ರೂಪಾಂತರ

ಕಡಲೊಳಗಿನ ಹನಿ ಹನಿ
ಸೂರ್ಯನೊಳಗಿನ ಬೆಳಕ ರೇಖೆಗಳು
ಎಲ್ಲ ಜಂಜಡವ ಹೊತ್ತು ಸಾಗಿದ ಕಾಲ.

ಮನದ ಭಾಷೆದ ಅರಳಿದ ಶಬ್ದ
ಶಬ್ದದೊಳಗಿನ ನಿಶ್ಶಬ್ದ
ಎಲ್ಲ ಮಥಿಸಿದ ಆತ್ಮ ಸಂಗಾತ.

ಕನವರಿಸಿದ ಏಕಾಂತ
ಮೊಳಕೆ ಒಡೆಯುವ ಬೀಜ
ಎಲ್ಲ ಫಸಲೊಡೆದ ಪೈರು.

ಕುಡಿ ಒಡೆದ ಚಿಗುರು
ಸ್ಪರ್ಶಗಳ ಲಯ ಬಾಷೆ
ಎಲ್ಲ ಹೆಮ್ಮರವಾಗುವ ವೃಕ್ಷ.

ಹನಿಗೆ ಚಿಗುರಿದ ಬೇರು
ಘನಕೆ ಅರಳಿದ ಕೊಯ್ಲ
ಎಲ್ಲ ಸುಗ್ಗೀ ಹಿಗ್ಗಿನ ಮ್ಯಾಳ.

ಚಿಗುರಿ ಹುಟ್ಟಿ ಬೆಳೆದು ಸುಳಿದ
ದಿಕ್ಕಿಗೆ ಚಲಿಸಿದ ಗಾಳಿ ಗಂಧ
ಎಲ್ಲ ಬಾಗಿಲು ತೆರೆದು ದಾಟಿ ಹೋದ ಹಕ್ಕಿ.

ಮಥಿಸಿದ ಬೆಳಕು ಚಿಗುರು ಭಾಷೆ
ಅರ್ವಿಭಾವಕೆ ಒಲುಮೆಯ ಹಾಡು
ಜಗದ ನೆಲಮುಗಿಲುಗಳ ಎಲ್ಲ ರೂಪಾಂತರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮದುವೆಯಾಯಿತು ಉಷೆಗೆ
Next post ಅಮೃತ ತರಂಗಿಣಿ

ಸಣ್ಣ ಕತೆ

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…