Home / ಕವನ / ಕವಿತೆ / ಶಿಕ್ಷಕ ದಿನಾಚರಣೆ

ಶಿಕ್ಷಕ ದಿನಾಚರಣೆ

ರಾಜ ಮಕುಟಗಳು ತಿರುಕರಂತಿದ್ದ ಗುರುಪಾದವ ಚುಂಬಿಸುತ್ತಿದ್ದವು
ಹರಮುನಿದರೂ ಗುರುಕಾಯ್ವನೆಂಬ ಹಿರಿಮೆ ಇತ್ತು
ಅರಿವೇ ಗುರುವಾಗಿ ಜ್ಞಾನ ಪ್ರಭೆ ಹರಿದಿದ್ದುಂಟು ಈ ನೆಲದಲ್ಲಿ

ಹೋಗಲಿ ಬಿಡಿ! ಇದೆಲ್ಲ ಒಮ್ಮೆ ಇದ್ದ
ತುರುಬನ್ನು ಈಗಿನ ಬೋಳು ತಲೆಯಲ್ಲಿ ಮುಟ್ಟಿಕೊಂಡಂತಾದೀತು

ಕಂಡದ್ದಾಡಿದರೆ ಕೆಂಡವಾದೀರಿ ನೀವು,
ಗಂಡೆಂದರೆ ಪುಲ್ಲಿಂಗ, ಹೆಣ್ಣೆಂದರೆ ಸ್ತ್ರೀಲಿಂಗ
ಮೇಷ್ಟ್ರು ಎಂದರೆ ನಪುಂಸಕ ಲಿಂಗವಾಗಿದ್ದೇವೆ
ಅಣ್ಣಂದಿರಾ ನಾವು ದನಕಾಯುವವರಿಗೆ
ಕುರಿಕಾಯುವವರಿಗೆ ಸಮವಾಗಿದ್ದೇವಲ್ಲರೋ!

ಕಾಗೆಗಳಡವಿಯಲ್ಲಿ ಕೂಗುವ ದನಿಯಿಲ್ಲದ ಕೋಗಿಲೆಗಳು ನಾವು
ಮೂಲೆಯಲ್ಲಿ ಕೂಡಿಸಿದ ಮೂದೇವಿಗಳು
ಬಾಯಲ್ಲಷ್ಟು ತುರುಕಿ ಕೂಡಿಸಿದ ಅಳುವ ಕೂಸುಗಳು ನಾವು
ಬಡಗಂಡನ ಬಾಳಿಗೊಗ್ಗದೆ ಬಡಿವಾರಗಿತ್ತಿಯರ ವೇಷಗಳಿಗೆ
ಕರುಬುತ್ತಾ ಹೊಟ್ಟೆ ಉರಿದುಕೊಳ್ಳುತ್ತೇವೆ
ಗುರುತ್ವ ಪೀಠವನಲಂಕರಿಸಿದ ಮಹಾ ತಿರಸ್ಕೃತರು ನಾವು
ಆದರ್ಶಶಿಖರದಿ ಹೊನ್ನಶೂಲಕ್ಕೇರಿಸಿದ್ದರೂ
ನೋವ ನುಂಗಲಾರದೆ ಶೂಲಮೂಲವ ಕೀಳಲೂ ಆಗದೆ
ಪರಿತಪಿಸುತ್ತಿದ್ದೇವೆ
ಕೊಳಚೆ ಕಡಲ ತಿಳಿಹೊಳೆಯಿಂದ ತೊಳೆಯುವ
ಕಗ್ಗಲ್ಲ ಕಾಡ ಶಿಲ್ಪನಂದನವಾಗಿಸಲು ಹೂವಿಂದ ಕಟೆಯುವ
ವೃಥಾ ಸೆಣಸಾಟ ನಮ್ಮದು |
ವಾಸ್ತವ ಕುರೂಪ ಮೈಗೆ ಹೊಂದದ ಬಟ್ಟೆಗಳ ಹೊಲಿದು
ಬಹಳವೆಂದರೆ ಗಿಳಿಗಳ, ಪುಸ್ತಕ ಹುಳುಗಳ
ಸರ್ಟಿಫೀಕೇಟು ಶಿಖಂಡಿಗಳ ಉತ್ಪಾದಿಸುತ್ತೇವೆ
ರಾಜಕಾರಣ ಪರಮಾತ್ಮನ ಕೈಗೊಂಬೆಗಳು ನಾವು
ಈ ನೆಲದ ಅಸಂಖ್ಯರಂತೆ ಆತನ ಯಂತ್ರದ ಹಲ್ಲುಗಳಾಗಿ
ನುಚ್ಚು ಕೊಚ್ಚುತಾ ತೌಡು ಕುಟ್ಟುತ್ತಾ ಕೊಳೆಯುತ್ತಿದೇವೆ.
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...