ಮೊದಲ ಪಾಠ

ಅ ಆ ಇ ಈ ಉ ಊ….
ಸ್ವರಗಳು ಇನ್ನೂ ಕೊರಳಲ್ಲೇ ಇವೆ

ಕ ಖ ಗ ಘ ಚ ಛ ಜ ಝ
ವ್ಯಂಜನಗಳು ಇನ್ನೂ ಬಾಯಲ್ಲೇ ಇವೆ

ಆಟ ಊಟ ಓಟ ಪಾಠ
ಬಣ್ಣ ಬಣ್ಣದ ಚಿತ್ರಗಳು
ಕಣ್ಣಲ್ಲಿ ಅಚ್ಚೊತ್ತಿ ನಿಂತಿವೆ

ಹಿಗ್ಗಿ ಹಿಗ್ಗಿ ನುಡಿಯುತ್ತಿದ್ದೆವು ಹತ್ತರ ಮಗ್ಗಿ
ಜಗ್ಗಿ ಜಗ್ಗಿ ನಿಲ್ಲಿಸುತ್ತಿದ್ದೆವು ಹದಿನೇಳರ ಮಗ್ಗಿ
ಕೂಡಿ ಕಳೆದು ಗುಣಿಸಿ ಭಾಗಿಸಿ
ತಾಳೆ ನೋಡಿ ನಿಸೂರಾಗಿ
ಎದೆಯುಬ್ಬಿಸಿ ನಡೆಯುತ್ತಿದ್ದೆವು ಗುಂಪಾಗಿ

ನಾಯಿ ಮರಿಗೆ ತಿಂಡಿ ಬೇಕೆ ಎಂದು
ಕೇಳಿ ಪುಟ್ಟಪೂರಾ ನಾವೇ ತಿಂದು
ಬಾರೆಲೆ ಹಕ್ಕಿ ಎಂದು ಗೋಗರೆದು ಕರೆದು
ಗೋವಿನ ಹಾಡಲ್ಲಿ ಕರಗಿ
ಪುಟ್ಟ ಕರುವಿನಂತೆ ಕಣ್ಣೀರಗರೆದು
ಪೆದ್ದಗುಂಡನ ಕತೆಯನ್ನು ಪವಿತ್ರ ಗ್ರಂಥದಂತೆ ಪಠಿಸಿ
ನಿದ್ದೆಗೆ ಜಾರುತ್ತಿದೆವು… ಹಾಯಾಗಿ…

ತಲೆ-ತಲೆಮಾರುಗಳಿಂದ ಅನ್ನ ನೀರು ಸೂರು-
ಉಸಿರೂಡಿದ ಕನ್ನಡ ಕಲ್ಪವೃಕ್ಷಕ್ಕೆ
ಕೊಡಲಿ ಬೀಸುತ್ತಿರುವ ಕಂದಮ್ಮಗಳೇ….
ನಿಮಗುಣಿಸಿದ್ದು ಎದೆಹಾಲೆ ? ಹಾಲಾಹಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಪಲ
Next post ರಂಗಣ್ಣನ ಕನಸಿನ ದಿನಗಳು – ೧೩

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys