ಇವತ್ತು ರಾತ್ರಿ ಬರೆಯಬಹುದು ….

ಇವತ್ತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು.
ಹೀಗೆ, ‘ರಾತ್ರಿ ಚೂರು ಚೂರಾಗಿದೆ,
ದೂರದಲ್ಲಿ ನಕ್ಪತ್ರ ಮಿನುಗಿದೆ’.
ರಾತ್ರಿಯ ಗಾಳಿ ಆಕಾಶದಲ್ಲಿ ಸುಳಿದು ಹಾಡುತ್ತಿದೆ.
ಇವತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು.
ಅವಳನ್ನು ಪ್ರೀತಿಸಿದೆ. ಒಮ್ಮೊಮ್ಮೆ ಅವಳೂ ನನ್ನ ಪ್ರೀತಿಸಿದಳು.
ಇಂಥ ರಾತ್ರಿಗಳಲ್ಲಿ ಅವಳನ್ನು ಅಪ್ಪಿ ಹಿಡಿದೆ.
ಮೋಡವಿರದ ಸ್ವಚ್ಛ ಆಕಾಶ. ಮತೆ ಮತ್ತೆ ಮುತಿಟ್ಟೆ.
ಅವಳು ಪ್ರೀತಿಸಿದಳು. ಒಮ್ಮೊಮ್ಮೆ ನಾನೂ ಅವಳನು ಪ್ರೀತಿಸಿದೆ.
ಅಂಥ ವಿಶಾಲ ನಿಶ್ಚಲ ಕಣ್ಣು, ಪ್ರೀತಿಸದಿರುವುದು ಹೇಗೆ.
ಇವತ್ತು ರಾತ್ರಿ ಅತಿ ದುಃಖದ ಕವಿತೆ ಬರೆಯಬಹುದು.
ಅವಳನ್ನು ಪ್ರೀತಿಸುವುದಿಲ್ಲ. ಅವಳನ್ನು ಕಳೆದುಕೊಂಡೆ.
ಅಗಾಧ ರಾತ್ರಿ. ಅವಳಿಲ್ಲದೆ ಇನ್ನೂ ಅಗಾಧವಾಗಿದೆ.
ಹುಲ್ಲ ಮೇಲೆ ಇಬ್ಬನಿ ಬೀಳುವ ಸದ್ದಿನಂತೆ ಆತ್ಮದ ಮೇಲೆ ಕವಿತೆಯ ಹನಿಗಳು.
ನನ್ನ ಪ್ರೀತಿ ಅವಳನ್ನುಳಿಸಿಕೊಳ್ಳದಿದ್ದರೆ ಏನಂತೆ.
ರಾತ್ರಿ ಛಿದ್ರವಾಗಿದೆ. ಅವಳಿಲ್ಲ ನನ್ನೊಡನೆ.
ಅಷ್ಟೆ. ದೂರದಲ್ಲಿ ಯಾರದೋ ಹಾಡು. ದೂರದಲ್ಲಿ.
ಅವಳನ್ನು ಕಳೆದುಕೊಂಡು ಆತ್ಮಕ್ಕೆ ತೃಪಿಯಿಲ್ಲ.
ನೋಟ ಅವಳನ್ನು ಹುಡುಕುತ್ತದೆ, ಬಳಿಸಾರಲೆಂದು.
ಹೃದಯ ನೋಡುತ್ತದೆ ಅವಳನ್ನು, ನನ್ನೊಡನೆ ಅವಳಿಲ್ಲ.
ಅದೇ ಇರುಳು ಅದೇ ಮರದ ಮೇಲೆ ಅದೇ ತಿಂಗಳು ಸುರಿದಿದೆ.
ನಾವು ಮಾತ್ರ ಅದೇ ನಾವು ಅಲ್ಲ, ಅದೇ ನಾವು ಆಗಿ ಉಳಿದಿಲ್ಲ.
ಅವಳ ಮೇಲೆ ಪ್ರೀತಿಯಿಲ್ಲ. ಖಂಡಿತ. ಎಷ್ಟೊಂದು ಪ್ರೀತಿ ಇತ್ತು.
ಅವಳ ಕಿವಿಯ ಮುಟ್ಟಲೆಂದು ನನ್ನ ದನಿ ಗಾಳಿಯಾಗಿ ಸುಳಿದಿತ್ತು.
ಇನ್ನು ಮೇಲೆ ಅವಳು ಮತ್ತೊಬ್ಬರಿಗೆ, ಮೊದಲು ನಾನು ಕೊಟ್ಟ ಮುತ್ತುಗಳಂತೆ,
ಅವಳ ದನಿ, ಅವಳ ಹೊಳೆವ ಮೈ, ಅವಳ ಅನಂತ ನೋಟ ಇನ್ನೊಬ್ಬರಿಗೆ.
ಅವಳ ಮೇಲೆ ಈಗ ಪ್ರೀತಿ ಇಲ್ಲ, ಖಂಡಿತ.
ಪ್ರೀತಿ ಇರಬಹುದೇನೋ.
ಪ್ರೀತಿ ಎಷ್ಟು ಕಿರಿದು, ಮರೆವು ಎಷ್ಟು ಹಿರಿದು.
ಇಂಥ ರಾತ್ರಿಯಲ್ಲಿ ಅವಳನ್ನು ಅಪ್ಪಿದ್ದೆ
ಅವಳಿಲ್ಲದೆ ಈಗ ಆತ್ಮಕ್ಕೆ ತೃಪ್ತಿ ಇಲ್ಲ.
ಅವಳು ನನಗೆ ಕೊಡುವ ಕೊನೆಯ ನೋವು ಇದೇ ಇರಬಹುದು
ಅವಳ ಬಗ್ಗೆನಾನು ಬರೆಯುವುದು ಇದೇ ಕೊನೆಯ ಕವಿತೆ ಇರಬಹುದು.
*****
ಮೂಲ: ಪಾಬ್ಲೋ ನೆರುಡಾ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಮಲ
Next post ಸೌಂದರ್ಯದ ಉದ್ಯಮ, ಸೌಂದರ್ಯದ ರಾಜಕೀಯ

ಸಣ್ಣ ಕತೆ

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

cheap jordans|wholesale air max|wholesale jordans|wholesale jewelry|wholesale jerseys