ಬಿಸಿಲ ನಾಡಿನ ಬೇಸಿಗೆ

ಆಡಿ ಹಗುರವಾಗಲೇನಲ್ಲ! ನಿಜ!
ಕೇಳಿ ಬಿಸಿಲ ನಾಡಿನ ಬವಣೆ.

ರವಿ
ಹತ್ತಿರವೆ ಸರಿದವನಂತೆ
ಉದಯಾಸ್ತಗಳಲಿ ಒಗ್ಗರಣೆಗೆ ಸೌಮ್ಯನಾಗಿ
ಉಳಿದಂತೆ ಬೆಂಕಿ ಬಿಸಿಲನು ಕಾರಿ
ಕಾಲಗಳ ಕತ್ತು ಹಿಸುಕಿ
ಜೀವಗಳ ಜೀವಂತ ಬೇಯಿಸುವನು.

ಗಾಳಿ
ಎಲ್ಲೋ ಬಂಧಿಯಾಗಿ
ಸುಳಿಯದೆ
ಜೀವಕ್ಕೆ ಬಿಸಿಲ ಜ್ವರ ಬಡಿಸಿ
ಮೈ ಮನ ಕೆಂಡ ಮಾಡಿ
ಆಂತಿಕಾವಸ್ಥೆ ತಲುಪಿಸಿ
ನರಳಾಡಿಸುವುದು.

ಧಗೆ.
ಹೊರಗೂ ಒಳಗೂ ತಕ್ಕೈಸಿ
ನೆಲ್ಲು ಕಣ ಮಾಡುವಾಗ ಹಾರಿ
ಬೆವರಿಳಿವ ಮೈಯನ್ನೇರಿ ಕಚ್ಚುವ
ಅಸಾಧ್ಯ ತುರಿಕೆ ತರುವ ಸುಂಕಿನಂತೆ
ಜೀವ ಕಸಿವಿಸಿಗೊಳಿಸುವುದು.

ಗಿಡ ಮರಗಳು
ಮಾಟಕ್ಕೆ ಮಣಿದವರಂತೆ
ಸ್ಥಬ್ದವಾಗಿ
ಸೂತಕದ ಮನೆಯ ಜನರಂತೆ
ಅರಕ್ತ ಮುಖವ ಹೊತ್ತು
ಚಿತ್ರದಂತೆ ನಿಂತು ಕೊಲ್ಲುವವು.

ಬೆಟ್ಟ ಗುಡ್ಡಗಳು
ಅರುಣನ ವಿಕಟ ಅಟ್ಟಹಾಸಕ್ಕೆ ಶರಣಾಗಿ
ಬೆಂಕಿ ಉಂಡೆಗಳಾಗಿ
ಅಸ್ತವಾದ ಬಹು ಹೊತ್ತಿನವರೆಗೂ ಕಾವು ಕಕ್ಕಿ
ಜೀವಕ್ಕೆ ತಹತಹಿಕೆ ತರುವವು.

ಮಣ್ಣು
ನಿರುಪಾಯವಾಗಿ
ನಿರ್ದಯ ರವಿಯು ಕಾರುವ ಎಲ್ಲಾ ಉರಿ ಹೀರಿ
ಬಿರಿದು ಧೂಳಾಗಿ, ಮೇಲೇರಿ
ಒಡಲೊಳಗಿನ ಉರಿಯನ್ನು ಸೇರಿಸಿ
ಪರಿಸರ ಪೂರ ಕುಂಬಾರನ ಆವಿಗೆಯ ಮಾಡಿ
ಜೀವದ ಸಮಾಧಾನ ಕೆಡಿಸುವುದು.

ತಾಯಿ ತುಂಗಭದ್ರೆ
ದುರ್ಭರ ಬದುಕಿನ ಬೇಗೆಯಲಿ ಬೆಂದ ಜೀವದಂತೆ
ಬಲ, ಚೆಲುವು ಸೋರಿಹೋಗಿ.
ಅಸ್ಥಿ ಪಂಜರದಂತೆ ವಿಕಾರವಾಗಿ
ಧಿಗ್ಗನೆ ಎದುರಾದರೆ ಹೃದಯ ಸ್ಥಂಭಿಸುವ
ಭೂತದಂತಾಗಿದ್ದಾಳೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಕೃತಿಬಲ
Next post ಹಾಗೂ ಹೀಗೂ ದಿನದ ಗುಣವೇ ಕುಸಿದಿರಲಿನ್ನೆನ್ನದೇನು ?

ಸಣ್ಣ ಕತೆ

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…