Home / ಲೇಖನ / ವಿಜ್ಞಾನ / ಹೊಸ ತಳಿಯ ಜಾಮ್! ಜೆಲ್ಲಿ!!

ಹೊಸ ತಳಿಯ ಜಾಮ್! ಜೆಲ್ಲಿ!!

ಹಸಿರು ಸೂರ್ಯಕಾಂತಿ ಹೂಗಳು ಸಂತೃಪ್ತವಾಗಿ ಮತ್ತಷ್ಟು ಪೋಶಕಾಂಶಗಳಿಂದ ಕಂಗೊಳಿಸಲು ಹಸುವಿನ ಹಾಲು, ರಂಗುರಂಗಿನ ಹೂವಿನ ಪಕಳೆಗಳು ನಿಮಗೆ ದೊರೆಯಲು ಇನ್ನೂ ೫೦ ವರ್ಷಗಳಷ್ಟೇ ಸಾಕು. ಆಹಾರ ಸತ್ವ ಸಮೃದ್ಧ ಟೊಮ್ಯಾಟೊ ಹೊಸ ತಳಿ ಈಗಾಗಲೇ ಅಮೇರಿಕಾದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಲಿವೆ. ಕೃಷಿ ಉತ್ಪಾದನೆಯ ಶೇ. ೫೦ ರಷ್ಟು ಪದಾರ್ಥಗಳು ಮಾರುಕಟ್ಟೆಯನ್ನು ತಲುಪಲು ಹಾದಿಯಲ್ಲಿಯೇ ಕೊಳೆತು ರೈತರಿಗೆ ನಷ್ಟವನ್ನುಂಟುಮಾಡುತ್ತವೆ. ಕಿರಿದಾಗುತ್ತಿರುವ ಇಂದಿನ ವಿಶ್ವದಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ದೂರದೇಶದ ಹಣ್ಣು, ತರಕಾರಿ, ಹಾಲು, ಮೀನುಗಳನ್ನು ಸಾಗಿಸಲು ಇರುವ ಸಮಸ್ಯೆಯನ್ನು ಆ ವಸ್ತು ಕೆಡದಂತೆ ಬಹುಕಾಲ ತಾಳಿಕೆ ಗುಣಗಳನ್ನು ಬೆಳೆಯಲ್ಲಿಯೇ ಸೇರಿಸುವ ಪ್ರಯತ್ನ ನಡೆಯುತ್ತಲಿದೆ. ಮಾರುಕಟ್ಟೆಯಲ್ಲಿಯ ಬೇಡಿಕೆಯನ್ನು ಗಮನಿಸಿ ಹಣ್ಣಾಗಿಸಲು ಇಥಲೀನ್‌ನಂತಹ ಅನಿಲವನ್ನು ಹಾಯಿಸಿ (ಹೂವಿನ ಕಾಯಿ, ಬಾಳೆಕಾಯಿ, ಕಿತ್ತಳೆ) ಕೆಲವು ಬಲಿತ/ ಬಲಿಯದ ಕಾಯಿಗಳನ್ನು ಹಣ್ಣುಮಾಡಲಾಗುತ್ತದೆ. ಇದರ ಪರಿಣಾಮವಾಗಿ ಸಂಪೂರ್ಣ ರುಚಿಯನ್ನು ಬದಲಿಸುವ ಕಾಯಿಗಳು ನೀಡವು. ಈ ಹಣ್ಣುಗಳ ತಳಿಯನ್ನು ಸೂಕ್ತವಾಗಿ ಅಭಿವೃದ್ಧಿಪಡಿಸಲು ವಂಶಾಣುಗಳನ್ನು ಬಳಿಸಿ ಸುದೀರ್ಘಕಾಲ ಇಡಬಹುದು. ಕೊಳೆಯದ ಟೊಮ್ಯಾಟೋ ತಳಿಯನ್ನು ಈಗಾಗಲೇ ಅಮೇರಿಕೆಯ “ಪ್ಲಾದ್ರ್ ಸಾದ್ರ್” ಜೈವಿಕ ತಂತ್ರಜ್ಞಾನ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ಟೊಮ್ಯಾಟೋ ಇತರ ತಳಿಗಳಿಗಿಂತ ಹೆಚ್ಚು ತಾಳಿಕೆ ಮತ್ತು ರುಚಿಯನ್ನು ನಿಧಾನಗೊಳಿಸುತ್ತವೆ. ಯುರೋಪಿನ ಮಾರುಕಟ್ಟೆಯಲ್ಲಿ ಸಾಸ್, ಜಾಮ್ ಜೆಲ್ಲಿ ಮತ್ತು ಕೆಚಪ್‌ಗಳು ಅಟ್ಲಾಂಟಿಕ್ ಸಾಗರವನ್ನು ದಾಟಿ ನೀಡುತ್ತವೆ. ಎಣ್ಣೆಯಲ್ಲಿ ಕರಿದ ‘ಆಲೂ ಚಿಪ್ಸ್‌’ಗಳನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ. ಇವುಗಳನ್ನು ಬಹುಕಾಲ ಕೆಡದಂತೆ ಇಡಬಹುದು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...