ಶ್ರಮ-ಸಂಸ್ಕೃತಿ

ಮಾನವನ ಬೆವರು ಬಾಳಿನ ತವರು
ಅರಿವಾಗಿ ಅರಳಿ ಬೆಳಕಾಯಿತು
ಸಂಸ್ಕೃತಿಗೆ ದುಡಿಮೆ ಬೇರಾಯಿತು ||

ಬಂಡೆಗಟ್ಟಿದ ಬೆಟ್ಟ
ಹಸಿರು ತುಂಬಿದ ಘಟ್ಟ
ಮಾನವನು ಮೈ ಏರಿ ಮಾತಾಡಿದ
ಹೋರಾಟ ನಡೆಸುತ್ತ
ಒಂದಾಗಿ ಬದುಕುತ್ತ
ಹೊಸ ಗೂಡು ಹುಡುಕುತ್ತ ನಡೆದಾಡಿದ ||

ಕಾಡು ಮೇಡಿನ ಹಾಡು
ಕೂಗಿ ಕರೆಯುವ ನಾಡು
ದುಡಿಮೆಗಾರನು ಕೊಟ್ಟ ಹೊಸತು ರೂಪ
ಸಿಡಿಲು ಸಂಚಿನ ಮೋಡ
ಬಿರುಗಾಳಿ ಮಳೆ ನೋಡ
ತಾಳಿದನು ಕೊರೆವ ಚಳಿ ಬಿಸಿಲ ತಾಪ ||

ಧುಮುಕಿದವು ಜಲಪಾತ
ಕೆಣಕಿದವು ಹಿಮಪಾತ
ಜಗ್ಗದೆಯೆ ಹೋರಾಡಿದ
ತಲೆಮಾರು ಕಳೆಯುತ್ತ
ಮನೆ ಮಾರು ಬೆಳೆಯುತ್ತ
ನೋವು ನಲಿವಿನ ನಡುವೆ ಉಸಿರಾಡಿದ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲಗು ಮುದ್ದಿನ ಕಣ್ಮಣಿ
Next post ಬುಗ್ಗೆಗಳು

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…