ಮೊದಲ ಪಾಠ

ಅ ಆ ಇ ಈ ಉ ಊ….
ಸ್ವರಗಳು ಇನ್ನೂ ಕೊರಳಲ್ಲೇ ಇವೆ

ಕ ಖ ಗ ಘ ಚ ಛ ಜ ಝ
ವ್ಯಂಜನಗಳು ಇನ್ನೂ ಬಾಯಲ್ಲೇ ಇವೆ

ಆಟ ಊಟ ಓಟ ಪಾಠ
ಬಣ್ಣ ಬಣ್ಣದ ಚಿತ್ರಗಳು
ಕಣ್ಣಲ್ಲಿ ಅಚ್ಚೊತ್ತಿ ನಿಂತಿವೆ

ಹಿಗ್ಗಿ ಹಿಗ್ಗಿ ನುಡಿಯುತ್ತಿದ್ದೆವು ಹತ್ತರ ಮಗ್ಗಿ
ಜಗ್ಗಿ ಜಗ್ಗಿ ನಿಲ್ಲಿಸುತ್ತಿದ್ದೆವು ಹದಿನೇಳರ ಮಗ್ಗಿ
ಕೂಡಿ ಕಳೆದು ಗುಣಿಸಿ ಭಾಗಿಸಿ
ತಾಳೆ ನೋಡಿ ನಿಸೂರಾಗಿ
ಎದೆಯುಬ್ಬಿಸಿ ನಡೆಯುತ್ತಿದ್ದೆವು ಗುಂಪಾಗಿ

ನಾಯಿ ಮರಿಗೆ ತಿಂಡಿ ಬೇಕೆ ಎಂದು
ಕೇಳಿ ಪುಟ್ಟಪೂರಾ ನಾವೇ ತಿಂದು
ಬಾರೆಲೆ ಹಕ್ಕಿ ಎಂದು ಗೋಗರೆದು ಕರೆದು
ಗೋವಿನ ಹಾಡಲ್ಲಿ ಕರಗಿ
ಪುಟ್ಟ ಕರುವಿನಂತೆ ಕಣ್ಣೀರಗರೆದು
ಪೆದ್ದಗುಂಡನ ಕತೆಯನ್ನು ಪವಿತ್ರ ಗ್ರಂಥದಂತೆ ಪಠಿಸಿ
ನಿದ್ದೆಗೆ ಜಾರುತ್ತಿದೆವು… ಹಾಯಾಗಿ…

ತಲೆ-ತಲೆಮಾರುಗಳಿಂದ ಅನ್ನ ನೀರು ಸೂರು-
ಉಸಿರೂಡಿದ ಕನ್ನಡ ಕಲ್ಪವೃಕ್ಷಕ್ಕೆ
ಕೊಡಲಿ ಬೀಸುತ್ತಿರುವ ಕಂದಮ್ಮಗಳೇ….
ನಿಮಗುಣಿಸಿದ್ದು ಎದೆಹಾಲೆ ? ಹಾಲಾಹಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಪಲ
Next post ರಂಗಣ್ಣನ ಕನಸಿನ ದಿನಗಳು – ೧೩

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…