ಎಂಥ ಚೆಂದ ನಿನ್ನ ರೂಪು

ಎಂಥ ಚೆಂದ ನಿನ್ನ ರೂಪು ಭುವನೇಶ್ವರಿ
ಕಣ್ಣು ತುಂಬಿ ತುಳುಕುತೈತೆ ನಿನ್ನೈಸಿರಿ /ಪ//

ಹಸಿರು ಬಳ್ಳಿ ಮುಡಿಯಲ್ಲಿರೊ ದುಂಡು ಮಲ್ಲಿಗೆ
ಚಿಗುರು ಎಲೆಯ ಮರೆಯಲ್ಲಿರೊ ಕೆಂಡ ಸಂಪಿಗೆ
ನಿನ್ನ ರೂಪು ತೋರುತೈತೆ ಗಂಧ ಬೀರುತ್ತ
ಹೇಗೊ ಮೋಡಿ ಮಾಡುತೈತೆ ರಂಗು ತಾಳುತ್ತ

ಗೆಜ್ಜೆ ಇಲ್ದೆ ಹೆಜ್ಜೆ ಹಾಕಿ ನಾಟ್ಯ ನವಿಲು
ತಾಳ ತಂತಿ ಇಲ್ಲದೇನೆ ಗಿಳಿಯ ಕೊರಳು
ಸೋಜಿಗವ ಸೂಸುತೈತೆ ಬಿಂಕ ಬೀರುತ್ತ
ನಿನ್ನ ಸತ್ಯ ಸಾರುತೈತೆ ಸದ್ದು ಮಾಡುತ್ತ

ಬೆಟ್ಟ ಗುಡ್ಡ ಬಯಲು ಸಾಲು ನೀಲಿ ಸಾಗರ
ಕಾಣದಂತೆ ಬೀಸಿ ಬರುವ ಗಾಳಿ ಚಾಮರ
ನಿನ್ನ ಲೀಲೆ ಹಾಡುತೈತೆ ಮೌನ ತಾಳುತ್ತ
ಸೃಷ್ಟಿ ಗುಟ್ಟು ರಟ್ಮಾಡೈತೆ ನಿನ್ನ ತೋರುತ್ತ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಧನೆ
Next post ಶೌಚ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…