ನೆಲೆ

ಸುಲಿಗೆ ಸಾಮ್ರಾಜ್ಯದಲ್ಲಿ
ಅಟ್ಟಹಾಸ ಗೈಯುತ್ತಿರುವ
ದಟ್ಟ ಹೊಗೆಯಾಗುತ್ತಿರುವ
ಉದ್ದಿಮೆಪತಿಗಳ ಕಾರ್ಖನೆಗಳು
ಮಾಲೀನ್ಯದ ಪ್ರತೀಕಗಳು.

ರೋಗದ ಆಗರವಾಗಿ
ಔಷಧಿಗೂ ಕಾಸಿಲ್ಲದೇ
ಒದ್ದಾಡುವ ನನ್ನವರು
ಬದುಕೆಲ್ಲ ನೋವುಂಡು
ಪ್ರಾಣಿಗಳಂತೆ ಬೆಳೆದವರು.

ಗೋಳಿನ ಗೂಡಾದ
ಕೊಂಪೆ ಗುಡಿಸಲುಗಳ ನೋಡಿ,
ಮುಸಿಮುಸಿ ನಗುತ್ತಿರುವ
ಕೆಲವೇ ಎತ್ತರದ ಮಹಲುಗಳು
ಹಸಿದ ಹೊಟ್ಟೆಗಳ
ದಟ್ಟ ದಾರಿದ್ರ್ಯದ ಕೂಗು
ಬಂದೂಕಿನ ಕೆಂಗಣ್ಣಿಗೆ
ಹೆದರಿ ಮುದುರಿ ಮೂಲಿ
ಸೇರಿಕೊಂಡಿದೆ ನೋಡು.

ಅಸವರಾನತೆಯ ಹತ್ತಿಕ್ಕಿ
ಶೋಷಿತರ ಧ್ವನಿಯಾಗು
ಸತ್ತಪ್ರೇತಗಳ ಅತ್ಮಕ್ಕೆ ನೀನು
ಬಡಿದೆಬ್ಬಿಸಿ ಮಿಡಿಯುವಂತೆ ಮಾಡು.
ನಿನ್ನವರ ಯಾತನೆಯೊಂದಿಗೆ
ಮುಕ್ತವಾಗಿ ಮಾತನಾಡು –
ಸೂಕ್ತವಾದ ನೆಲಿಯ ನೀಡು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೂಳ ಕೊಂಡು ತಂದರದು ಸಾವಯವವಾದೀತೇ ?
Next post ಔಷಧಿ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಮತ್ತೆ ಬಂದ ವಸಂತ

    ಚಿತ್ರ: ಆಮಿ ಮೊದಲ ರಾತ್ರಿಯ ಉನ್ಮಾದದಲ್ಲಿದ್ದ ಮಧುವಿನ ಕಿವಿ ಹಿಂಡಿ ಅವಳಂದಳು. ‘ಮಧು, ಇಂದಿನಿಂದ ನಾವು ಗಂಡ - ಹೆಂಡತಿಯಾಗಿರುವುದು ಬೇಡ. ಬದುಕಿನ ಕೊನೆ ತನಕವೂ ಗೆಳೆಯ… Read more…

cheap jordans|wholesale air max|wholesale jordans|wholesale jewelry|wholesale jerseys