ನಲ್ಲ

ನನಗೆ ನೀನು ಇಂದಿಗೂ ಒಗಟು
ಬಿಡಿಸಲಾಗದ ಕಗ್ಗಂಟು
ಯಾಕೆ ನಲ್ಲ? ನನ್ನಲ್ಲಿ ಬಯಲಾಗದ ಹಠ
ಒಳಗೆ ತುಡಿತ ಮಿಡಿತ
ತೋರಿಕೆಗೆ ಯಾಕೆ ಹಿಂದೆಗೆತ?
ಮನಬೆರೆತರೂ ಬೆರೆಯದಂತೆ
ಒಲಿದರೂ ಒಲಿಯದಂತೆ
ನೀನೆಕೆ ಪದ್ಮಪತ್ರದಂತೆ?
ಹಸಿವು ನನಗೂ ನಿನಗೂ ಇಬ್ಬರಿಗೂ
ಉಸಿರು ನಿಲ್ಲುವವರೆಗೂ
ಗೋಡೆ ಬೇಡ, ಒಣ ಜಂಭ ಹಿತವಲ್ಲ
ತುಂಬು ಬಿಂದಿಗೆಯಂತೆ ಹಬ್ಬಿ
ನಿಂತಿದೆ ಪ್ರೀತಿ
ನಿನ್ನ ಕಣ್ಣಲಿ ನಾನು ಬಿಂಬ
ಆಗುವ ಬಯಕೆ
ಒಂದೇ ಸೂರಡಿ ಬದುಕ
ಚಿಗುರಿಸುವ ಹರಕೆ
ಭಾನು ಬುವಿಗಳ ಮಿಲನ
ಮಧ್ಯದೊಳು ಎಂತು?
ಕ್ಷಿತಿಜದೊಳು ಐಕ್ಯತೆಗೆ ಭಂಗವೆಂತು?
ನಲ್ಲ ನನ್ನ ನಿನ್ನ ನಂಟು
ಜನ್ಮಜನ್ಮದ ಗಂಟು
ಅರಿತು ನಡೆದರೆ ಬಾಳು
ಬೆಲ್ಲದಾ ಅಂಟು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮೂರು ಅವಸ್ಥೆಗಳು
Next post ಶಬರಿ – ೮

ಸಣ್ಣ ಕತೆ

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…