ದರುಶನಕ್ಕೆ

ರಾಮ ನಿನ್ನ ನೆನೆದು ನೆನೆದು
ನಾನು ತಣ್ಣನೆ ನೆಂದಿರುವೆ
ನಿನ್ನ ಕೃಪಾ ಬಿಸಿ ತಾಟುವುದೆಂದು
ನಿನ್ನ ಅಡಿದಾವರೆಯಲಿ ಬಂದಿರುವೆ

ರಾಮ ನಿನ್ನ ಭಜಿಸಿ ಭಜಿಸಿ
ನಾನು ಆಸ್ತಿ ನಾಸ್ತಿಗಳಲಿ ಭಾಜಿಸಿರುವೆ
ನಿನ್ನ ಸಾಕ್ಷಾತ್ಕಾರದ ಬೆಳದಿಂಗಳಿಗಾಗಿ
ನಿತ್ಯ ನಾನು ಕೊರಗುತ್ತಿರುವೆ

ರಾಮಾ ನಿನ್ನ ಧ್ಯಾನಿಸಿ ಧ್ಯಾನಿಸಿ
ನಿನ್ನ ಮರೆತು ಧ್ಯಾನಿಸ್ಥರಾಗಿರುವೆ
ನಿನ್ನ ದರುಶನದ ಭಾಗ್ಯಕ್ಕಾಗಿ
ಚಾತಕ ಪಕ್ಷಿಯಂತೆ ಕಾಯುತ್ತಿರುವೆ

ರಾಮಾ ನಿನ್ನ ಕಾಣಲು ವ್ಯಾಕುಲದಿ
ನಾನು ಎಡಬಿಡದೆ ಆಲಾಪಿಸಿರುವೆ
ನಿನ್ನ ಪ್ರತ್ಯೆಕ್ಷ ಅನುಭೂತಿಯೇ
ಎನ್ನ ಹೃದಯಕ್ಕೆ ಅದು ಕೋರಿರುವೆ

ರಾಮಾ ನಿನ್ನ ಚಿದ್‌ಘನರೂಪಕ್ಕೆ
ಈ ನನ್ನ ನಯನವೆಂದು ನೋಡಲಿಹವು
ಆ ಭಾಗ್ಯದ ಗಳಿಗೆಗಳು ಕೂಡಿ
ಮಾಣಿಕ್ಯ ವಿಠಲನಿಗೆ ಬರಲಿಹವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೩
Next post ಪಾಪಿಯ ಪಾಡು – ೬

ಸಣ್ಣ ಕತೆ

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…