೆನು? ೧

ಸಾದರದಿ ನೀನೆಲೆ ಸುದಾಮನೆ!
ಮಾಧವನ ಭವನಾಂತರುಲದಿ
ಹೋದ ಹೊತ್ತಿನ ಗಣನೆಯಿಲ್ಲದೆ,
ಹರಿಯ ಸರಿಸದಲಿ

ಮೋದದಲಿ ಮಾತಾಡುತಾಡುತ,
ಸೋದರರ ತೆರದಲ್ಲಿ ವಿಹರಿಸಿ,
ಸಾಧಿಸಿದ ಚಿತ್ರವದು ಮಾಸದು
ಹೃದಯ ಭಿತ್ತಿಯಲಿ. ೨

ಬಡತನದ ಕಡು ದುಗುಡದಿಂದಲಿ
ಸೆಡೆದು ಬಡವಾಗಿರುವ ಒಡಲದು
ಸಡಗರದಿ ಮಾಧವನು ಕೋಮಲ
ಮಸೃಣ ಕರತಳದಿ

ಕೊಡುವ ಅಂಗಸ್ಪರ್ಶ ಸುಖದಲಿ
ಪಡೆಯದೇ ರೋಮಾಂಚವನು ತಾ-
ನಡಿಗಡಿಗೆ ಪೇಳೀಗ ಭಕ್ತ ಸು-
ದಾಮ! ನನ್ನೊಡನೆ. ೩

ಕೆಲವು ಮನೆಯನು ತಿರಿದು ತಂದಿಹ,
ಅಳಿಲ ಸೇವೆಯ ಮಳಲಿನ೦ತಿಹ,
ಒಲುಮೆಯೊಲವಿನ ಕಾಣಿಕೆಯನವ-
ಲಕ್ಕಿಯನು ಮುದದಿ

ಲಲನೆಯಾ ‘ಕ್ಷುತ್‌ ಕ್ಷಾಮೆ’ ಯಿತ್ತಳು
ಸಲಿಗೆಯಲಿ ನಿನಗೆಂದು, ಕೃಷ್ಣನ
ಲಲಿತ ಸಂದರ್ಶನದಿ ಕಾಣಿಕೆ.
ಗೊಡಲು ಭಕ್ತಿಯಲಿ. ೪

ಅದನು ಹೆದರುತ ತ೦ದು, ಕೃಷ್ಣನ
ಪದತಲದೊಳರ್ಪಿಸದೆ, ಸುಮ್ಮನೆ
ಒದವಿದಾ ಸ೦ಕೋಚ ಭಾವದಿ
ಬಾಗಿ ನಿ೦ದಿರಲು,

ಸದಯ ಹೃದಯನು ಮಾಧವನು ನಿಜ
ಸದಮಲಾಂತಃಕರಣದಿಂದಲಿ
ಸೊದೆಯ ಸುರಿಸುವ ಸರಸ ವಚನವ-
ನಿಂತು ಪೇಳಿದನು:- ೫

“ಸಾಕು ಮನದನುತಾಪ, ಮಿತ್ರನೆ!
ಈ ಕಡೆಗೆ ನೀಡೆನಗೆ, ಮನದಲಿ
`ಕಾಕು ಬುದ್ಧಿಯ ಬಿಟ್ಟು, ಭಕ್ತಿಯ
ಕಾಣ್ಮೆಯನ್ನೀಗ.

ಏಕೆ ಸಂಶಯ? ಭಕ್ತ ಜನರು ವಿ-
ವೇಕದಿ೦ದಲಿ ಕೊಟ್ಟ ಪತ್ರವು,
ಆ ಕುಸುಮ, ಫಲ, ತೋಯ ತೃಪ್ತಿಯ-
ನೆಸಗುವುದು ನನಗೆ. ೬

“ಧನಿಕರರ್ಪಿಪ ವಿವಿಧ ವಸ್ತುಗ-
ಳನಿತರೊಳು ನನಗಿರದು ತೃಪ್ತಿಯು;
ಜನಕೆ ತೋರಿಪ ಹೊರಗಿನಾಡ೦-
ಬರೆದಿ ಫಲವೇನು?

ಮನವೊಲಿದು ಸಂಸ್ತುತಿಸಿ, ಸುರಿಯಿಪ
ಮನವ ಕರಗಿಪ ನಯನ ವಾರಿಯು
ನನಗೆ ಮನೆಯದು, ಭಕ್ತರಿಗೆ ನಾ-
ನೊಲಿವೆ; ಸತ್ಯವಿದು!” ೭

ಎಂದ ಮಾತನು ಕೇಳುತತ್ಯಾ-
ನಂದದಲಿ ನೀನಂದು ಶ್ರೀಗೋ-
ವಿಂದನಡಿದಾವರೆಗೆ ಪೊಡಮಡು-
ತಧಿಕ ಭಕ್ತಿಯಲಿ,

“ಇಂದಿರಾ ಮಂದಿರನೆ! ಭಕ್ತರ
ಬಂಧು ನೀಡುವೆ ನಿನಗೆ ನಾನಿಂ-
ದಂದದಲಿಯವಲಕ್ಕಿ ಬಡವನ
ಭಕ್ತಿ ಕಾಣಿಕೆಯ. ೮

“ಒ೦ದಿ ನೀನಿದರನ್ನು, ನನ್ನನು
ಮುಂದೆ ಕೃಪೆಯಲಿ ಸಲಹು. ಬೇಡುವೆ,”
ನೆಂದು ಕಂಠದೊಳುಣ್ಮೆ ಗದ್ಗದ
ದನಿಯು, ನಯನದಲಿ

ಸಂದಿರಲು ಸಂತಸದ ಕ೦ಬನಿ,
ನಿಂದಿರಲು ರೋಮಾಂಚ ದೇಹದಿ,
ಮುಂದೆಯವಲಕ್ಕಿಯನು ಬಿಚ್ಚಿದೆ.
ಧನ್ಯ ನೀನಿಂದು! ೯
*****
೧೯೩೩

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...