Home / ಕವನ / ತತ್ವಪದ / ಭಗವದ್ಭಕ್ತಿ

ಭಗವದ್ಭಕ್ತಿ

ಭಗವದ್ಭಕ್ತಿಯ ಪಡೆಯಲುಬೇಕು
ಬಾಳನು ಸಫಲ ಮಾಡಲುಬೇಕು
ಇಹ ಸುಖ ವಿಷಯ ರಾಗ ಬಿಡಬೇಕು
ಆಧ್ಯಾತ್ಮ ಆನಂದ ಹೊಂದಲೆಬೇಕು

ಕಾಯಕ ಮಾಡುವಾಗ ಚಿತ್ತ ದೇವರಲ್ಲಿರಲಿ
ಹಲ್ಲು ನೋವಿನಂತೆ ನಿನ್ನ ಧ್ಯಾನವಿರಲಿ
ಕಷ್ಟವಿರಲಿ ಸುಖವಿರಲಿ ಸಮಭಾವ ಇರಲಿ
ಇಷ್ಟ ದೇವರಿಗೆ ಸದಾ ಸ್ಮರಣೆ ಇರಲಿ

ಹೋಮಾ ಪಕ್ಷಿ ಗಗನದಲ್ಲಿರುವಾಗಲೆ
ಸಂತತಿ ಮೊಟ್ಟೆ ತಾನು ಇಡುವಾಗಲೆ
ಭೂಮಿಗೆ ಜಾರುತ್ತಿರುವಂತೆ ಮರಿಯಾಗ್ವುದು
ಆ ಮರಿಯೇ ಆಕಾಶದತ್ತ ಹೋಗುವುದು

ಹೋಮಾ ಪಕ್ಷಿಯಂದದಿ ಮನುಜನಿರಬೇಕು
ಹುಟ್ಟುತ್ತಲೆ ಪರಮಾತ್ಮಗೆ ಧ್ಯಾನಿಸಬೇಕು
ಮನಸ್ಸು ಮೂಲೆಯಲ್ಲೂ ಭವ ರಂದ್ರವಿರಬಾರದು
ನೀನು ಗಳಿಸಿದ ಪುಣ್ಯ ಅಲ್ಲಿ ಸೋರಿಹೋಗ್ವುದು

ಸುಟ್ಟ ಹಗ್ಗದ ಹಾಣೆ ಅಹಂಕಾರ ವಿರಲಿ
ಗಾಳಿ ಬಿಟ್ಟರೆ ದರ್ಪ ಹಾರಿ ಹೋಗಿರಲಿ
ದೇವರ ಕೃಪೆಗಾಗಿ ಮನವು ಹಾತೊರೆಯಲಿ
ಮಾಣಿಕ್ಯ ವಿಠಲನಾಗಿ ಸಾರ್ಥಕ ಎನಿಸಲಿ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...