Home / ಕಥೆ / ಕಿರು ಕಥೆ / ಒಡಕು ಹುಟ್ಟಿಸಿ ರಾಜ್ಯವಾಳು

ಒಡಕು ಹುಟ್ಟಿಸಿ ರಾಜ್ಯವಾಳು

ಆ ಊರಿನ ಕಾಲೇಜಿಗೆ ಪ್ರಾಚಾರ್ಯರಾಗಿ ಬಂದ ಚತುರಮತಿ ಮೇಡಂಗೆ ದಿನದ ಪ್ರತಿಯೊಂದು ಕ್ಷಣಗಳು ಭಯಾನಕವಾಗಿ ಪರಿಣಮಿಸಿದ್ದವು. ಅದೇ ಹೊಸದಾಗಿ ಸೇವೆಗೆ ಸೇರಿಕೊಂಡವರಿಂದ ಹಿಡಿದು ನಿವೃತ್ತಿ ಅಂಚಿಗೆ ತಲುಪಿರುವ ನಲವತ್ತು ಶಿಕ್ಷಕರು, ಆಫೀಸ್ ಸಿಬ್ಬಂದಿ, ಸಾವಿರಾರು ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹರಸಾಹಸವೆನಿಸಿ ಮೇಡಂನ ಮೂಡು ತರಾವರಿಗೊಳ್ಳುತ್ತಿತ್ತು.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಲೇಜನ್ನು ವ್ಯವಸ್ಥಿತವಾಗಿ ಮಾದರಿಯಾಗಿಸುವ ಧಾವಂತ ತೀವ್ರವಾಗಿದ್ದರೂ ಆಡಳಿತದ ಗಂಧಗಾಳಿಯ ಕೊರತೆಯಿಂದಾಗಿ ಮೇಡಂನ ಉದ್ದೇಶಗಳು ಬೇರುಗಳಿಲ್ಲದೆ ತತ್ತರಿಸತೊಡಗಿದ್ದವು. ಇದರಿಂದಾಗಿ ತಲೆ ತುಂಬ ನೋವು, ರಕ್ತದೊತ್ತಡ ಏರಿಳಿಯುತ್ತ ಜೀವನದ ಸೊಗಸನ್ನೇ ನುಂಗಿಹಾಕಿತ್ತು.

ಅಧ್ಯಾಪಕರಿಗೊ ಕಲಿಸುವ ಆಸಕ್ತಿಗಿಂತ ಸ್ವಹಿತ ಸಾಧಿಸಿಕೊಳ್ಳುವ ತವಕ. ಅದಕ್ಕಾಗಿ ಮೇಡಂನ ವಿಶ್ವಾಸಗಳಿಸಿಕೊಳ್ಳುವ ಹುನ್ನಾರು. ಮೇಡಂ ಒಬ್ಬರೇ ಕುಳಿತಿರುವುದನ್ನು ನೋಡಿಕೊಂಡು ಅವರ ಚೇಂಬರಿಗೆ ಲಗ್ಗೆ ಇಡುತ್ತಿದ್ದ ಪ್ರತಿಯೊಬ್ಬರೂ ಅತೀ ವಿನಯ ಪ್ರದರ್ಶಿಸಿ ಒಬ್ಬರ ಮೇಲೆ ಇನ್ನೊಬ್ಬರು ಚಾಡಿ ಹೇಳುವ, ತಮ್ಮ ಬೇಳೆ ಬೇಯಿಸಿಕೊಳ್ಳುವ ಸಮಯಸಾದಕತನದಿಂದ ಮೇಡಂ ದಿಕ್ಕೆಟ್ಟು ಹೋಗುತ್ತಿದ್ದರು.

ಚಾಡಿಕೋರರ ಕೈಗೊಂಬೆಯಾದವರಂಥೆ ಮೇಡಂ ಇನ್ನುಳಿದವರ ಮೇಲೆ ಹಾರಾಡುತ್ತಿದ್ದರು. ಅವರೂ ಪ್ರತ್ಯುತ್ತರ ನೀಡಿ ಮೇಡಂನ ರಕ್ತ ಕುದಿಸುತ್ತಿದ್ದರು.

ಒಂದಿನ ಕೆ.ಸಿ.ಎಸ್.ಆರ್‍. ರೂಲ್ಸ್ ಜಡಿದು ಮೆಮೊ ಕೊಟ್ಟಿದ್ದೇ ತಡ, ಪರಸ್ಪರ ದ್ವೇಷಿಸುವ ಎಲ್ಲ ಶಿಕ್ಷಕರು, ಶಿಕ್ಷಕಿಯರು ಒಟ್ಟಾಗಿ ಸೇರಿ ಮೀಟಿಂಗ್‌ನಲ್ಲಿ ಚತುರಮತಿ ಮೇಡಂನನ್ನು ತರಾಟೆಗೆ ತೆಗೆದುಕೊಂಡುಬಿಟ್ಟರು. ನನಗೆ ಖಾಸಾ ಆದ್ಮಿಗಳೆಂದು ನಂಬಿದವರು ಕೂಡ ಈ ಸಮಯದಲ್ಲಿ ತಮ್ಮ ವಿರುದ್ಧ ನಿಂತಿದ್ದು ಕಂಡು ಮೇಡಂ “ಈ ನರಕದ ಜಂಜಾಟವೇ ಬೇಡ. ನಾನು ರಾಜೀನಾಮೆ ಕೊಡುತ್ತೇನೆ” ಎಂದು ಹತ್ತು ದಿನಗಳ ಕಮ್ಯುಟೆಡ್ ಲೀವ್ ಹಾಕಿ ಊರಿಗೆ ಹೊರಟು ಹೋಗಿದ್ದರು.

ತಿರುಗಿ ಬಂದಾಗ ಮೇಡಂನ ಮುಖದಲ್ಲಿ ಹೊಸ ಕಳೆ. ಕೆಲಸದಲ್ಲಿ ಅತ್ಯುತ್ಸಾಹ. ಆಫೀಸಿಗೆ ಕೆಲಸವೊ, ಮಕ್ಕಳ ತರಗತಿಯೋ, ಬೋಧನೆಯ ಸಮಸ್ಯೆಯೋ ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಸುಸೂತ್ರ ಆಡಳಿತ ನಡೆಸಿದರು. ಈಗವರಿಗೆ ರಕ್ತದ ಒತ್ತಡವೂ ಇರಲಿಲ್ಲ, ಮೆದುಳಿಗೆ ನೋವೂ ಬಾಧಿಸಲಿಲ್ಲ. ಆದರೆ ಅವರ ಹತ್ತಿರ ಸುಳಿದಾಡುವ ಅಧ್ಯಾಪಕರ ಒಡಲಾಳದಲ್ಲಿ ಮತ್ಸರದ ಕಡೆಗೋಲು ಆಡುತ್ತಲೇ ಇತ್ತು. ಚತುರಮತಿ ಮೇಡಂನ ಬ್ರಿಟಿಷ್ ಪಾಲಸಿ ಆ ಕಡೆಗೋಲನ್ನು ನಿಯಂತ್ರಿಸಿಕೊಂಡಿತ್ತು ನಿರಂತರ.

*****

 

Tagged:

Leave a Reply

Your email address will not be published. Required fields are marked *

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...