ಶ್ರಮ-ಸಂಸ್ಕೃತಿ

ಮಾನವನ ಬೆವರು ಬಾಳಿನ ತವರು
ಅರಿವಾಗಿ ಅರಳಿ ಬೆಳಕಾಯಿತು
ಸಂಸ್ಕೃತಿಗೆ ದುಡಿಮೆ ಬೇರಾಯಿತು ||

ಬಂಡೆಗಟ್ಟಿದ ಬೆಟ್ಟ
ಹಸಿರು ತುಂಬಿದ ಘಟ್ಟ
ಮಾನವನು ಮೈ ಏರಿ ಮಾತಾಡಿದ
ಹೋರಾಟ ನಡೆಸುತ್ತ
ಒಂದಾಗಿ ಬದುಕುತ್ತ
ಹೊಸ ಗೂಡು ಹುಡುಕುತ್ತ ನಡೆದಾಡಿದ ||

ಕಾಡು ಮೇಡಿನ ಹಾಡು
ಕೂಗಿ ಕರೆಯುವ ನಾಡು
ದುಡಿಮೆಗಾರನು ಕೊಟ್ಟ ಹೊಸತು ರೂಪ
ಸಿಡಿಲು ಸಂಚಿನ ಮೋಡ
ಬಿರುಗಾಳಿ ಮಳೆ ನೋಡ
ತಾಳಿದನು ಕೊರೆವ ಚಳಿ ಬಿಸಿಲ ತಾಪ ||

ಧುಮುಕಿದವು ಜಲಪಾತ
ಕೆಣಕಿದವು ಹಿಮಪಾತ
ಜಗ್ಗದೆಯೆ ಹೋರಾಡಿದ
ತಲೆಮಾರು ಕಳೆಯುತ್ತ
ಮನೆ ಮಾರು ಬೆಳೆಯುತ್ತ
ನೋವು ನಲಿವಿನ ನಡುವೆ ಉಸಿರಾಡಿದ ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಲಗು ಮುದ್ದಿನ ಕಣ್ಮಣಿ
Next post ಬುಗ್ಗೆಗಳು

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…