Home / ಕವನ / ಕವಿತೆ / ಶಿಕ್ಷಕ ದಿನಾಚರಣೆ

ಶಿಕ್ಷಕ ದಿನಾಚರಣೆ

ರಾಜ ಮಕುಟಗಳು ತಿರುಕರಂತಿದ್ದ ಗುರುಪಾದವ ಚುಂಬಿಸುತ್ತಿದ್ದವು
ಹರಮುನಿದರೂ ಗುರುಕಾಯ್ವನೆಂಬ ಹಿರಿಮೆ ಇತ್ತು
ಅರಿವೇ ಗುರುವಾಗಿ ಜ್ಞಾನ ಪ್ರಭೆ ಹರಿದಿದ್ದುಂಟು ಈ ನೆಲದಲ್ಲಿ

ಹೋಗಲಿ ಬಿಡಿ! ಇದೆಲ್ಲ ಒಮ್ಮೆ ಇದ್ದ
ತುರುಬನ್ನು ಈಗಿನ ಬೋಳು ತಲೆಯಲ್ಲಿ ಮುಟ್ಟಿಕೊಂಡಂತಾದೀತು

ಕಂಡದ್ದಾಡಿದರೆ ಕೆಂಡವಾದೀರಿ ನೀವು,
ಗಂಡೆಂದರೆ ಪುಲ್ಲಿಂಗ, ಹೆಣ್ಣೆಂದರೆ ಸ್ತ್ರೀಲಿಂಗ
ಮೇಷ್ಟ್ರು ಎಂದರೆ ನಪುಂಸಕ ಲಿಂಗವಾಗಿದ್ದೇವೆ
ಅಣ್ಣಂದಿರಾ ನಾವು ದನಕಾಯುವವರಿಗೆ
ಕುರಿಕಾಯುವವರಿಗೆ ಸಮವಾಗಿದ್ದೇವಲ್ಲರೋ!

ಕಾಗೆಗಳಡವಿಯಲ್ಲಿ ಕೂಗುವ ದನಿಯಿಲ್ಲದ ಕೋಗಿಲೆಗಳು ನಾವು
ಮೂಲೆಯಲ್ಲಿ ಕೂಡಿಸಿದ ಮೂದೇವಿಗಳು
ಬಾಯಲ್ಲಷ್ಟು ತುರುಕಿ ಕೂಡಿಸಿದ ಅಳುವ ಕೂಸುಗಳು ನಾವು
ಬಡಗಂಡನ ಬಾಳಿಗೊಗ್ಗದೆ ಬಡಿವಾರಗಿತ್ತಿಯರ ವೇಷಗಳಿಗೆ
ಕರುಬುತ್ತಾ ಹೊಟ್ಟೆ ಉರಿದುಕೊಳ್ಳುತ್ತೇವೆ
ಗುರುತ್ವ ಪೀಠವನಲಂಕರಿಸಿದ ಮಹಾ ತಿರಸ್ಕೃತರು ನಾವು
ಆದರ್ಶಶಿಖರದಿ ಹೊನ್ನಶೂಲಕ್ಕೇರಿಸಿದ್ದರೂ
ನೋವ ನುಂಗಲಾರದೆ ಶೂಲಮೂಲವ ಕೀಳಲೂ ಆಗದೆ
ಪರಿತಪಿಸುತ್ತಿದ್ದೇವೆ
ಕೊಳಚೆ ಕಡಲ ತಿಳಿಹೊಳೆಯಿಂದ ತೊಳೆಯುವ
ಕಗ್ಗಲ್ಲ ಕಾಡ ಶಿಲ್ಪನಂದನವಾಗಿಸಲು ಹೂವಿಂದ ಕಟೆಯುವ
ವೃಥಾ ಸೆಣಸಾಟ ನಮ್ಮದು |
ವಾಸ್ತವ ಕುರೂಪ ಮೈಗೆ ಹೊಂದದ ಬಟ್ಟೆಗಳ ಹೊಲಿದು
ಬಹಳವೆಂದರೆ ಗಿಳಿಗಳ, ಪುಸ್ತಕ ಹುಳುಗಳ
ಸರ್ಟಿಫೀಕೇಟು ಶಿಖಂಡಿಗಳ ಉತ್ಪಾದಿಸುತ್ತೇವೆ
ರಾಜಕಾರಣ ಪರಮಾತ್ಮನ ಕೈಗೊಂಬೆಗಳು ನಾವು
ಈ ನೆಲದ ಅಸಂಖ್ಯರಂತೆ ಆತನ ಯಂತ್ರದ ಹಲ್ಲುಗಳಾಗಿ
ನುಚ್ಚು ಕೊಚ್ಚುತಾ ತೌಡು ಕುಟ್ಟುತ್ತಾ ಕೊಳೆಯುತ್ತಿದೇವೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...