Home / ಕಥೆ / ಕಿರು ಕಥೆ / ಒಡಕು ಹುಟ್ಟಿಸಿ ರಾಜ್ಯವಾಳು

ಒಡಕು ಹುಟ್ಟಿಸಿ ರಾಜ್ಯವಾಳು

ಆ ಊರಿನ ಕಾಲೇಜಿಗೆ ಪ್ರಾಚಾರ್ಯರಾಗಿ ಬಂದ ಚತುರಮತಿ ಮೇಡಂಗೆ ದಿನದ ಪ್ರತಿಯೊಂದು ಕ್ಷಣಗಳು ಭಯಾನಕವಾಗಿ ಪರಿಣಮಿಸಿದ್ದವು. ಅದೇ ಹೊಸದಾಗಿ ಸೇವೆಗೆ ಸೇರಿಕೊಂಡವರಿಂದ ಹಿಡಿದು ನಿವೃತ್ತಿ ಅಂಚಿಗೆ ತಲುಪಿರುವ ನಲವತ್ತು ಶಿಕ್ಷಕರು, ಆಫೀಸ್ ಸಿಬ್ಬಂದಿ, ಸಾವಿರಾರು ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹರಸಾಹಸವೆನಿಸಿ ಮೇಡಂನ ಮೂಡು ತರಾವರಿಗೊಳ್ಳುತ್ತಿತ್ತು.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಲೇಜನ್ನು ವ್ಯವಸ್ಥಿತವಾಗಿ ಮಾದರಿಯಾಗಿಸುವ ಧಾವಂತ ತೀವ್ರವಾಗಿದ್ದರೂ ಆಡಳಿತದ ಗಂಧಗಾಳಿಯ ಕೊರತೆಯಿಂದಾಗಿ ಮೇಡಂನ ಉದ್ದೇಶಗಳು ಬೇರುಗಳಿಲ್ಲದೆ ತತ್ತರಿಸತೊಡಗಿದ್ದವು. ಇದರಿಂದಾಗಿ ತಲೆ ತುಂಬ ನೋವು, ರಕ್ತದೊತ್ತಡ ಏರಿಳಿಯುತ್ತ ಜೀವನದ ಸೊಗಸನ್ನೇ ನುಂಗಿಹಾಕಿತ್ತು.

ಅಧ್ಯಾಪಕರಿಗೊ ಕಲಿಸುವ ಆಸಕ್ತಿಗಿಂತ ಸ್ವಹಿತ ಸಾಧಿಸಿಕೊಳ್ಳುವ ತವಕ. ಅದಕ್ಕಾಗಿ ಮೇಡಂನ ವಿಶ್ವಾಸಗಳಿಸಿಕೊಳ್ಳುವ ಹುನ್ನಾರು. ಮೇಡಂ ಒಬ್ಬರೇ ಕುಳಿತಿರುವುದನ್ನು ನೋಡಿಕೊಂಡು ಅವರ ಚೇಂಬರಿಗೆ ಲಗ್ಗೆ ಇಡುತ್ತಿದ್ದ ಪ್ರತಿಯೊಬ್ಬರೂ ಅತೀ ವಿನಯ ಪ್ರದರ್ಶಿಸಿ ಒಬ್ಬರ ಮೇಲೆ ಇನ್ನೊಬ್ಬರು ಚಾಡಿ ಹೇಳುವ, ತಮ್ಮ ಬೇಳೆ ಬೇಯಿಸಿಕೊಳ್ಳುವ ಸಮಯಸಾದಕತನದಿಂದ ಮೇಡಂ ದಿಕ್ಕೆಟ್ಟು ಹೋಗುತ್ತಿದ್ದರು.

ಚಾಡಿಕೋರರ ಕೈಗೊಂಬೆಯಾದವರಂಥೆ ಮೇಡಂ ಇನ್ನುಳಿದವರ ಮೇಲೆ ಹಾರಾಡುತ್ತಿದ್ದರು. ಅವರೂ ಪ್ರತ್ಯುತ್ತರ ನೀಡಿ ಮೇಡಂನ ರಕ್ತ ಕುದಿಸುತ್ತಿದ್ದರು.

ಒಂದಿನ ಕೆ.ಸಿ.ಎಸ್.ಆರ್‍. ರೂಲ್ಸ್ ಜಡಿದು ಮೆಮೊ ಕೊಟ್ಟಿದ್ದೇ ತಡ, ಪರಸ್ಪರ ದ್ವೇಷಿಸುವ ಎಲ್ಲ ಶಿಕ್ಷಕರು, ಶಿಕ್ಷಕಿಯರು ಒಟ್ಟಾಗಿ ಸೇರಿ ಮೀಟಿಂಗ್‌ನಲ್ಲಿ ಚತುರಮತಿ ಮೇಡಂನನ್ನು ತರಾಟೆಗೆ ತೆಗೆದುಕೊಂಡುಬಿಟ್ಟರು. ನನಗೆ ಖಾಸಾ ಆದ್ಮಿಗಳೆಂದು ನಂಬಿದವರು ಕೂಡ ಈ ಸಮಯದಲ್ಲಿ ತಮ್ಮ ವಿರುದ್ಧ ನಿಂತಿದ್ದು ಕಂಡು ಮೇಡಂ “ಈ ನರಕದ ಜಂಜಾಟವೇ ಬೇಡ. ನಾನು ರಾಜೀನಾಮೆ ಕೊಡುತ್ತೇನೆ” ಎಂದು ಹತ್ತು ದಿನಗಳ ಕಮ್ಯುಟೆಡ್ ಲೀವ್ ಹಾಕಿ ಊರಿಗೆ ಹೊರಟು ಹೋಗಿದ್ದರು.

ತಿರುಗಿ ಬಂದಾಗ ಮೇಡಂನ ಮುಖದಲ್ಲಿ ಹೊಸ ಕಳೆ. ಕೆಲಸದಲ್ಲಿ ಅತ್ಯುತ್ಸಾಹ. ಆಫೀಸಿಗೆ ಕೆಲಸವೊ, ಮಕ್ಕಳ ತರಗತಿಯೋ, ಬೋಧನೆಯ ಸಮಸ್ಯೆಯೋ ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಸುಸೂತ್ರ ಆಡಳಿತ ನಡೆಸಿದರು. ಈಗವರಿಗೆ ರಕ್ತದ ಒತ್ತಡವೂ ಇರಲಿಲ್ಲ, ಮೆದುಳಿಗೆ ನೋವೂ ಬಾಧಿಸಲಿಲ್ಲ. ಆದರೆ ಅವರ ಹತ್ತಿರ ಸುಳಿದಾಡುವ ಅಧ್ಯಾಪಕರ ಒಡಲಾಳದಲ್ಲಿ ಮತ್ಸರದ ಕಡೆಗೋಲು ಆಡುತ್ತಲೇ ಇತ್ತು. ಚತುರಮತಿ ಮೇಡಂನ ಬ್ರಿಟಿಷ್ ಪಾಲಸಿ ಆ ಕಡೆಗೋಲನ್ನು ನಿಯಂತ್ರಿಸಿಕೊಂಡಿತ್ತು ನಿರಂತರ.

*****

 

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...