ರೂಪಾಂತರ

ಕಡಲೊಳಗಿನ ಹನಿ ಹನಿ
ಸೂರ್ಯನೊಳಗಿನ ಬೆಳಕ ರೇಖೆಗಳು
ಎಲ್ಲ ಜಂಜಡವ ಹೊತ್ತು ಸಾಗಿದ ಕಾಲ.

ಮನದ ಭಾಷೆದ ಅರಳಿದ ಶಬ್ದ
ಶಬ್ದದೊಳಗಿನ ನಿಶ್ಶಬ್ದ
ಎಲ್ಲ ಮಥಿಸಿದ ಆತ್ಮ ಸಂಗಾತ.

ಕನವರಿಸಿದ ಏಕಾಂತ
ಮೊಳಕೆ ಒಡೆಯುವ ಬೀಜ
ಎಲ್ಲ ಫಸಲೊಡೆದ ಪೈರು.

ಕುಡಿ ಒಡೆದ ಚಿಗುರು
ಸ್ಪರ್ಶಗಳ ಲಯ ಬಾಷೆ
ಎಲ್ಲ ಹೆಮ್ಮರವಾಗುವ ವೃಕ್ಷ.

ಹನಿಗೆ ಚಿಗುರಿದ ಬೇರು
ಘನಕೆ ಅರಳಿದ ಕೊಯ್ಲ
ಎಲ್ಲ ಸುಗ್ಗೀ ಹಿಗ್ಗಿನ ಮ್ಯಾಳ.

ಚಿಗುರಿ ಹುಟ್ಟಿ ಬೆಳೆದು ಸುಳಿದ
ದಿಕ್ಕಿಗೆ ಚಲಿಸಿದ ಗಾಳಿ ಗಂಧ
ಎಲ್ಲ ಬಾಗಿಲು ತೆರೆದು ದಾಟಿ ಹೋದ ಹಕ್ಕಿ.

ಮಥಿಸಿದ ಬೆಳಕು ಚಿಗುರು ಭಾಷೆ
ಅರ್ವಿಭಾವಕೆ ಒಲುಮೆಯ ಹಾಡು
ಜಗದ ನೆಲಮುಗಿಲುಗಳ ಎಲ್ಲ ರೂಪಾಂತರ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮದುವೆಯಾಯಿತು ಉಷೆಗೆ
Next post ಅಮೃತ ತರಂಗಿಣಿ

ಸಣ್ಣ ಕತೆ

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಹೃದಯ ವೀಣೆ ಮಿಡಿಯೆ….

    ಒಂದು ವಾರದಿಂದಲೇ ಮನೆಯಲ್ಲಿ ತಯಾರಿ ನಡೆದಿತ್ತು. ತಂಗಿಯನ್ನು ನೋಡಲು ಬೆಂಗಳೂರಿನಿಂದ ವರ ಬರುವವನಿದ್ದ. ಗೋಪಿ ಅವಳನ್ನು ಆ ವರನ ಹೆಸರೆತ್ತಿ ಚುಡಾಯಿಸುತ್ತಿದ್ದ, ರೇಗಿಸುತ್ತಿದ್ದ. ಅವಳ ಕೆನ್ನೆ ಕೆಂಪಗೆ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…