Home / ಕವನ / ಅನುವಾದ / ಇವತ್ತು ರಾತ್ರಿ ಬರೆಯಬಹುದು ….

ಇವತ್ತು ರಾತ್ರಿ ಬರೆಯಬಹುದು ….

ಇವತ್ತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು.
ಹೀಗೆ, ‘ರಾತ್ರಿ ಚೂರು ಚೂರಾಗಿದೆ,
ದೂರದಲ್ಲಿ ನಕ್ಪತ್ರ ಮಿನುಗಿದೆ’.
ರಾತ್ರಿಯ ಗಾಳಿ ಆಕಾಶದಲ್ಲಿ ಸುಳಿದು ಹಾಡುತ್ತಿದೆ.
ಇವತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು.
ಅವಳನ್ನು ಪ್ರೀತಿಸಿದೆ. ಒಮ್ಮೊಮ್ಮೆ ಅವಳೂ ನನ್ನ ಪ್ರೀತಿಸಿದಳು.
ಇಂಥ ರಾತ್ರಿಗಳಲ್ಲಿ ಅವಳನ್ನು ಅಪ್ಪಿ ಹಿಡಿದೆ.
ಮೋಡವಿರದ ಸ್ವಚ್ಛ ಆಕಾಶ. ಮತೆ ಮತ್ತೆ ಮುತಿಟ್ಟೆ.
ಅವಳು ಪ್ರೀತಿಸಿದಳು. ಒಮ್ಮೊಮ್ಮೆ ನಾನೂ ಅವಳನು ಪ್ರೀತಿಸಿದೆ.
ಅಂಥ ವಿಶಾಲ ನಿಶ್ಚಲ ಕಣ್ಣು, ಪ್ರೀತಿಸದಿರುವುದು ಹೇಗೆ.
ಇವತ್ತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು.
ಅವಳನ್ನು ಪ್ರೀತಿಸುವುದಿಲ್ಲ. ಅವಳನ್ನು ಕಳೆದುಕೊಂಡೆ.
ಅಗಾಧ ರಾತ್ರಿ. ಅವಳಿಲ್ಲದೆ ಇನ್ನೂ ಅಗಾಧವಾಗಿದೆ.
ಹುಲ್ಲ ಮೇಲೆ ಇಬ್ಬನಿ ಬೀಳುವ ಸದ್ದಿನಂತೆ ಆತ್ಮದ ಮೇಲೆ ಕವಿತೆಯ ಹನಿಗಳು.
ನನ್ನ ಪ್ರೀತಿ ಅವಳನ್ನುಳಿಸಿಕೊಳ್ಳದಿದ್ದರೆ ಏನಂತೆ.
ರಾತ್ರಿ ಛಿದ್ರವಾಗಿದೆ. ಅವಳಿಲ್ಲ ನನ್ನೊಡನೆ.
ಅಷ್ಟೆ. ದೂರದಲ್ಲಿ ಯಾರದೋ ಹಾಡು. ದೂರದಲ್ಲಿ.
ಅವಳನ್ನು ಕಳೆದುಕೊಂಡು ಆತ್ಮಕ್ಕೆ ತೃಪಿಯಿಲ್ಲ.
ನೋಟ ಅವಳನ್ನು ಹುಡುಕುತ್ತದೆ, ಬಳಿಸಾರಲೆಂದು.
ಹೃದಯ ನೋಡುತ್ತದೆ ಅವಳನ್ನು, ನನ್ನೊಡನೆ ಅವಳಿಲ್ಲ.
ಅದೇ ಇರುಳು ಅದೇ ಮರದ ಮೇಲೆ ಅದೇ ತಿಂಗಳು ಸುರಿದಿದೆ.
ನಾವು ಮಾತ್ರ ಅದೇ ನಾವು ಅಲ್ಲ, ಅದೇ ನಾವು ಆಗಿ ಉಳಿದಿಲ್ಲ.
ಅವಳ ಮೇಲೆ ಪ್ರೀತಿಯಿಲ್ಲ. ಖಂಡಿತ. ಎಷ್ಟೊಂದು ಪ್ರೀತಿ ಇತ್ತು.
ಅವಳ ಕಿವಿಯ ಮುಟ್ಟಲೆಂದು ನನ್ನ ದನಿ ಗಾಳಿಯಾಗಿ ಸುಳಿದಿತ್ತು.
ಇನ್ನು ಮೇಲೆ ಅವಳು ಮತ್ತೊಬ್ಬರಿಗೆ, ಮೊದಲು ನಾನು ಕೊಟ್ಟ ಮುತ್ತುಗಳಂತೆ,
ಅವಳ ದನಿ, ಅವಳ ಹೊಳೆವ ಮೈ, ಅವಳ ಅನಂತ ನೋಟ ಇನ್ನೊಬ್ಬರಿಗೆ.
ಅವಳ ಮೇಲೆ ಈಗ ಪ್ರೀತಿ ಇಲ್ಲ, ಖಂಡಿತ.
ಪ್ರೀತಿ ಇರಬಹುದೇನೋ.
ಪ್ರೀತಿ ಎಷ್ಟು ಕಿರಿದು, ಮರೆವು ಎಷ್ಟು ಹಿರಿದು.
ಇಂಥ ರಾತ್ರಿಯಲ್ಲಿ ಅವಳನ್ನು ಅಪ್ಪಿದ್ದೆ
ಅವಳಿಲ್ಲದೆ ಈಗ ಆತ್ಮಕ್ಕೆ ತೃಪ್ತಿ ಇಲ್ಲ.
ಅವಳು ನನಗೆ ಕೊಡುವ ಕೊನೆಯ ನೋವು ಇದೇ ಇರಬಹುದು
ಅವಳ ಬಗ್ಗೆನಾನು ಬರೆಯುವುದು ಇದೇ ಕೊನೆಯ ಕವಿತೆ ಇರಬಹುದು.
*****
ಮೂಲ: ಪಾಬ್ಲೋ ನೆರುಡಾ

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...