ನಾನು ಅಂಧನಾಗಿ

ನಾನು ಅಂಧಕನಾಗಿ
ಜನಿಸಿರಲುಬಹುದು
ಅದಕೆ ಕಾರಣಗಳೇನೇ
ಇರಲುಬಹುದು|
ಆದರೆ ಎನಗೆ ಬದುಕಲು
ಅವಕಾಶದ ನೀಡಿ||

ಅನುಕಂಪದ ಅಲೆಗಿಂತ
ಸ್ವಾಭಿಮಾನ ಒಳಿತು
ಆತ್ಮಾಭಿಮಾನ ಹಿರಿದು
ಅದಕೆ ನೀರೆರೆದು ಅಂಧಕಾರವ
ಹೊಡೆದೋಡಿಸಿ||

ಭಿಕ್ಷೆ ಬೇಡಲೆನಗೆ ಮನಸಿಲ್ಲಾ
ಹಣದ ಭಿಕ್ಷೆ ಅಲ್ಪತೃಪ್ತಿ
ಜ್ಞಾನಧೀಕ್ಷೆ ಮಹಾಶಕ್ತಿ|
ಕೈಯಲಾಗುವ ಕಾಯಕವ ಮಾಡಿ
ಬದುಕಲಿಚ್ಚೆಯುಳ್ಳವರಿಗೆ
ಅನುಭವಗಳಿಸೆ ಅವಕಾಶ ನೀಡಿ|
ಹರಸೆಮ್ಮ ಅಭಿಲಾಶೆಯ
ಪೂರೈಸಿರೆಮ್ಮ ಮನದಿಚ್ಚೆಯ||

ಕಣ್ಣಿದ್ದು ಅಂಧರಂತೆ
ನಟಿಸ ಬೇಡಿ|
ಕಿವಿ, ಬಾಯಿಯಿದ್ದು
ಮೂಗನಂತೆ ವರ್ತಿಸಬೇಡಿ|
ಅಂಗವಿಕಲರನ್ನ ಕಡೆಗಣಿಸಬೇಡಿ
ವಿಕಲ ಚೇತನರಿಗೂ ಬದುಕಲು
ಹಕ್ಕಿದೆ, ಆದರದನೆ ಕಸಿದು
ಭಿಕ್ಷಾಟನೆಗೆ ನೂಕಬೇಡಿ|
ನನ್ನ ಈ ಕುರುಡ ಮೂಗನ
ಪ್ರಾರ್ಥನೆಯ ಪರೀಕ್ಷಿಸದಿರಿ
ಮುಂದೆ ಪಶ್ಚಾತ್ತಾಪ ಪಡದಿರಿ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬರಲಿವೆ ಮಾತನಾಡುವ ಕಂಪ್ಯೂಟರ್‌ಗಳು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೧೦೨

ಸಣ್ಣ ಕತೆ

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಬೂಬೂನ ಬಾಳು

    ನಮ್ಮೂರು ಚಿಕ್ಕ ಹಳ್ಳಿ. ಹಳ್ಳಿಯೆಂದ ಕೂಡಲೆ, ಅದಕ್ಕೆ ಬರಬೇಕಾದ ಎಲ್ಲ ವಿಶೇಷಣಗಳೂ ಬರಬೇಕಲ್ಲವೇ ? ಸುತ್ತಲೂ ಹಸುರಾಗಿ ಒಪ್ಪುವ ಹೊಲಗಳು, ನಾಲ್ಕೂ ಕಡೆಗೆ ಸಾಗಿ ಹೋಗುವ ದಾರಿಗಳು,… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…