Home / ಕವನ / ಅನುವಾದ / ನಮಗೆ ಗೊತ್ತು

ನಮಗೆ ಗೊತ್ತು

ಕೂಡಲೇ ಏನಾದರೂ ಮಾಡಬೇಕು…
ಇದಿಷ್ಟು ನಮಗೆ ಗೊತ್ತು.
ಅದಕ್ಕಿನ್ನೂ ಕಾಲ ಬಂದಿಲ್ಲ.
ಈಗ ತಡವಾಗಿದೆ.
ನಮಗೆ ಗೊತ್ತು.

ನಾವು ತಕ್ಕಮಟ್ಟಿಗೆ ಅನುಕೂಲಸ್ಥರು
ಹೀಗೇ ಬದುಕುತ್ತೇವೆ
ಇದರಿಂದೆಲ್ಲಾ ಏನೂ ಫಲವಿಲ್ಲಾ,
ನಮಗೆ ಗೊತ್ತು.

ನಮಗೆ ಗೊತ್ತು, ತಪ್ಪು ನಮ್ಮದೇ.
ಬೈಯುವುದಾದರೆ ತಪ್ಪು ನಮ್ಮದಲ್ಲ
ತಪ್ಪು ನಮ್ಮದಲ್ಲ ಅಂತಲೇ ಬೈಸಿಕೊಳ್ಳುವ ತಪ್ಪು ನಮ್ಮದೆ.
ನಮಗೆ ಗೊತ್ತು, ನಮಗೆ ಸಾಕಾಗಿ ಹೋಗಿದೆ.
ಸುಮ್ಮನೆ ಬಾಯಿಮುಚ್ಚಿಕೊ೦ಡಿರುವುದು ಒಳ್ಳೆಯದು.
ಆದರೆ ನಾವು ಸುಮ್ಮನಿರುವುದಿಲ್ಲ.
ನಮಗೆ ಗೊತ್ತು. ನಮಗೆ ಗೊತ್ತು.

ನಿಜವಾಗಿ ಯಾರಿಗೂ ಹೆಲ್ಪುಮಾಡಲು ಸಾಧ್ಯವಿಲ್ಲ, ನಮಗೆ ಗೊತ್ತು.
ಯಾರೂ ನಮಗೆ ಸಹಾಯಮಾಡಲು ಬರುವುದಿಲ್ಲ ನಮಗೆ ಗೊತ್ತು.
ಗೊತ್ತು, ಗೊತ್ತು.

ನಮಗೆ ಗೊತ್ತು, ನಾವು ಪ್ರತಿಭಾವಂತರು, ನಾವು ಜಾಣರು.
ಇಲ್ಲ ಅಥವ ಏನೂ ಇಲ್ಲ ಅನುವುದರಲ್ಲಿ
ಒಂದನ್ನು ಆಯ್ದುಕೊಳ್ಳುವ ಸ್ವಾತಂತ್ರ್ಯ ನಮಗಿದೆ, ಗೊತ್ತು.
ಈ ಸಮಸ್ಯೆಯನ್ನು ಆಳವಾಗಿ ಪರಿಶೀಲಿಸಬೇಕೆಂದು ನಮಗೆ ಗೊತ್ತು.
ಟೀಗೆ ಒಂದೂವರೆ ಚಮಚ ಸಕ್ಕರೆ ಬೇಕು,
ನಮಗೆ ಗೊತ್ತು, ಗೊತ್ತು.

ಶೋಷಣೆಯ ಬಗ್ಗೆ ನಮಗೆಲ್ಲಾಗೊತ್ತು.
ನಾವು ಸದಾ ಶೋಷಣೆಯ ವಿರೋಧಿಗಳು.
ಸಿಗರೇಟಿನ ಬೆಲೆ ಜಾಸ್ತಿಯಾಗಿದೆ,
ನಮಗೆ ಗೊತ್ತು.

ದೇಶ ಸುಂಕಷ್ಟಕ್ಕೆ ಸಿಲುಕಿದೆ ಎಂದು ನಮಗೆ ಚೆನ್ನಾಗಿ ಗೊತ್ತು.
ನಾವು ಹೇಳಿದ ಮಾತು, ಮಾಡಿದ ಊಹೆ ಎಂದೂ ತಪ್ಪುವುದಿಲ್ಲ.
ಆದರೆ ಮಾತು ಊಹೆ ಎರಡೂ ವ್ಯರ್‍ಥ.
ಎಲ್ಲಾ ಬರೀ ಮಾತು.
ನಮಗೆ ಗೊತ್ತು.

ತಗ್ಗಿ ಬಗ್ಗಿ ನಡೆದರೆ ಉಪಯೋಗವಿಲ್ಲ.
ಆದರೂ ತಗ್ಗಿ ಬಗ್ಗಿನಡೆಯುತ್ತೇವೆ.
ನಮಗೆ ಗೊತ್ತು, ಗೊತ್ತು.

ಇದೆಲ್ಲಾ ಹೊಸತೂ ಅಲ್ಲ, ವಿಶೇಷವೂ ಅಲ್ಲ.
ಈ ಲೈಫು ವಂಡರ್‍‍ಫುಲ್ಲು, ನಮಗೆ ಗೊತ್ತು,
ಲೈಫು ಅಂದರೆ ಇಷ್ಟೆ, ನಮಗೆ ಚೆನ್ನಾಗಿ ಗೊತ್ತು.
ಇದೆಲ್ಲಾ ನಮಗೆ ಚೆನ್ನಾಗಿ ಗೊತ್ತು ಅಂತ
ನಮಗೆ ಗೊತ್ತು
ಅಂತ ಗೊತ್ತು,
ಗೊತ್ತು.
*****
ಮೂಲ: ಹ್ಯಾನ್ ಮ್ಯಾಗ್ನೆಸ್ ಎನ್‍ಜೆನ್ಸ್‍ಬರ್‍ಗರ್

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...