Home / ಕವನ / ಕವಿತೆ / ಚಲುವಿ ಚಲುವಿ ಚಂಪಕ್ಕಾ

ಚಲುವಿ ಚಲುವಿ ಚಂಪಕ್ಕಾ

ಚಲುವಿ ಚಲುವಿ ಚಂಪಕ್ಕಾ
ಟೂವಿ ಟೂವಿ ಟಿಂವಕ್ಕಾ ||ಪಲ್ಲ||

ಹಳದಿ ಪತ್ಲಾ ಕೆಳದಿ ಕೊತ್ಲಾ
ಕುಬ್ಸಾ ಕುಮಟಾ ಟೆಂಗಕ್ಕಾ
ಟೊಂಕಾ ಟಾಂಗಾ ಬಿಂಕಾ ಬೋಂಗಾ
ನೀನೀ ನೀನೀ ನಾಗಕ್ಕಾ ||೧||

ಎದಿಯಾ ಮ್ಯಾಗೆ ಕಳ್ಳೆ ಮಳ್ಳೆ
ಒಳಗೆ ಹುಂಚಿ ಕಾಯಕ್ಕಾ
ನಡದು ನಡದು ತೊಡಿಯಾ ಘಾಯಾ
ತೊಂಡೆ ಹಣ್ಣು ಆತಕ್ಕಾ ||೨||

ಕುಂತಾಗೊಮ್ಮೆ ಕುಂಬ್ಳಾ ಬಳ್ಳಿ
ನಿಂತ್ರಾ ನಿಂಬಿ ಹಣ್ಣಕ್ಕಾ
ಕಣ್ಣಾ ಮುಚ್ಚಿ ಕಣ್ಣಾ ಕಂಡ್ರೆ
ಕವಳಿ ಹಣ್ಣಾ ಕಡಿಯಕ್ಕಾ ||೩||

ಬಂದೇ ಬಂದಿ ನಿಂತೇ ನಿಂತಿ
ನಿನ್ನಾ ಗೆಣಿಯಾ ಎಲ್ಲೆಕ್ಕಾ
ಮುಗಿಲಾ ಹಕ್ಕಿ ಪಲ್ಲಕ್ಕ್ಯಾಗಿ
ಪಿಳ್ಳಂ ಗೋವಿ ಹಾಡ್ತಕ್ಕಾ ||೪||

ಕತ್ಲಾ ಬಂದ್ರೆ ಪತ್ಲಾ ಕಳದು
ಹಿತ್ಲಾ ದಾಟಿ ಓಡಕ್ಕಾ
ಮುಂಗ್ಲಿ ಮಾವಾ ಮೆಲ್ಲಗ ಬಂದ್ರ
ಗಲ್ಲಾ ಬೆಲ್ಲಾ ಕೊಡಕ್ಕಾ ||೫||
*****
ಚಂಪಕ್ಕ = ಸುಂದರ ಆತ್ಮ
ಹಳದಿ ಪತ್ಲ = ವರ್ಣ ರಂಜಿತ ಮಾಯೆಯ ಆವರಣ
ನಡದು = ಸುಖಕ್ಕಾಗಿ ಬೆನ್ನು ಹತ್ತಿ
ಗೆಣಿಯಾ = ಪರಮಾತ್ಮ
ಕತ್ಲಾ = ಅಜ್ಞಾನ
ಪತ್ಲಾ = ದೇಹಾಭಿಮಾನ (Gross Physical Consciousness)
hitlA = haddina mAye (Ego centred self);
ಮುಂಗ್ಲಿ ಮಾವ = ಭಗವಂತ

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...