ಹೊಸ ತಳಿಯ ಜಾಮ್! ಜೆಲ್ಲಿ!!

ಹೊಸ ತಳಿಯ ಜಾಮ್! ಜೆಲ್ಲಿ!!

ಹಸಿರು ಸೂರ್ಯಕಾಂತಿ ಹೂಗಳು ಸಂತೃಪ್ತವಾಗಿ ಮತ್ತಷ್ಟು ಪೋಶಕಾಂಶಗಳಿಂದ ಕಂಗೊಳಿಸಲು ಹಸುವಿನ ಹಾಲು, ರಂಗುರಂಗಿನ ಹೂವಿನ ಪಕಳೆಗಳು ನಿಮಗೆ ದೊರೆಯಲು ಇನ್ನೂ ೫೦ ವರ್ಷಗಳಷ್ಟೇ ಸಾಕು. ಆಹಾರ ಸತ್ವ ಸಮೃದ್ಧ ಟೊಮ್ಯಾಟೊ ಹೊಸ ತಳಿ ಈಗಾಗಲೇ ಅಮೇರಿಕಾದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಲಿವೆ. ಕೃಷಿ ಉತ್ಪಾದನೆಯ ಶೇ. ೫೦ ರಷ್ಟು ಪದಾರ್ಥಗಳು ಮಾರುಕಟ್ಟೆಯನ್ನು ತಲುಪಲು ಹಾದಿಯಲ್ಲಿಯೇ ಕೊಳೆತು ರೈತರಿಗೆ ನಷ್ಟವನ್ನುಂಟುಮಾಡುತ್ತವೆ. ಕಿರಿದಾಗುತ್ತಿರುವ ಇಂದಿನ ವಿಶ್ವದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ದೂರದೇಶದ ಹಣ್ಣು, ತರಕಾರಿ, ಹಾಲು, ಮೀನುಗಳನ್ನು ಸಾಗಿಸಲು ಇರುವ ಸಮಸ್ಯೆಯನ್ನು ಆ ವಸ್ತು ಕೆಡದಂತೆ ಬಹುಕಾಲ ತಾಳಿಕೆ ಗುಣಗಳನ್ನು ಬೆಳೆಯಲ್ಲಿಯೇ ಸೇರಿಸುವ ಪ್ರಯತ್ನ ನಡೆಯುತ್ತಲಿದೆ. ಮಾರುಕಟ್ಟೆಯಲ್ಲಿಯ ಬೇಡಿಕೆಯನ್ನು ಗಮನಿಸಿ ಹಣ್ಣಾಗಿಸಲು ಇಥಲೀನ್‌ನಂತಹ ಅನಿಲವನ್ನು ಹಾಯಿಸಿ (ಹೂವಿನ ಕಾಯಿ, ಬಾಳೆಕಾಯಿ, ಕಿತ್ತಳೆ) ಕೆಲವು ಬಲಿತ/ ಬಲಿಯದ ಕಾಯಿಗಳನ್ನು ಹಣ್ಣುಮಾಡಲಾಗುತ್ತದೆ. ಇದರ ಪರಿಣಾಮವಾಗಿ ಸಂಪೂರ್ಣ ರುಚಿಯನ್ನು ಬದಲಿಸುವ ಕಾಯಿಗಳು ನೀಡವು. ಈ ಹಣ್ಣುಗಳ ತಳಿಯನ್ನು ಸೂಕ್ತವಾಗಿ ಅಭಿವೃದ್ಧಿಪಡಿಸಲು ವಂಶಾಣುಗಳನ್ನು ಬಳಿಸಿ ಸುದೀರ್ಘಕಾಲ ಇಡಬಹುದು. ಕೊಳೆಯದ ಟೊಮ್ಯಾಟೋ ತಳಿಯನ್ನು ಈಗಾಗಲೇ ಅಮೇರಿಕೆಯ “ಪ್ಲಾದ್ರ್ ಸಾದ್ರ್” ಜೈವಿಕ ತಂತ್ರಜ್ಞಾನ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ಟೊಮ್ಯಾಟೋ ಇತರ ತಳಿಗಳಿಗಿಂತ ಹೆಚ್ಚು ತಾಳಿಕೆ ಮತ್ತು ರುಚಿಯನ್ನು ನಿಧಾನಗೊಳಿಸುತ್ತವೆ. ಯುರೋಪಿನ ಮಾರುಕಟ್ಟೆಯಲ್ಲಿ ಸಾಸ್, ಜಾಮ್ ಜೆಲ್ಲಿ ಮತ್ತು ಕೆಚಪ್‌ಗಳು ಅಟ್ಲಾಂಟಿಕ್ ಸಾಗರವನ್ನು ದಾಟಿ ನೀಡುತ್ತವೆ. ಎಣ್ಣೆಯಲ್ಲಿ ಕರಿದ ‘ಆಲೂ ಚಿಪ್ಸ್‌’ಗಳನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಇವುಗಳನ್ನು ಬಹುಕಾಲ ಕೆಡದಂತೆ ಇಡಬಹುದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೃಷಿಯೆಂದು ಒಂದು ಹೆಸರು ಸಾಲದೇ ?
Next post ಗೆಳೆತಿ ನನ್ನ ಪ್ರೀತಿಯ…

ಸಣ್ಣ ಕತೆ

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…