ಕನ್ನಡದನ್ನವ ಉಂಡವರೇ-ನೀವ್
ಕನ್ನಡಿಗರು ಆಗಿ
ಕಾವೇರಿಯನು ಕುಡಿದವರೇ-ನೀವ್
ನಮ್ಮಲಿ ಒಂದಾಗಿ
ಅನ್ಯ ಭಾಷೆಯನು ನುಡಿವವರೆ
ಕಲಿಯಿರಿ ಕನ್ನಡವ
ಕರುನಾಡಿನ ಈ ನೆಲದಲ್ಲಿ
ಮೆರೆಸಿರಿ ಸದ್ಗುಣವ
ಕರ್ನಾಟದಲಿ ನಿಂತವರೆ
ಕಾಯಿರಿ ಕನ್ನಡವ
ಉಳಿಸುವ ಬೆಳೆಸುವ ನಿಟ್ಟಿನಲಿ
ತೋರಿ ನಿಮ್ಮ ನಿಲುವ
ತಾಯ್ನಾಡುಗಳನು ತೊರೆದವರೆ
ಕನ್ನಡಕೇ ಮನ ಸಲಿಸಿ
ಇಲ್ಲಿಯ ಮಣ್ಣನು ತಿಳಿಯುತಲಿ
ಅಭಿಮಾನವ ಸೂಸಿ
ಅರಿಯುತ ಬೆರೆಯುತ ಸೋದರರೆ
ಬನ್ನಿರಿ ಒಂದಾಗಿ
ಭುವನೇಶ್ವರಿಯ ತೇರೆಳೆವ
ಭಿನ್ನತೆಯನು ನೀಗಿ
*****