ನೀ ನುಡಿದರೆ….

ನೀ ನುಡಿದರೆ
ಕೋಗಿಲೆ ಹಾಡುವುದಿಲ್ಲ
ನೀ ನಡೆದರೆ
ನವಿಲು ಕುಣಿಯುವುದಿಲ್ಲ
ತೆರೆದರೆ ನೀನು ಕಣ್ಣು
ತಾರೆ ಹೊಳೆಯುವುದಿಲ್ಲ
ಮರೆತರೆ ನೀನು ನನ್ನ
ಕವಿತೆ ಮೂಡುವುದಿಲ್ಲ //ಪ//

ತಾವರೆಗೆ ನೀ ತೋರಿದೆ
ಅರಳಬೇಕು ಹೇಗೆಂದು
ಮಲ್ಲಿಗೆಗೆ ನೀ ಪಿಸುನುಡಿದೆ
ಘಮಘಮಿಸಬೇಕು ಹೇಗೆಂದು
ಕಾವೇರಿಗೆ ನೀ ಸಾರಿದೆ
ಹರಿಯಬೇಕು ಹೇಗೆಂದು
ನನಗೆ ಮಾತ್ರ ನೀ ಹೇಳಿದೆ
ಬರೆಯಬೇಕು ಹೇಗೆಂದು

ಸೆಳೆದೆ ಏಕೆ ನೀ ನನ್ನ
ಏನೂ ತಿಳಿಯದವ ನಾನು
ಹಾದಿ ತಪ್ಪುತಿರುವೆನೆ ಹೇಳು
ಏನೂ ಅರಿಯದವ ನಾನು
ಹಗಲಿರುಳು ಹೀಗೆ ಸೆಳೆದು
ಕಂಡದ್ದ ಕಾಣಿಸಿದೆ ನೀನು
ಪೂರ್ಣ ಕರುಣೆ ಸಿಗಬಹುದೇ ನನಗೆ
ಕಾಯಬೇಕಿದೆಯೆ ಇನ್ನು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗೃಹವ್ಯವಸ್ಥೆ
Next post ಮಾದರಿ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಗದ್ದೆ

    ಅದೊಂದು ಬೆಟ್ಟದ ಊರು. ಪುಟ್ಟ ಪುಟ್ಟ ಗುಡ್ಡಕ್ಕೆ ತಾಗಿಕೊಂಡು ಸಂದಿಯಲ್ಲಿ ಗೊಂದಿಯಲ್ಲಿ ಎದ್ದ ಗುಡಿಸಲುಗಳು ಅರ್ಥಾತ್ ಈ ಜೀವನ ಕಳೆಯೋ ಬಗೆಯಲಿ ಕಟ್ಟಿಕೊಂಡ ಪುಟ್ಟ ಮನೆಗಳು ಹೊತ್ತು… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…