ಸೈನಿಕನಾಗುವೆ

ರಾಮು ಹಳ್ಳಿ ಬಾಲಕ
ಇಟ್ಟಿಹ ರಕ್ತದ ತಿಲಕ
ಅವನ ಆಶೆ ಸೈನಿಕ
ಆಗೋ ಮಾತು ಕೇಳಿ

ಅಪ್ಪ ಅಮ್ಮ ಓದಿಲ್ಲ
ದೇಶ ಅಂದರೆ ಗೊತ್ತಿಲ್ಲ
ನಾನು ಓದಲು ಕಲಿಸುವೆ
ದೇಶ ಭಕ್ತಿಯ ಬೆಳೆಸುವೆ

ನಿತ್ಯ ನಿಯಮಿತ ವ್ಯಾಯಾಮ
ದೇಹಕೆ ಹೊಸದು ಆಯಾಮ
ಎತ್ತರ ದಪ್ಪ ಬೆಳೆಯುವೆ
ಸೈನ್ಯಕೆ ಭರ್ತಿ ಆಗುವೆ

ಸಮವಸ್ತ್ರವನು ಧರಿಸುವೆ
ಕೈಯಲಿ ಗನ್ನನು ಹಿಡಿಯುವೆ
ಪಡೆವೆನು ಕೊಡುವ ತರಬೇತು
ಆಡುವುದಿಲ್ಲ ಬರಿ ಮಾತು

ಹಗಲಿರುಳೆನ್ನದೆ ಗಡಿಯನ್ನು
ಕಾಯುತ ತೀರಿಸುವೆ ಋಣವನ್ನು
ವೈರಿಯ ಸೊಲ್ಲನು ಅಡಗಿಸುವೆ
ದೇಶದ ಕೀರ್ತಿಯ ಮೆರೆಸುವೆ

ಶಾಂತಿ ಸಹನೆ ಸಹಬಾಳ್ವೆ
ನಮ್ಮಯ ಧೈಯವು ಗೆಲ್ಗೆ
ಬೆನ್ನಲಿ ಚೂರಿ ಹಾಕಿದರೆ
ತಂದು ಹಾಕುವೆ ಕೈಸೆರೆ

ಪ್ರಸಂಗ ಬಂದರೆ ಬಲಿದಾನ
ತಾಯಿಗಿಂತ ಜೀವ ಮಿಗಿಲೇನ?
ಮಾರ್ದನಿಗೊಳ್ಳಲಿ ಜೈಹಿಂದ್
ಇನ್‌ಕಿಲಾಬ್‌ ಜಿಂದಾಬಾದ್
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಂದಮಾಮ
Next post Thomas Hardy ಯ “The Return of the Native” ಸ್ವ-ಅಸ್ತಿತ್ವದ ನೆರಳು

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

cheap jordans|wholesale air max|wholesale jordans|wholesale jewelry|wholesale jerseys