ಒಡಕು ಹುಟ್ಟಿಸಿ ರಾಜ್ಯವಾಳು

ಆ ಊರಿನ ಕಾಲೇಜಿಗೆ ಪ್ರಾಚಾರ್ಯರಾಗಿ ಬಂದ ಚತುರಮತಿ ಮೇಡಂಗೆ ದಿನದ ಪ್ರತಿಯೊಂದು ಕ್ಷಣಗಳು ಭಯಾನಕವಾಗಿ ಪರಿಣಮಿಸಿದ್ದವು. ಅದೇ ಹೊಸದಾಗಿ ಸೇವೆಗೆ ಸೇರಿಕೊಂಡವರಿಂದ ಹಿಡಿದು ನಿವೃತ್ತಿ ಅಂಚಿಗೆ ತಲುಪಿರುವ ನಲವತ್ತು ಶಿಕ್ಷಕರು, ಆಫೀಸ್ ಸಿಬ್ಬಂದಿ, ಸಾವಿರಾರು ಮಕ್ಕಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಹರಸಾಹಸವೆನಿಸಿ ಮೇಡಂನ ಮೂಡು ತರಾವರಿಗೊಳ್ಳುತ್ತಿತ್ತು.

ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಲೇಜನ್ನು ವ್ಯವಸ್ಥಿತವಾಗಿ ಮಾದರಿಯಾಗಿಸುವ ಧಾವಂತ ತೀವ್ರವಾಗಿದ್ದರೂ ಆಡಳಿತದ ಗಂಧಗಾಳಿಯ ಕೊರತೆಯಿಂದಾಗಿ ಮೇಡಂನ ಉದ್ದೇಶಗಳು ಬೇರುಗಳಿಲ್ಲದೆ ತತ್ತರಿಸತೊಡಗಿದ್ದವು. ಇದರಿಂದಾಗಿ ತಲೆ ತುಂಬ ನೋವು, ರಕ್ತದೊತ್ತಡ ಏರಿಳಿಯುತ್ತ ಜೀವನದ ಸೊಗಸನ್ನೇ ನುಂಗಿಹಾಕಿತ್ತು.

ಅಧ್ಯಾಪಕರಿಗೊ ಕಲಿಸುವ ಆಸಕ್ತಿಗಿಂತ ಸ್ವಹಿತ ಸಾಧಿಸಿಕೊಳ್ಳುವ ತವಕ. ಅದಕ್ಕಾಗಿ ಮೇಡಂನ ವಿಶ್ವಾಸಗಳಿಸಿಕೊಳ್ಳುವ ಹುನ್ನಾರು. ಮೇಡಂ ಒಬ್ಬರೇ ಕುಳಿತಿರುವುದನ್ನು ನೋಡಿಕೊಂಡು ಅವರ ಚೇಂಬರಿಗೆ ಲಗ್ಗೆ ಇಡುತ್ತಿದ್ದ ಪ್ರತಿಯೊಬ್ಬರೂ ಅತೀ ವಿನಯ ಪ್ರದರ್ಶಿಸಿ ಒಬ್ಬರ ಮೇಲೆ ಇನ್ನೊಬ್ಬರು ಚಾಡಿ ಹೇಳುವ, ತಮ್ಮ ಬೇಳೆ ಬೇಯಿಸಿಕೊಳ್ಳುವ ಸಮಯಸಾದಕತನದಿಂದ ಮೇಡಂ ದಿಕ್ಕೆಟ್ಟು ಹೋಗುತ್ತಿದ್ದರು.

ಚಾಡಿಕೋರರ ಕೈಗೊಂಬೆಯಾದವರಂಥೆ ಮೇಡಂ ಇನ್ನುಳಿದವರ ಮೇಲೆ ಹಾರಾಡುತ್ತಿದ್ದರು. ಅವರೂ ಪ್ರತ್ಯುತ್ತರ ನೀಡಿ ಮೇಡಂನ ರಕ್ತ ಕುದಿಸುತ್ತಿದ್ದರು.

ಒಂದಿನ ಕೆ.ಸಿ.ಎಸ್.ಆರ್‍. ರೂಲ್ಸ್ ಜಡಿದು ಮೆಮೊ ಕೊಟ್ಟಿದ್ದೇ ತಡ, ಪರಸ್ಪರ ದ್ವೇಷಿಸುವ ಎಲ್ಲ ಶಿಕ್ಷಕರು, ಶಿಕ್ಷಕಿಯರು ಒಟ್ಟಾಗಿ ಸೇರಿ ಮೀಟಿಂಗ್‌ನಲ್ಲಿ ಚತುರಮತಿ ಮೇಡಂನನ್ನು ತರಾಟೆಗೆ ತೆಗೆದುಕೊಂಡುಬಿಟ್ಟರು. ನನಗೆ ಖಾಸಾ ಆದ್ಮಿಗಳೆಂದು ನಂಬಿದವರು ಕೂಡ ಈ ಸಮಯದಲ್ಲಿ ತಮ್ಮ ವಿರುದ್ಧ ನಿಂತಿದ್ದು ಕಂಡು ಮೇಡಂ “ಈ ನರಕದ ಜಂಜಾಟವೇ ಬೇಡ. ನಾನು ರಾಜೀನಾಮೆ ಕೊಡುತ್ತೇನೆ” ಎಂದು ಹತ್ತು ದಿನಗಳ ಕಮ್ಯುಟೆಡ್ ಲೀವ್ ಹಾಕಿ ಊರಿಗೆ ಹೊರಟು ಹೋಗಿದ್ದರು.

ತಿರುಗಿ ಬಂದಾಗ ಮೇಡಂನ ಮುಖದಲ್ಲಿ ಹೊಸ ಕಳೆ. ಕೆಲಸದಲ್ಲಿ ಅತ್ಯುತ್ಸಾಹ. ಆಫೀಸಿಗೆ ಕೆಲಸವೊ, ಮಕ್ಕಳ ತರಗತಿಯೋ, ಬೋಧನೆಯ ಸಮಸ್ಯೆಯೋ ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಸುಸೂತ್ರ ಆಡಳಿತ ನಡೆಸಿದರು. ಈಗವರಿಗೆ ರಕ್ತದ ಒತ್ತಡವೂ ಇರಲಿಲ್ಲ, ಮೆದುಳಿಗೆ ನೋವೂ ಬಾಧಿಸಲಿಲ್ಲ. ಆದರೆ ಅವರ ಹತ್ತಿರ ಸುಳಿದಾಡುವ ಅಧ್ಯಾಪಕರ ಒಡಲಾಳದಲ್ಲಿ ಮತ್ಸರದ ಕಡೆಗೋಲು ಆಡುತ್ತಲೇ ಇತ್ತು. ಚತುರಮತಿ ಮೇಡಂನ ಬ್ರಿಟಿಷ್ ಪಾಲಸಿ ಆ ಕಡೆಗೋಲನ್ನು ನಿಯಂತ್ರಿಸಿಕೊಂಡಿತ್ತು ನಿರಂತರ.

*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೀಲಿ ಕೈ
Next post ನೋಡಿಕೋ ಎಲ್ಲೆದ ಐಸುರ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys