ನಾನು ಅಂಧನಾಗಿ

ನಾನು ಅಂಧಕನಾಗಿ
ಜನಿಸಿರಲುಬಹುದು
ಅದಕೆ ಕಾರಣಗಳೇನೇ
ಇರಲುಬಹುದು|
ಆದರೆ ಎನಗೆ ಬದುಕಲು
ಅವಕಾಶದ ನೀಡಿ||

ಅನುಕಂಪದ ಅಲೆಗಿಂತ
ಸ್ವಾಭಿಮಾನ ಒಳಿತು
ಆತ್ಮಾಭಿಮಾನ ಹಿರಿದು
ಅದಕೆ ನೀರೆರೆದು ಅಂಧಕಾರವ
ಹೊಡೆದೋಡಿಸಿ||

ಭಿಕ್ಷೆ ಬೇಡಲೆನಗೆ ಮನಸಿಲ್ಲಾ
ಹಣದ ಭಿಕ್ಷೆ ಅಲ್ಪತೃಪ್ತಿ
ಜ್ಞಾನಧೀಕ್ಷೆ ಮಹಾಶಕ್ತಿ|
ಕೈಯಲಾಗುವ ಕಾಯಕವ ಮಾಡಿ
ಬದುಕಲಿಚ್ಚೆಯುಳ್ಳವರಿಗೆ
ಅನುಭವಗಳಿಸೆ ಅವಕಾಶ ನೀಡಿ|
ಹರಸೆಮ್ಮ ಅಭಿಲಾಶೆಯ
ಪೂರೈಸಿರೆಮ್ಮ ಮನದಿಚ್ಚೆಯ||

ಕಣ್ಣಿದ್ದು ಅಂಧರಂತೆ
ನಟಿಸ ಬೇಡಿ|
ಕಿವಿ, ಬಾಯಿಯಿದ್ದು
ಮೂಗನಂತೆ ವರ್ತಿಸಬೇಡಿ|
ಅಂಗವಿಕಲರನ್ನ ಕಡೆಗಣಿಸಬೇಡಿ
ವಿಕಲ ಚೇತನರಿಗೂ ಬದುಕಲು
ಹಕ್ಕಿದೆ, ಆದರದನೆ ಕಸಿದು
ಭಿಕ್ಷಾಟನೆಗೆ ನೂಕಬೇಡಿ|
ನನ್ನ ಈ ಕುರುಡ ಮೂಗನ
ಪ್ರಾರ್ಥನೆಯ ಪರೀಕ್ಷಿಸದಿರಿ
ಮುಂದೆ ಪಶ್ಚಾತ್ತಾಪ ಪಡದಿರಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರಲಿವೆ ಮಾತನಾಡುವ ಕಂಪ್ಯೂಟರ್‌ಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೨

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

cheap jordans|wholesale air max|wholesale jordans|wholesale jewelry|wholesale jerseys