ನೀರು ಮಾಯಾ ವಸ್ತುವಲ್ಲ

ನೀರೆಂಬುದು ಬಯಸಿದಾಗಲೆಲ್ಲ
ಸಿಗುವ ಮಾಯಾ ವಸ್ತುವಲ್ಲ ||

ಬೇಕಾಬಿಟ್ಟಿ ಬಳಸಿದರೆ
ಕುಡಿಯಲು ನೀರಿರದೆ
ಮಣ್ಣಾಗಿ ಹೋಗುವೆ ಅಣ್ಣಾ ||
ನೀನು ಮಣ್ಣಾಗಿ ಹೋಗುವೆ ಅಣ್ಣಾ ||

ಭೂ ತಾಯಿಯ ಕೊರೆದು
ಜಲದ ಕಣ್ಣ ಸೆಳೆದು
ಒಣಭೂಮಿ ನೆನದರೇನಣ್ಣಾ ||
ಕೇಳು ಒಣಭೂಮಿ ನೆನದರೇನಣ್ಣಾ ||

ಮುಗಿಲಿಂದ ಬಂದ ಭಾಗ್ಯ
ಕೂಡಿಡಲಿಲ್ಲ ನೀನು ಯೋಗ್ಯ
ಕೆರೆ ಬಾವಿ ಕಟ್ಟೆಗಳ ಮರೆತೆಯಣ್ಣಾ ||
ನೀನು ಕೆರೆ ಬಾವಿ ಕಟ್ಟೆಗಳ ಮರೆತೆಯಣ್ಣಾ ||

ಕೈಲಿದ್ದ ಜಲವ
ಜಂಭ ಮಾಡಿ ಕಳೆದೆ
ನೀರಿರದೆ ಹೊಲ ಉತ್ತರೇನಣ್ಣಾ
ನೀನು ನೀರಿರದೆ ಹೊಲ ಉತ್ತರೇನಣ್ಣಾ ||

ಬಿದ್ದ ಜಲವ ಹಿಂಗಿಸು
ಅದ ಮಿತದಿಂದ ಬಳಸು
ಕೆರೆ ಬಾವಿಕಟ್ಟೆಗಳೆ ಸಂಪತ್ತಣ್ಣಾ ||
ನಿನಗೆ ಕೆರೆ ಬಾವಿ ಕಟ್ಟೆಗಳೆ ಸಂಪತ್ತಣ್ಣಾ ||

*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿಜವೇ ಇದು ನಿಜವೇ
Next post ನಾನಾ ವಿದ್ಯೆಗಳೆಲ್ಲಾ ಕಲಿಯದೇನರಿಯದಲ್ಲಾ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…