ಸತ್ಯ ಪಥದತ್ತ

ರಾಮಾ ನನ್ನ ಬಾಳಿಗೆ ನೀನಾಸರೆ
ನಿನ್ನ ಸಾನಿಧ್ಯವೇ ಪರಮ ಸುಖ
ಆಸೆಗಳು ಏಕೆ ಮತ್ತು ನಿರಾಸೆಗಳೇಕೆ
ನೀನಿರುವಾಗ ನನ್ನ ಹಗಲಿರುಳ ಸಖ

ಭವದ ಮೋಹ ಎನಗೆ ಕಾಡಿದೆ
ಹೆಜ್ಜೆಗೊಮ್ಮೆ ತನುವಿನ ಸೌಖ್ಯ ಬೇಡಿದೆ
ನನ್ನೊಳಗಿನ ಆತ್ಮನ ಮರೆತು
ವಿಷಯ ಸುಖಗಳತ್ತ ಮನ ಓಡಿದೆ

ಕ್ಷಣವೂ ಏಕಾಗ್ರವಾಗದ ಈ ಮನ
ಯಾವುದೇನೋ ಬೇಡಲು ನಿತ್ಯಕಾತರ
ರಾಮಾ ಮನದ ಮರ್‍ಕಟ ತನಕೆ ಬಂಧಿಸು
ಮರೆಸಿ ಬಿಡು ಹೀನಾಲೋಚನೆಯ ಪೂರ್‍ವೋತ್ತರ

ಮನದ ಯಾವ ಮೂಲೆಗೆ ಮೈಲಿಗೆ ಬೇಡ
ಮನದ ಹೊರ ನೋಟಕ್ಕೆ ಕಡಿವಾಣ ಹಾಕು
ಅಂತರದತ್ತ ಮನಕ್ಕೆ ತಿರುಗಿಸಲುಬೇಕು
ಸತ್‌ಚಿತ ಆನಂದ ಅನುಭವಿಸಬೇಕು

ಮನದಾಸೆ ಮಾಯೆಗೆ ನಿತ್ಯ ಬಲಿಬಿದ್ದು
ಅನೇಕ ಹುಟ್ಟು ಸಾವುಗಳಿಗೆ ಕಾರಣನಾದೆ
ಅಂತಲೆ ನಾನೀಗ ಮನ ಓಲೈಸಲಾರೆ
ಮಾಣಿಕ್ಯ ವಿಠಲನ ನೆನೆದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೪
Next post ಪಾಪಿಯ ಪಾಡು – ೭

ಸಣ್ಣ ಕತೆ

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

cheap jordans|wholesale air max|wholesale jordans|wholesale jewelry|wholesale jerseys