ಕವಿತೆ ಹುಟ್ಟಿತೇ?

‘ಕವಿತೆ ಹುಟ್ಟಿತೇ?’
ಜೀವ ಬಾಯಾಗಿ
ಕಾತರದ ಕಣ್ಣಾಗಿ

ಸುಕೋಮಲ
ರೇಷಿಮೆಯ ಹುಳು
ಒದ್ದಾಡುತ್ತಿದೆ
ಮುಲುಗುಟ್ಟುತ್ತಾ
ನಿರ್ವಾತದ ಗೂಡಿನೊಳಗೇ
ಸುಡು ನೀರ ಕಾವಿಗೆ.

ದಾರದೆಳೆ
ಎಳೆ ಮೂಡಲು,
ಬೇರ್ಪಡಬೇಕು
ತನುವಿಗಂಟಿದ ತೊಗಲು,

ಇನ್ನೆಷ್ಟು
ಕುದಿಯಲೇರಿಳಿಯಬೇಕೋ
ಜೀವ ಹದವಾಗಲು?

ಕವಿತೆ ಹುಟ್ಟಿತೇ?
ಸುಮ್ಮನೆ!

ಪಾದಭಾರಕ್ಕೆ ನಲುಗಿ
ನೋಯಬಾರದು ಭೂಮಿ
ಉರಿದು ಸುಟ್ಟೀತು
ಒಡಲ ಬೀಜರಾಶಿ.
ಕರುಳ ಸೆರಗೊಡ್ಡಿ
ಬೇಡುತಿದೆ ಪ್ರಾಣ…..

ಬದುಕ ಹಂಬಲಿಸಿ
ಬಡಿವ ಕೈ ಕಾಲು ಸೋತು

ಈಗ ಒಂದೊಂದೇ…
ರೇಷಿಮೆಯ ಎಳೆ
ಸುರಳೀತ ಬಿಚ್ಚಿಕೊಳುತಾ…….
ತೆರೆದಿದೆ ಕವಿತೆ ಕಣ್ಣು !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇಶಕಾಲದ ಸಾಂಸ್ಕೃತಿಕ ರಾಜಕೀಯ
Next post ಸಂಸಾರ

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys