ಕವಿತೆ ಹುಟ್ಟಿತೇ?

‘ಕವಿತೆ ಹುಟ್ಟಿತೇ?’
ಜೀವ ಬಾಯಾಗಿ
ಕಾತರದ ಕಣ್ಣಾಗಿ

ಸುಕೋಮಲ
ರೇಷಿಮೆಯ ಹುಳು
ಒದ್ದಾಡುತ್ತಿದೆ
ಮುಲುಗುಟ್ಟುತ್ತಾ
ನಿರ್ವಾತದ ಗೂಡಿನೊಳಗೇ
ಸುಡು ನೀರ ಕಾವಿಗೆ.

ದಾರದೆಳೆ
ಎಳೆ ಮೂಡಲು,
ಬೇರ್ಪಡಬೇಕು
ತನುವಿಗಂಟಿದ ತೊಗಲು,

ಇನ್ನೆಷ್ಟು
ಕುದಿಯಲೇರಿಳಿಯಬೇಕೋ
ಜೀವ ಹದವಾಗಲು?

ಕವಿತೆ ಹುಟ್ಟಿತೇ?
ಸುಮ್ಮನೆ!

ಪಾದಭಾರಕ್ಕೆ ನಲುಗಿ
ನೋಯಬಾರದು ಭೂಮಿ
ಉರಿದು ಸುಟ್ಟೀತು
ಒಡಲ ಬೀಜರಾಶಿ.
ಕರುಳ ಸೆರಗೊಡ್ಡಿ
ಬೇಡುತಿದೆ ಪ್ರಾಣ…..

ಬದುಕ ಹಂಬಲಿಸಿ
ಬಡಿವ ಕೈ ಕಾಲು ಸೋತು

ಈಗ ಒಂದೊಂದೇ…
ರೇಷಿಮೆಯ ಎಳೆ
ಸುರಳೀತ ಬಿಚ್ಚಿಕೊಳುತಾ…….
ತೆರೆದಿದೆ ಕವಿತೆ ಕಣ್ಣು !
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೇಶಕಾಲದ ಸಾಂಸ್ಕೃತಿಕ ರಾಜಕೀಯ
Next post ಸಂಸಾರ

ಸಣ್ಣ ಕತೆ

  • ಮೈಥಿಲೀ

    "ಹಾಗಿದ್ದರೆ, ಪಾಪವೆಂದರೇನು ಗುರುಗಳೇ?" ಕಣ್ಣು ಮುಚ್ಚಿ ಧ್ಯಾನಾಸಕ್ತರಾದ ಯೋಗೀಶ್ವರ ವಿದ್ಯಾರಣ್ಯರು ಕಣ್ತೆರೆಯಲಿಲ್ಲ. ಅಪ್ಪನ ಪ್ರಶ್ನೆಗೆ ಉತ್ತರ ಕೊಡಲಿಲ್ಲ. ತೇಜಪುಂಜವಾದ ಗಂಭೀರವಾದ ಮುಖದ ಮೇಲೊಂದು ಮುಗುಳುನಗೆ ಸುಳಿಯಿತು ಅಷ್ಟೇ!… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…