ಮಗು ಅಳುತ್ತಲೇ ಇತ್ತು. “ಏನು! ಮಗು! ಏನಾಯಿತು?” ಎಂದರು ನೋಡಿದವರು. ಅವರ ಮಾತನ್ನು ಕೇಳಿಸಿಕೊಳ್ಳದೆ ಆಕಾಶ ಬೀಳುವಂತೆ ಮಗು ಅಳುತ್ತಲೇ ಇತ್ತು. ಮನೆಯ ಗೇಟಿನ ಹತ್ತಿರ ನಿಂತು ಅಳುತ್ತಿದ್ದ ಮಗುವನ್ನು ದಾರಿಯಲ್ಲಿ ಹೋಗುವವರೆಲ್ಲ “ಏನಾಯಿತು ಮಗು?” ಎಂದು ವಿಚಾರಿಸಿದಾಗ ಅಳುವೆ ಉತ್ತರವಾಗುತಿತ್ತು. ಒಳಗೆ ಕೆಲಸದಲ್ಲಿದ್ದ ತಾಯಿ ಮಗುವಿನ ಅಳುವನ್ನು ಕೇಳಿ ಓಡಿಬಂದು “ಏನಾಯಿತು? ಹೇಳು ಪುಟ್ಟಾ” ಎಂದಳು. “ಅಪ್ಪ, ನನ್ನ ಚಪ್ಪಲಿ ಹಾಕಿಕೊಂಡು ಹೋದರು” ಎಂದು ಗಟ್ಟಿಯಾಗಿ ರಾಗ ಎಳೆಯಿತು.” “ಅಪ್ಪಂಗೆ ನಿನ್ನ ಸಣ್ಣ ಚಪ್ಪಲಿ ಹಿಡಿಸೋಲ್ಲ ಪುಟ್ಟಾ” ಅಂತ ವಾದಿಸಿದಳು, ಅಮ್ಮ. “ಅಮ್ಮ ಅಪ್ಪನ ದೊಡ್ಡ ಚಪ್ಪಲಿ ನಂಗೆ ಸಲೀಸಾಗಿ ಹಿಡಿಸುತ್ತೆ, ಅಮ್ಮ!” ಎಂದಿತು ಮಗು.
*****
Related Post
ಸಣ್ಣ ಕತೆ
-
ಅಂತರಂಗ ಶುದ್ಧಿ ಬಹಿರಂಗ ಶುದ್ಧಿ
ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…
-
ಮಲ್ಲೇಶಿಯ ನಲ್ಲೆಯರು
ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…
-
ಕಳ್ಳನ ಹೃದಯಸ್ಪಂದನ
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…
-
ಧರ್ಮಸಂಸ್ಥಾಪನಾರ್ಥಾಯ
ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…
-
ಬಾಳ ಚಕ್ರ ನಿಲ್ಲಲಿಲ್ಲ
ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…