ಬೆಲೆ

ನಲ್ಮೆಯ ಗೆಳತಿ,
ನಾನು ಈ ದೇಶ ಬಿಟ್ಟು
ಬಹು ದೂರ ಹೊರಟಿರುವೆ.
ಮತ್ತೆ ನನ್ನ-ನಿನ್ನ ಭೇಟಿ
ಆಗದೆ ಹೋಗಬಹುದು.
ನಮ್ಮ ಸ್ನೇಹ ಅಮರ
ನಿರ್ಮಲ ಪ್ರೇಮ ನಿರಂತರ
ಒಡನಾಟದ ಸವಿ ನೆನಪು
ಚಿರ ನೂತನ.
ನಿನ್ನಿಂದ ನಾನೀಗ ಬಯಸುವುದು
ನೂರು ರೂಪಾಯಿ ನಗದು!
ನೀನು ಅದಕ್ಕೆ ತಯಾರಿಲ್ಲದಿದ್ದರೆ
ಹತ್ತಾದರೂ ಕೊಡು, ಒಂದಾದರೂ ಕೊಡು
ಕೊನೆಗೆ ಒಂದು ಪೈಸಾನಾದರೂ
ನೀ ಕೊಡಲೇ ಬೇಕು.
ಬರಿಗೈಯಲ್ಲಿ ಮಾತ್ರ ಕಳಿಸಬೇಡ.
ಇರಬಹುದು ನನ್ನ ಬಳಿ ಲಕ್ಷ ರೂಪಾಯಿ
ನನಗರಿವಿದೆ, ನಿನ್ನ ನೂರು ರೂಪಾಯಿ
ನಿನ್ನವರಿಗೆ ಮೀಸಲೆಂದು.
ನನ್ನದರಲ್ಲಿ ನಿನಗೆಷ್ಟು ಬೇಕಾದರೂ
ಕೊಡಲು ನಾ ಸದಾ ಸಿದ್ಧ.
ಆದರೂ… ನೀ ನನಗಾಗಿ
ಒಂದು ಪೈಸಾ ಕೊಡಲಾರೆಯಾ?
ನೀ ಕೊಟ್ಟರೂ, ಬಿಟ್ಟರೂ, ನಾ ಹೊರಟೆ
ಅನಂತರ, ಕೊನೆಯವರೆಗೂ
ಕೊರಗುವುದು ಬೇಡ, ಗೆಳತಿ…
ಯೋಚಿಸು… ನಿರ್ಧರಿಸು.
*****
೨೬-೧೦-೧೯೯೦

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹರಿಹರಪ್ರಿಯರ ಸಾಹಿತ್ಯ: ಒಂದು ವಿಶ್ಲೇಷಣೆ
Next post ನೆನಪು

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…