ನನಗೆ ನೀನು ಇಂದಿಗೂ ಒಗಟು
ಬಿಡಿಸಲಾಗದ ಕಗ್ಗಂಟು
ಯಾಕೆ ನಲ್ಲ? ನನ್ನಲ್ಲಿ ಬಯಲಾಗದ ಹಠ
ಒಳಗೆ ತುಡಿತ ಮಿಡಿತ
ತೋರಿಕೆಗೆ ಯಾಕೆ ಹಿಂದೆಗೆತ?
ಮನಬೆರೆತರೂ ಬೆರೆಯದಂತೆ
ಒಲಿದರೂ ಒಲಿಯದಂತೆ
ನೀನೆಕೆ ಪದ್ಮಪತ್ರದಂತೆ?
ಹಸಿವು ನನಗೂ ನಿನಗೂ ಇಬ್ಬರಿಗೂ
ಉಸಿರು ನಿಲ್ಲುವವರೆಗೂ
ಗೋಡೆ ಬೇಡ, ಒಣ ಜಂಭ ಹಿತವಲ್ಲ
ತುಂಬು ಬಿಂದಿಗೆಯಂತೆ ಹಬ್ಬಿ
ನಿಂತಿದೆ ಪ್ರೀತಿ
ನಿನ್ನ ಕಣ್ಣಲಿ ನಾನು ಬಿಂಬ
ಆಗುವ ಬಯಕೆ
ಒಂದೇ ಸೂರಡಿ ಬದುಕ
ಚಿಗುರಿಸುವ ಹರಕೆ
ಭಾನು ಬುವಿಗಳ ಮಿಲನ
ಮಧ್ಯದೊಳು ಎಂತು?
ಕ್ಷಿತಿಜದೊಳು ಐಕ್ಯತೆಗೆ ಭಂಗವೆಂತು?
ನಲ್ಲ ನನ್ನ ನಿನ್ನ ನಂಟು
ಜನ್ಮಜನ್ಮದ ಗಂಟು
ಅರಿತು ನಡೆದರೆ ಬಾಳು
ಬೆಲ್ಲದಾ ಅಂಟು.
*****
Related Post
ಸಣ್ಣ ಕತೆ
-
ಲೋಕೋಪಕಾರ!
ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…
-
ಕರೀಮನ ಪಿಟೀಲು
ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…
-
ಗೋಪಿ
ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…
-
ಕ್ಷಮೆ
ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…
-
ಇಬ್ಬರು ಹುಚ್ಚರು
ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…