ಮಾತು ಬೇಕಾಗಿಲ್ಲ

ನನಗೇಕೋ ಈಗೀಗ ಮಾತುಗಳೇ
ಕೇಳುವುದೇ ಬೇಡಾಗುತ್ತದೆ, ಸುಮ್ಮನೆ
ಹೀಗೆ ಮೌನವಾಗಿ ನಡೆಯ ಬೇಕೆನಿಸುತ್ತದೆ,
ಮಾತಿನ ಗದ್ದಲದ ಸಂತೆಯಲಿ ಸಿಕ್ಕು
ಮನಸ್ಸೀಗ ನಜ್ಜುಗುಜ್ಜಾಗಿದೆ ಅಜ್ಜಿಯಾಗಿದೆ.

ಈಗ ಮಾತುಗಳೇ ಕಿವಿಗಳಿಗೆ ಬೇಡ
ಎಲ್ಲಿಯೂ ಒಂದು ಪ್ರಮಾಣಿಕ ಮಾತಿನ
ಜಾಡು ಸಿಗಲೊಲ್ಲದು ಬರೀಶಬ್ದಗಳ
ಜಾತ್ರೆಯಲಿ ಸಾವಿರಾರು ಮಂದಿಯ ಹೆಜ್ಜೆಗಳ
ಗುರುತುಗಳು ನನ್ನವನ್ನು ಅಳುಕಿಸಿ ಹಾಕಿಯಾಗಿದೆ.

ಮಾತುಗಳೇಕೆ ಬೇಕು ಈಗ,
ಎಲ್ಲವೂ ಸತ್ಯ ಸುಳ್ಳುಗಳು ಇಲ್ಲದರ
ಅವಸ್ಥೆಯಲ್ಲಿ ಇಬ್ಬರ ಹೃದಯವೂ
ಕಿರಿಕಿರಿಯ ಗೂಡಾಗಿ ಮಾಡು ಸೋರಿ
ಸೂಸಿ ಹೊಳೆಯುವ ಅನರ್ಥಗಳಾಗಿವೆ,
ಪದ್ಯಗಳು ಯಾರು ಎದೆಯನ್ನು ತಟ್ಟುವುದಿಲ್ಲ.

ಮಾತುಗಳು ಬೇಡವೆಂದರೂ ಒಮ್ಮೊಮ್ಮೆ
ಮೌನದ ಏಕಾಂತದಲಿ ಎಂದೋ ಆಡಿದ
ಮಾತುಗಳು ಒಂದಕ್ಕೊಂದು ಡಿಕ್ಕೀ
ಹೊಡೆದ ಮೋಡಗಳಾಗಿ ಭೋರೆಂದು ಸುರಿದು
ಕಣ್ಣಹನಿಗಳಿಗೆ ಗುಡುಗು ಮಿಂಚಾಗಿ
ಓಣಿ ತುಂಬೆಲ್ಲಾ ಕೆಸರು ರಾಡಿ. ಮಾತಿನಿಂದ
ನನ್ನನ್ನು ತಪ್ಪಸಿಕೊಳ್ಳಲಾಗುತ್ತಿಲ್ಲ ಇಂದಿಗೂ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ‘ಮುಟ್ಟಿದರೆ ಮುನಿ’ಯ ಮುನಿಸು
Next post ಗಳಿಗೆಬಟ್ಟಲ ತಿರುವುಗಳಲ್ಲಿ – ೭೩

ಸಣ್ಣ ಕತೆ

  • ದೇವರು ಮತ್ತು ಅಪಘಾತ

    ಊರಿನ ಕೊನೆಯಂಚಿನಲ್ಲಿದ್ದ ಕೆರೆಯಂಗಳದಲ್ಲಿ ಅಣಬೆಗಳಂತೆ ಮೈವೆತ್ತಿದ್ದ ಗುಡಿಸಲುಗಳಲ್ಲಿ ಕೊನೆಯದು ಅವಳದಾಗಿತ್ತು. ನಾಲ್ಕೈದು ಸಾರಿ ಮುನಿಸಿಪಾಲಿಟಿಯವರು ಆ ಗುಡಿಸಲುಗಳನ್ನು ಕಿತ್ತು ಹಾಕಿದ್ದರೂ ಮನುಷ್ಯ ಪ್ರಾಣಿಗಳ ಸೂರಿನ ಅದಮ್ಯ ಅವಶ್ಯಕ… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…