ಇಲ್ಲ

ಅಂಗಿಯೊಳ ಅಂಗಿಯಲ್ಲಡಗಿರುವ ಇವನು
ಒಂದೊಂದೇ ಪದರ ಕಳಚಿ
ತನ್ನ ಬೆಳ್ಳುಳ್ಳಿ ಮುಖವನ್ನು ತೋರಿಸಲಿಲ್ಲ
ಅಥವಾ ಬಿಚ್ಚೀ ಬಿಚ್ಚೀ ಉಳ್ಳಾಗಡ್ಡೆಯಂತೆ
ಬಟ್ಟ ಬಯಲಾಗಲಿಲ್ಲ
ಬರೀ ಕಲ್ಲು ಕೆಸರುಗಳೇ ತುಂಬಿದ
ಸರೋವರದ ತಳದಲ್ಲಿ ರತ್ನ ಮುತ್ತುಗಳು
ಹೊಳೆಯಲೆ ಇಲ್ಲ
ಕತ್ತರಿ ಕೋಲುಗಳಿಗೆ ಸಿಕ್ಕಿ ಮೋಟಾದ
ಇವನ ಜೀವವೃಕ್ಷಕ್ಕೆ
ಚೈತನ್ಯದ ಕೊಂಬೆರೆಂಬೆಗಳೊಡೆಯಲೆ ಇಲ್ಲ
ಚೆಲುವಿನೆಲೆ ಹೂ ಹಣ್ಣುರಸ ಚಿಮ್ಮಲೇ ಇಲ್ಲ
ಆ ಹೂಗಳಿಗೆರಗುವ ದುಂಬಿಗಳಿಲ್ಲ
ಆ ಹಣ್ಣ ಕುಕ್ಕಿ ಸವಿಯೀಂಟುವ ಹಕ್ಕಿಗಳಿಲ್ಲ
ಆ ಕೊಂಬೆಗಳಲ್ಲಿ ಗೂಡು ಕಟ್ಟಿ ಕಲಕಲನಾದ ಹೊಮ್ಮಲೆ ಇಲ
ಕತ್ತಲ ಮೆತ್ತಿದೀ ಚಿತ್ರದಾಗಸದಲ್ಲಿ
ಚಿತ್ತಾರ ತಾರಗೆಗಳು ಮಿನುಗಲೆ ಇಲ್ಲ
ತಂಗದಿರ ಚಂದಿರನು ಆಡಲೆ ಇಲ್ಲ
ಬಲವಂತ ಬಾಯಿ ಹೊಲಿದ ಮೌನದಿಂದ
ಹಿಗ್ಗಿನ ಹಾಡೊಂದೂ ಸೆಲೆಯೊಡೆಯಲಿಲ್ಲ
ಮುಖ ಮುಚ್ಚಿದ ಮಬ್ಬು ಮೋಡದಂಚಿಗೆ
ತಿಳಿನಗೆಯ ತೆರೆಮಿಂಚು ಸುಳಿಯಲೆ ಇಲ್ಲ
ಬಗೆ ಮೊಗ್ಗು ಗಾಳಿಗೆದೆಯೊಡ್ಡಲರಳಲೆ ಇಲ್ಲ
ನುಸಿವಿಡಿದ ಮತಿಯಲ್ಲಿ ಚಿಕ್ಕೆ ಮೊಗ್ಗೆಯ ಸಾಲು
ಥಳಥಳಿಸಿ ಕಸವನ್ನು ಕಳೆಯಲೆ ಇಲ್ಲ
ಕುಳಿತು ಕೈಕಾಲು ಸೇದಿಹೋದ ಇವನ ನಡೆ
ನೂರಾರು ನರ್ತನ ಲೀಲೆಗಳ ಮೆರೆಯಲಿಲ್ಲ
ಮನಸಿನೊಳ ಮಂದಾರ ತಳ ಬಿಟ್ಟು ಮೇಲೆ ಬಂದು
ನೀರ ಮೇಲಲೆಗಳನು ಚುಂಬಿಸಲೆ ಇಲ್ಲ
ಬೆಳೆಯುತ್ತಲೇ ಬರದಾದ ಕೊರಡು ಕೈಗಳು
ಯಾವ ಕೋಮಲತೆಯನೂ ತಬ್ಬಲಿಲ್ಲ ತಬ್ಬಿ ಉಬ್ಬಲಿಲ್ಲ
ಹಿಮದಂಥ ಬಿಗಿದ ತುಟಿಯು
ಯಾವ ಮಧುವನು ಹೀರಿ ಸವಿಯಲೆ ಇಲ್ಲ
ಬರೀ ಕರಿಮೋಡವಾದಿವನ ಒಡಲಿಂದ
ಹೆಪ್ಪಮುರಿವ ಹೆಬ್ಬಯಕೆ ಧಾರೆಯಾಗಿಳಿಯಲೆ ಇಲ್ಲ
ಇಳಿದರೂ ಯಾವ ಬೀಜವೂ ಬಾಯ್ದೆರೆದು ಮೃತ್ಯುವನಣಕಿಸಲಿಲ್ಲ
ಮರುಭೂಮಿಯ ಒಣಮರಳಿನಲ್ಲಿ
ಯಾವ ಹಸಿಮಣ್ಣು ಉಸಿರಾಡಿ ಚಿಗುರಲೆ ಇಲ್ಲ
ಅಲೆದಾಡಿದರೂ ಯಾವ ಕಣ್ಣಬಟ್ಟಲೂ ತುಂಬಿ ಹನಿಸಲೆ ಇಲ್ಲ
ಯಾವ ಗಂಟಲು ತುಂಬಿ ತಿನಿಸಲೆ ಇಲ್ಲ
ಯಾವ ಹಕ್ಕಿಯು ಹಾಡಿ ಹರಸಲೆ ಇಲ್ಲ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಳದ ಮಲ್ಲಿಗೆ
Next post ಕೊಮಾಸಾಮಿ ಕಾಮ್ ಕ ಚೋರು ಖಾನೆ ಮೆ ಜೋರು

ಸಣ್ಣ ಕತೆ

  • ಎರಡು ರೆಕ್ಕೆಗಳು

    ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದ ಆಕಾರದ ತುಂಬ ಒಂಥರಾ ಕೆಂಬಣ್ಣ ತುಂಬಿಕೊಂಡಿತ್ತು. ಆ ಸಂಜೆಯಲ್ಲಿ ತಣ್ಣನೆಯ ಗಾಳಿ ಆ ಭಾವನೆ ಬಂಡೆಯ ಕೋಟೆಯ ಮೇಲೆ ಹಾಯ್ದು ಹೋಯಿತು. ಎತ್ತರದ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

cheap jordans|wholesale air max|wholesale jordans|wholesale jewelry|wholesale jerseys