ನೋವಿನಿಂದಲೇ ಜ್ಞಾನ

ನೋವಿನಿಂದಲೇ ಜ್ಞಾನ

ಗಾಣದಲ್ಲಿ ಸಿಲುಕಿದ ಎಳ್ಳು
ನೋಯದೆ ಎಣ್ಣೆಯ ಬಿಡುವುದೆ
ಕಾಯದಲ್ಲಿ ಸಿಲುಕಿದ ಜೀವ
ನೋಯದ ಕರಣಂಗಳ ಬಿಡುವನೆ
ಭಾವದಲ್ಲಿ ಸಿಲುಕಿದ ಭ್ರಮೆ
ನೋಯದೆ ವಿಕಾರವ ಬಿಡುವುದೆ
ಇಂತಿವನರಿದಲ್ಲದೆ ಜ್ಞಾನಲೇಪವಿಲ್ಲ
ನಿಃಕಳಂಕ ಮಲ್ಲಿಕಾರ್ಜುನಾ

ವೇದ ಎಂದರೆ ಜ್ಞಾನವಂತೆ. ವೇದನೆ ಎಂದರೆ ನೋವು. ನೋಯದೆ ಜ್ಞಾನವಿಲ್ಲ. ವೇದನೆ ಇಲ್ಲದೆ ವೇದವಿಲ್ಲ. ಜೀವ ಮತ್ತು ದೇಹ ಬೇರೆ ಎಂದುಕೊಳ್ಳುವುದಾದರೆ ಎಳ್ಳಿನೊಳಗಿರುವ ಎಣ್ಣೆಯಂತೆ. ಗಾಣಕ್ಕೆ ಸಿಕ್ಕಿ ನೋಯದೆ ಎಣ್ಣೆ ಬಾರದು. ದೇಹ ನೋವಿಗೀಡಾಗದೆ ಜ್ಞಾನ ಸಿಗದು. ಮನಸ್ಸು, ಮಾತು, ದೇಹ ಇವು ಕರಣಗಳು. ಇವುಗಳ ಮಿತಿ ತಿಳಿಯುವುದು ನೋವಿನಿಂದಲೇ.

ಭಾವಗಳು ಭ್ರಮೆಗೆ ಕಾರಣ. ನಮಗೆ ಇಷ್ಟವಾದದ್ದು, ಪ್ರಿಯವಾದದ್ದು, ಅವು ಮಾತ್ರವೇ ಒಳ್ಳೆಯದು ಎಂದು ತಿಳಿಯುವುದು, ಅವನ್ನೇ ಆಶಿಸುವುದು, ಹೊಂದಲು ಬಯಸುವುದು ಇವೆಲ್ಲ ಸಹಜವೆಂದು ತೋರಿದರೂ ನಿಜವಾಗಿ ಭ್ರಮೆಗಳೇ. ಭ್ರಮೆಗಳು ಹುಟ್ಟುವುದೇ ಇಷ್ಟ, ಇಷ್ಟವಿಲ್ಲ, ಬೇಕು, ಬೇಡ, ಇತ್ಯಾದಿ ಭಾವಗಳಿಂದ. ನೋವಿನಿಂದ ಮಾತ್ರವೇ ಇಂಥ ಭ್ರಮೆ ಇಲ್ಲವಾಗುವುದು. ನೋವನ್ನು ತಿಳಿಯದಿದ್ದರೆ ಜ್ಞಾನದ ಲೇಪ ಇಲ್ಲ. ಲೇಪ ಅಂದರೆ ಮುಲಾಮು ಕೂಡ ಹೌದು. ನೋವಿಗೆ ಔಷಧ ತಿಳಿವಳಿಕೆಯೊಂದೇ.

`ನನಗೇ ಯಾಕೆ ಈ ಕಷ್ಟ, ಈ ನೋವು?’ ಎಂದು ಸಾವಿರ ಸಲ ಅಂದುಕೊಂಡಿರುತ್ತೇವೆ. ಅಂದುಕೊಂಡಿರುತ್ತೇವೆ, ಅಷ್ಟೆ. ಆ ನೋವನ್ನೇ ತಿಳಿವಳಿಕೆಯ ಲೇಪಮಾಡಿಕೊಳ್ಳುವುದು ಅಗತ್ಯ ಎಂದು ಮೋಳಿಗೆ ಮಾರಯ್ಯನ ಈ ವಚನ ಹೇಳುತ್ತದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾತ್ಮರು
Next post ಉಮರನ ಒಸಗೆ – ೨

ಸಣ್ಣ ಕತೆ

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

cheap jordans|wholesale air max|wholesale jordans|wholesale jewelry|wholesale jerseys