ಸತ್ಯ ಪಥದತ್ತ

ರಾಮಾ ನನ್ನ ಬಾಳಿಗೆ ನೀನಾಸರೆ
ನಿನ್ನ ಸಾನಿಧ್ಯವೇ ಪರಮ ಸುಖ
ಆಸೆಗಳು ಏಕೆ ಮತ್ತು ನಿರಾಸೆಗಳೇಕೆ
ನೀನಿರುವಾಗ ನನ್ನ ಹಗಲಿರುಳ ಸಖ

ಭವದ ಮೋಹ ಎನಗೆ ಕಾಡಿದೆ
ಹೆಜ್ಜೆಗೊಮ್ಮೆ ತನುವಿನ ಸೌಖ್ಯ ಬೇಡಿದೆ
ನನ್ನೊಳಗಿನ ಆತ್ಮನ ಮರೆತು
ವಿಷಯ ಸುಖಗಳತ್ತ ಮನ ಓಡಿದೆ

ಕ್ಷಣವೂ ಏಕಾಗ್ರವಾಗದ ಈ ಮನ
ಯಾವುದೇನೋ ಬೇಡಲು ನಿತ್ಯಕಾತರ
ರಾಮಾ ಮನದ ಮರ್‍ಕಟ ತನಕೆ ಬಂಧಿಸು
ಮರೆಸಿ ಬಿಡು ಹೀನಾಲೋಚನೆಯ ಪೂರ್‍ವೋತ್ತರ

ಮನದ ಯಾವ ಮೂಲೆಗೆ ಮೈಲಿಗೆ ಬೇಡ
ಮನದ ಹೊರ ನೋಟಕ್ಕೆ ಕಡಿವಾಣ ಹಾಕು
ಅಂತರದತ್ತ ಮನಕ್ಕೆ ತಿರುಗಿಸಲುಬೇಕು
ಸತ್‌ಚಿತ ಆನಂದ ಅನುಭವಿಸಬೇಕು

ಮನದಾಸೆ ಮಾಯೆಗೆ ನಿತ್ಯ ಬಲಿಬಿದ್ದು
ಅನೇಕ ಹುಟ್ಟು ಸಾವುಗಳಿಗೆ ಕಾರಣನಾದೆ
ಅಂತಲೆ ನಾನೀಗ ಮನ ಓಲೈಸಲಾರೆ
ಮಾಣಿಕ್ಯ ವಿಠಲನ ನೆನೆದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೪
Next post ಪಾಪಿಯ ಪಾಡು – ೭

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ದೊಡ್ಡವರು

    ಬೀದಿ ಬದಿಯ ಪುಸ್ತಕದ ಅಂಗಡಿ ಪ್ರಭಾಕರನನ್ನು ಅರಿಯದವರು ಬಹಳ ವಿರಳ. ತಳ್ಳೋ ಗಾಡಿಯ ಮೇಲೆ ದೊಡ್ಡ ಟ್ರಂಕನ್ನಿಟ್ಟು ನಿಧಾನವಾಗಿ ತಳ್ಳಿಕೊಂಡು ಬರುವ ಪ್ರಭಾಕರ ಕೆನರಾ ಬ್ಯಾಂಕಿನ ರಸ್ತೆಬದಿ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…