ಭಗವದ್ಭಕ್ತಿ

ಭಗವದ್ಭಕ್ತಿಯ ಪಡೆಯಲುಬೇಕು
ಬಾಳನು ಸಫಲ ಮಾಡಲುಬೇಕು
ಇಹ ಸುಖ ವಿಷಯ ರಾಗ ಬಿಡಬೇಕು
ಆಧ್ಯಾತ್ಮ ಆನಂದ ಹೊಂದಲೆಬೇಕು

ಕಾಯಕ ಮಾಡುವಾಗ ಚಿತ್ತ ದೇವರಲ್ಲಿರಲಿ
ಹಲ್ಲು ನೋವಿನಂತೆ ನಿನ್ನ ಧ್ಯಾನವಿರಲಿ
ಕಷ್ಟವಿರಲಿ ಸುಖವಿರಲಿ ಸಮಭಾವ ಇರಲಿ
ಇಷ್ಟ ದೇವರಿಗೆ ಸದಾ ಸ್ಮರಣೆ ಇರಲಿ

ಹೋಮಾ ಪಕ್ಷಿ ಗಗನದಲ್ಲಿರುವಾಗಲೆ
ಸಂತತಿ ಮೊಟ್ಟೆ ತಾನು ಇಡುವಾಗಲೆ
ಭೂಮಿಗೆ ಜಾರುತ್ತಿರುವಂತೆ ಮರಿಯಾಗ್ವುದು
ಆ ಮರಿಯೇ ಆಕಾಶದತ್ತ ಹೋಗುವುದು

ಹೋಮಾ ಪಕ್ಷಿಯಂದದಿ ಮನುಜನಿರಬೇಕು
ಹುಟ್ಟುತ್ತಲೆ ಪರಮಾತ್ಮಗೆ ಧ್ಯಾನಿಸಬೇಕು
ಮನಸ್ಸು ಮೂಲೆಯಲ್ಲೂ ಭವ ರಂದ್ರವಿರಬಾರದು
ನೀನು ಗಳಿಸಿದ ಪುಣ್ಯ ಅಲ್ಲಿ ಸೋರಿಹೋಗ್ವುದು

ಸುಟ್ಟ ಹಗ್ಗದ ಹಾಣೆ ಅಹಂಕಾರ ವಿರಲಿ
ಗಾಳಿ ಬಿಟ್ಟರೆ ದರ್ಪ ಹಾರಿ ಹೋಗಿರಲಿ
ದೇವರ ಕೃಪೆಗಾಗಿ ಮನವು ಹಾತೊರೆಯಲಿ
ಮಾಣಿಕ್ಯ ವಿಠಲನಾಗಿ ಸಾರ್ಥಕ ಎನಿಸಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೩೦
Next post ನಿನ್ನ ನೀನು ನಡೆಯೇ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಎರಡು ಪರಿವಾರಗಳು

    ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…