ಸುಮ

ರಾಮಾ ನಿನ್ನೆದುರಿನಲಿ ನಿಂತು
ರಾಗದಿಂದ ರೋದಿಸುತ್ತಿರುವೆ ನಾನು
ಅರಿಯಲಾಗದೆ ನಿ ನನ್ನಂತರಂಗ
ಮಾಡಲಾಗದ ನೀನು ಪಾಪಭಂಗ

ಹೇಳು ಹೇಳು ನಾನೆಲ್ಲಿ ತಪ್ಪಿರುವೆ
ಸ್ವಚ್ಛ ಆಸೆಗಳ ಕೂಪವೇ ಎನ್ನಲಿ
ಎನ್ನ ಪುಟ್ಟ ಹೃದಯದಲ್ಲಿ ಶ್ವೇತವಿಲ್ಲವೆ
ದುಕ್ಕ ಮೊರೆಗಳೆಲ್ಲ ಹುಸಿಯೇ ಕಣ್ಣಲಿ

ನಾನು ಕೃಪೆವಿಲ್ಲದ ಬಡವನೇನು
ರಾಮಾ ನೀನಿನ್ನು ಎನ್ನ ಕಾಡಿಸದಿರು
ನನ್ನ ನಡೆ ನುಡಿಗಳ ವೀಕ್ಷಿಸುತ್ತ ನಿ
ವ್ಯರ್ಥ ಜೀವನವೆಲ್ಲ ಆಡಿಸದಿರು

ರಾಮಾ ರಾಮ ಎಂಬ ಪ್ರಲೋಭನೆ
ಆಲಿಸು ನಿನ್ನೊಮ್ಮೆ ದರ್ಶಿಸಿ ಎನ್ನ
ನಿನ್ನೆದುರಿನಲ್ಲಿ ಹಾಸಿರುವೆ ಈ ಸೆರಗನ್ನ
ಕೃಪೆ ಭಿಕ್ಷೆ ನೀಡಿ ಎತ್ತಿಕೊ ಎನ್ನ

ಎನ್ನದೆಯಲಿ ಖಿನ್ನತೆ ಪಾಷಾಣವಿಟ್ಟು
ಮರೆಯಿಸು ಈ ಲೌಕಿಕ ಕುಸುಮ
ಮತ್ತೆ ಮತ್ತೆ ನಾನು ಭವಕೆ ಬಾರದಂತೆ
ಮಾಣಿಕ್ಯ ವಿಠಲನಿಗೆ ಈ ಸುಮ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಮರನ ಒಸಗೆ – ೨
Next post ಪಾಪಿಯ ಪಾಡು – ೫

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…