Home / ಕವನ / ಕವಿತೆ / ಮರಣ ಉಯಿಲು

ಮರಣ ಉಯಿಲು

ದಾರಿಯುದ್ದಕ್ಕೂ ಭರವಸೆಯ
ಕೋಲಹಿಡಿದು ಹೊರಟೆ
ಕನಸಿನಾ ಅರಮನೆ ಹುಡುಕಿ,
ಚಮಣಿಯಿಂದುರಿದಾ ಕಿರು
ಕಿಡಿಯೊಂದು ಕೇಕೆ ಹಾಕಿ:
ಮೆರೆಯುವುದೆಂಬ ಭ್ರಮೆ ಇರಲೇ ಇಲ್ಲ.

ಬಾಳ ಹಾದಿಯು ಹಾಗೆ ಸವೆಯುತಿದೆ
ಸುಮ್ಮನೆ,
ಆತ್ಮಜ್ಯೋತಿಯ ಬತ್ತಿ ಕರಗುತಿದೆ ಮೆಲ್ಲನೆ,
ಗೂಡಿನೊಳಗಿಂದ ಹಕ್ಕಿ ಇಣುಕುತಿದೆ ಚಾಚಿ
ಹಾರಿಹೋಗಲು ಮನಕೆ ಇಬ್ಬಗೆಯ ನೀತಿ:

ಸ್ವರ್ಗದಾ ಸನ್ನಿಧಿಗೋ, ನರಕದಾ ಸಂಧಿಗೋ
ಮೆಲಕು ಹಾಕುವ ನಡಿಗೆ ಶಾಶ್ವತದ ಕಡೆಗೆ
ನಕ್ಷತ್ರಗಳ ಹಾಡಿಯಲಿ
ನೇರ ನೆಗೆತದ ಬಯಕೆ
ಬೀದಿ ದೀಪದ ಆಸೆ ಬಿಟ್ಟ ಹಾತೆ
ಉರಿಯ ಉಯ್ಯಾಲೆ ಸುಡುಪಂಜು
ಬೆಂದರೂ ಬಯಕೆ
ಚಿತ್ತ ಚಾಂಚಲ್ಯ ಶೃಂಗಾರ ಸುಖಕೆ
ಕೊಂಡ ಹಾಯುತ್ತ ಕಾಲುಗಳ
ಹಳಹಳಿಕೆ

ನಸುಗೆಂಪು ಮಿದುತನ ಮರಳಿ ಪಾದಕ್ಕೆ
ನಶ್ವರವು ಬದುಕು
ಮತ್ತೆ ಶಾಶ್ವತದ ಬಯಕೆ,
ಕೂಲಿಗೂ ಕುಲೀನಗೂ
ಒಂದೇ ಉಯಿಲ ಹೊದಿಕೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...