ನೀರೆಂಬುದು ಬಯಸಿದಾಗಲೆಲ್ಲ
ಸಿಗುವ ಮಾಯಾ ವಸ್ತುವಲ್ಲ ||
ಬೇಕಾಬಿಟ್ಟಿ ಬಳಸಿದರೆ
ಕುಡಿಯಲು ನೀರಿರದೆ
ಮಣ್ಣಾಗಿ ಹೋಗುವೆ ಅಣ್ಣಾ ||
ನೀನು ಮಣ್ಣಾಗಿ ಹೋಗುವೆ ಅಣ್ಣಾ ||
ಭೂ ತಾಯಿಯ ಕೊರೆದು
ಜಲದ ಕಣ್ಣ ಸೆಳೆದು
ಒಣಭೂಮಿ ನೆನದರೇನಣ್ಣಾ ||
ಕೇಳು ಒಣಭೂಮಿ ನೆನದರೇನಣ್ಣಾ ||
ಮುಗಿಲಿಂದ ಬಂದ ಭಾಗ್ಯ
ಕೂಡಿಡಲಿಲ್ಲ ನೀನು ಯೋಗ್ಯ
ಕೆರೆ ಬಾವಿ ಕಟ್ಟೆಗಳ ಮರೆತೆಯಣ್ಣಾ ||
ನೀನು ಕೆರೆ ಬಾವಿ ಕಟ್ಟೆಗಳ ಮರೆತೆಯಣ್ಣಾ ||
ಕೈಲಿದ್ದ ಜಲವ
ಜಂಭ ಮಾಡಿ ಕಳೆದೆ
ನೀರಿರದೆ ಹೊಲ ಉತ್ತರೇನಣ್ಣಾ
ನೀನು ನೀರಿರದೆ ಹೊಲ ಉತ್ತರೇನಣ್ಣಾ ||
ಬಿದ್ದ ಜಲವ ಹಿಂಗಿಸು
ಅದ ಮಿತದಿಂದ ಬಳಸು
ಕೆರೆ ಬಾವಿಕಟ್ಟೆಗಳೆ ಸಂಪತ್ತಣ್ಣಾ ||
ನಿನಗೆ ಕೆರೆ ಬಾವಿ ಕಟ್ಟೆಗಳೆ ಸಂಪತ್ತಣ್ಣಾ ||
*****
Latest posts by ರಾಜಪ್ಪ ದಳವಾಯಿ (see all)
- ಪಂಚರಾತ್ರ (ತೊಗಲುಬೊಂಬೆಯಾಟ) - August 7, 2013
- ಅಂತರಗಟ್ಟೆವ್ವ (ಬೀದಿ ನಾಟಕದ ಹಾಡು) - December 14, 2011
- ಭಿನ್ನ ಭೇದವ ಮಾಡಬ್ಯಾಡಿರಿ (ಬೀದಿ ನಾಟಕದ ಹಾಡು) - December 9, 2011