ಬಿಸಿಲ ನಾಡಿನ ಬೇಸಿಗೆ

ಆಡಿ ಹಗುರವಾಗಲೇನಲ್ಲ! ನಿಜ!
ಕೇಳಿ ಬಿಸಿಲ ನಾಡಿನ ಬವಣೆ.

ರವಿ
ಹತ್ತಿರವೆ ಸರಿದವನಂತೆ
ಉದಯಾಸ್ತಗಳಲಿ ಒಗ್ಗರಣೆಗೆ ಸೌಮ್ಯನಾಗಿ
ಉಳಿದಂತೆ ಬೆಂಕಿ ಬಿಸಿಲನು ಕಾರಿ
ಕಾಲಗಳ ಕತ್ತು ಹಿಸುಕಿ
ಜೀವಗಳ ಜೀವಂತ ಬೇಯಿಸುವನು.

ಗಾಳಿ
ಎಲ್ಲೋ ಬಂಧಿಯಾಗಿ
ಸುಳಿಯದೆ
ಜೀವಕ್ಕೆ ಬಿಸಿಲ ಜ್ವರ ಬಡಿಸಿ
ಮೈ ಮನ ಕೆಂಡ ಮಾಡಿ
ಆಂತಿಕಾವಸ್ಥೆ ತಲುಪಿಸಿ
ನರಳಾಡಿಸುವುದು.

ಧಗೆ.
ಹೊರಗೂ ಒಳಗೂ ತಕ್ಕೈಸಿ
ನೆಲ್ಲು ಕಣ ಮಾಡುವಾಗ ಹಾರಿ
ಬೆವರಿಳಿವ ಮೈಯನ್ನೇರಿ ಕಚ್ಚುವ
ಅಸಾಧ್ಯ ತುರಿಕೆ ತರುವ ಸುಂಕಿನಂತೆ
ಜೀವ ಕಸಿವಿಸಿಗೊಳಿಸುವುದು.

ಗಿಡ ಮರಗಳು
ಮಾಟಕ್ಕೆ ಮಣಿದವರಂತೆ
ಸ್ಥಬ್ದವಾಗಿ
ಸೂತಕದ ಮನೆಯ ಜನರಂತೆ
ಅರಕ್ತ ಮುಖವ ಹೊತ್ತು
ಚಿತ್ರದಂತೆ ನಿಂತು ಕೊಲ್ಲುವವು.

ಬೆಟ್ಟ ಗುಡ್ಡಗಳು
ಅರುಣನ ವಿಕಟ ಅಟ್ಟಹಾಸಕ್ಕೆ ಶರಣಾಗಿ
ಬೆಂಕಿ ಉಂಡೆಗಳಾಗಿ
ಅಸ್ತವಾದ ಬಹು ಹೊತ್ತಿನವರೆಗೂ ಕಾವು ಕಕ್ಕಿ
ಜೀವಕ್ಕೆ ತಹತಹಿಕೆ ತರುವವು.

ಮಣ್ಣು
ನಿರುಪಾಯವಾಗಿ
ನಿರ್ದಯ ರವಿಯು ಕಾರುವ ಎಲ್ಲಾ ಉರಿ ಹೀರಿ
ಬಿರಿದು ಧೂಳಾಗಿ, ಮೇಲೇರಿ
ಒಡಲೊಳಗಿನ ಉರಿಯನ್ನು ಸೇರಿಸಿ
ಪರಿಸರ ಪೂರ ಕುಂಬಾರನ ಆವಿಗೆಯ ಮಾಡಿ
ಜೀವದ ಸಮಾಧಾನ ಕೆಡಿಸುವುದು.

ತಾಯಿ ತುಂಗಭದ್ರೆ
ದುರ್ಭರ ಬದುಕಿನ ಬೇಗೆಯಲಿ ಬೆಂದ ಜೀವದಂತೆ
ಬಲ, ಚೆಲುವು ಸೋರಿಹೋಗಿ.
ಅಸ್ಥಿ ಪಂಜರದಂತೆ ವಿಕಾರವಾಗಿ
ಧಿಗ್ಗನೆ ಎದುರಾದರೆ ಹೃದಯ ಸ್ಥಂಭಿಸುವ
ಭೂತದಂತಾಗಿದ್ದಾಳೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪ್ರಕೃತಿಬಲ
Next post ಹಾಗೂ ಹೀಗೂ ದಿನದ ಗುಣವೇ ಕುಸಿದಿರಲಿನ್ನೆನ್ನದೇನು ?

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys