ಅಂದುಕೊಳ್ಳುವುದೊಂದು

ಅಂದುಕೊಳ್ಳುವುದೊಂದು
ಆಗುವುದು ಮತ್ತೊಂದು|
ಆಸೆಪಡುವುದೊಂದು
ನಿರಾಸೆ ತರುವುದಿನ್ನೊಂದು||

ಮನ ಬಯಸುವುದೊಂದು
ವಿಧಿ ನೀಡುವುದಿನ್ನೊಂದು|
ಹೀಗೆಯೇ ಜೀವನ
ಆ ವಿಧಿಯ ವಿದಿವಿಧಾನ|
ಅದರೂ ಭಯಪಡದೆ
ಬಾಳಸಾಗಿಸಬೇಕು
ಗುರಿ ಸಾಧಿಸುವ ಛಲವಿರಬೇಕು||

ದೇವರು, ಧರ್ಮ
ಸತ್ಯದ ಅರಿವಿರಬೇಕು|
ಅನುದಿನ ಆರಾಧಿಸಿ
ನಿತ್ಯ ಆಚರಿಸಿ ಅನುಸರಿಸಿ
ನಡೆಯಲೇಬೇಕು|
ಕಾಯಕವ ಮಾಡುತ
ಹರಿಯ ಭಜಿಸುತ್ತಿರಬೇಕು||

ಏನೇ ಬಂದರು ಎದುರಿಸಬೇಕು
ಈಜಿ ಈ ಸಂಸಾರವನು ಸಾಗಲೂ ಬೇಕು|
ಸಂಕುಚಿತ ಭಾವನೆಯ ಕೈಬಿಡಬೇಕು
ಎಲ್ಲವು ಹರಿಚಿತ್ತವೆಂದೆನ್ನುತಲಿ
ಅವನಿಗರ್ಪಿಸಿ ಸಾಗುತಿರಬೇಕು||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಿಡ್ಡಕಾಲುಗಳನ್ನು ಲಂಬಗೂಳಿಸುವ ಲಿಂಟ್ ಚಿಕಿತ್ಸೆ
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೮

ಸಣ್ಣ ಕತೆ

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…