ನೆಲೆ

ಸುಲಿಗೆ ಸಾಮ್ರಾಜ್ಯದಲ್ಲಿ
ಅಟ್ಟಹಾಸ ಗೈಯುತ್ತಿರುವ
ದಟ್ಟ ಹೊಗೆಯಾಗುತ್ತಿರುವ
ಉದ್ದಿಮೆಪತಿಗಳ ಕಾರ್ಖನೆಗಳು
ಮಾಲೀನ್ಯದ ಪ್ರತೀಕಗಳು.

ರೋಗದ ಆಗರವಾಗಿ
ಔಷಧಿಗೂ ಕಾಸಿಲ್ಲದೇ
ಒದ್ದಾಡುವ ನನ್ನವರು
ಬದುಕೆಲ್ಲ ನೋವುಂಡು
ಪ್ರಾಣಿಗಳಂತೆ ಬೆಳೆದವರು.

ಗೋಳಿನ ಗೂಡಾದ
ಕೊಂಪೆ ಗುಡಿಸಲುಗಳ ನೋಡಿ,
ಮುಸಿಮುಸಿ ನಗುತ್ತಿರುವ
ಕೆಲವೇ ಎತ್ತರದ ಮಹಲುಗಳು
ಹಸಿದ ಹೊಟ್ಟೆಗಳ
ದಟ್ಟ ದಾರಿದ್ರ್ಯದ ಕೂಗು
ಬಂದೂಕಿನ ಕೆಂಗಣ್ಣಿಗೆ
ಹೆದರಿ ಮುದುರಿ ಮೂಲಿ
ಸೇರಿಕೊಂಡಿದೆ ನೋಡು.

ಅಸವರಾನತೆಯ ಹತ್ತಿಕ್ಕಿ
ಶೋಷಿತರ ಧ್ವನಿಯಾಗು
ಸತ್ತಪ್ರೇತಗಳ ಅತ್ಮಕ್ಕೆ ನೀನು
ಬಡಿದೆಬ್ಬಿಸಿ ಮಿಡಿಯುವಂತೆ ಮಾಡು.
ನಿನ್ನವರ ಯಾತನೆಯೊಂದಿಗೆ
ಮುಕ್ತವಾಗಿ ಮಾತನಾಡು –
ಸೂಕ್ತವಾದ ನೆಲಿಯ ನೀಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೂಳ ಕೊಂಡು ತಂದರದು ಸಾವಯವವಾದೀತೇ ?
Next post ಔಷಧಿ

ಸಣ್ಣ ಕತೆ

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…