ಅಮೃತ ತರಂಗಿಣಿ

ಯಾವ ರಾಗ ಪಲ್ಲವಿಯ ಪದದನುಪದದನುನಯ
ಸರ ಸ್ವರದಮೃತ ಮಾನಸದನುಲಾಪದದನಾಲಯ |

ಋತು ಋತುವಿನ ಕ್ರತುವು ನೀನು,
ಬಾಳಿನೆಳೆಯ ತಂಬೆಲರವು,
ಪಥ ಪಂಥ ಪಾಂಥದ ಪಥವು ನೀನು,
ಬೆಳಗು ಬೆಳಕಿನ ಕಿರಣವು.

ನನ್ನ ಜಲಧಿಯ ತುಂಬು ಬಿಂಬವು
ನಿನ್ನ ಚಿಲುಮೆ ಬಿಂದು ಕಸವರ,
ಒಲವೊಲವಗಣ್ಣಿನ ಕನಸಬಿಂಬವು
ನಿನ್ನ ಸುಮದಧರದ ಕೇಸರ,

ನನ್ನ ಮೆತ್ತೆಯ ಮೃದು ಮೋದ ತಲ್ಪವು
ನಿನ್ನ ಕುಂಭದೆದೆಯ ತುಂಬುರ,
ಪ್ರಾಣ-ಹರಣದ ಭಾವ ಕಲ್ಪವು
ನಿನ್ನ ರತ್ನ ಗರ್ಭದ ಹಂದರ,

ಕ್ಷೀರ ದಧಿಘೃತ ಮಧು ಸವಿಯು ನೀನು
ಇಂದ್ರಿಯೊಳಿಂದ್ರಿಯದಾನಂದವು,
ಅನಂತ ತಾನನಂತದೈಸಿರಿ
ಋಷಿಗಡಣದಮರರೊಲಿಸಿದ ಶಕುತಿಯು ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರೂಪಾಂತರ
Next post ಆಕಾಶದಲ್ಲಲ್ಲಿ ನಿಲ್ದಾಣಗಳಿದ್ದಿದ್ದರೆ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…