Home / ಕವನ / ಕವಿತೆ / ಬಿಸಿಲ ನಾಡಿನ ಬೇಸಿಗೆ

ಬಿಸಿಲ ನಾಡಿನ ಬೇಸಿಗೆ

ಆಡಿ ಹಗುರವಾಗಲೇನಲ್ಲ! ನಿಜ!
ಕೇಳಿ ಬಿಸಿಲ ನಾಡಿನ ಬವಣೆ.

ರವಿ
ಹತ್ತಿರವೆ ಸರಿದವನಂತೆ
ಉದಯಾಸ್ತಗಳಲಿ ಒಗ್ಗರಣೆಗೆ ಸೌಮ್ಯನಾಗಿ
ಉಳಿದಂತೆ ಬೆಂಕಿ ಬಿಸಿಲನು ಕಾರಿ
ಕಾಲಗಳ ಕತ್ತು ಹಿಸುಕಿ
ಜೀವಗಳ ಜೀವಂತ ಬೇಯಿಸುವನು.

ಗಾಳಿ
ಎಲ್ಲೋ ಬಂಧಿಯಾಗಿ
ಸುಳಿಯದೆ
ಜೀವಕ್ಕೆ ಬಿಸಿಲ ಜ್ವರ ಬಡಿಸಿ
ಮೈ ಮನ ಕೆಂಡ ಮಾಡಿ
ಆಂತಿಕಾವಸ್ಥೆ ತಲುಪಿಸಿ
ನರಳಾಡಿಸುವುದು.

ಧಗೆ.
ಹೊರಗೂ ಒಳಗೂ ತಕ್ಕೈಸಿ
ನೆಲ್ಲು ಕಣ ಮಾಡುವಾಗ ಹಾರಿ
ಬೆವರಿಳಿವ ಮೈಯನ್ನೇರಿ ಕಚ್ಚುವ
ಅಸಾಧ್ಯ ತುರಿಕೆ ತರುವ ಸುಂಕಿನಂತೆ
ಜೀವ ಕಸಿವಿಸಿಗೊಳಿಸುವುದು.

ಗಿಡ ಮರಗಳು
ಮಾಟಕ್ಕೆ ಮಣಿದವರಂತೆ
ಸ್ಥಬ್ದವಾಗಿ
ಸೂತಕದ ಮನೆಯ ಜನರಂತೆ
ಅರಕ್ತ ಮುಖವ ಹೊತ್ತು
ಚಿತ್ರದಂತೆ ನಿಂತು ಕೊಲ್ಲುವವು.

ಬೆಟ್ಟ ಗುಡ್ಡಗಳು
ಅರುಣನ ವಿಕಟ ಅಟ್ಟಹಾಸಕ್ಕೆ ಶರಣಾಗಿ
ಬೆಂಕಿ ಉಂಡೆಗಳಾಗಿ
ಅಸ್ತವಾದ ಬಹು ಹೊತ್ತಿನವರೆಗೂ ಕಾವು ಕಕ್ಕಿ
ಜೀವಕ್ಕೆ ತಹತಹಿಕೆ ತರುವವು.

ಮಣ್ಣು
ನಿರುಪಾಯವಾಗಿ
ನಿರ್ದಯ ರವಿಯು ಕಾರುವ ಎಲ್ಲಾ ಉರಿ ಹೀರಿ
ಬಿರಿದು ಧೂಳಾಗಿ, ಮೇಲೇರಿ
ಒಡಲೊಳಗಿನ ಉರಿಯನ್ನು ಸೇರಿಸಿ
ಪರಿಸರ ಪೂರ ಕುಂಬಾರನ ಆವಿಗೆಯ ಮಾಡಿ
ಜೀವದ ಸಮಾಧಾನ ಕೆಡಿಸುವುದು.

ತಾಯಿ ತುಂಗಭದ್ರೆ
ದುರ್ಭರ ಬದುಕಿನ ಬೇಗೆಯಲಿ ಬೆಂದ ಜೀವದಂತೆ
ಬಲ, ಚೆಲುವು ಸೋರಿಹೋಗಿ.
ಅಸ್ಥಿ ಪಂಜರದಂತೆ ವಿಕಾರವಾಗಿ
ಧಿಗ್ಗನೆ ಎದುರಾದರೆ ಹೃದಯ ಸ್ಥಂಭಿಸುವ
ಭೂತದಂತಾಗಿದ್ದಾಳೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...