ಮರಣ ಉಯಿಲು

ದಾರಿಯುದ್ದಕ್ಕೂ ಭರವಸೆಯ
ಕೋಲಹಿಡಿದು ಹೊರಟೆ
ಕನಸಿನಾ ಅರಮನೆ ಹುಡುಕಿ,
ಚಮಣಿಯಿಂದುರಿದಾ ಕಿರು
ಕಿಡಿಯೊಂದು ಕೇಕೆ ಹಾಕಿ:
ಮೆರೆಯುವುದೆಂಬ ಭ್ರಮೆ ಇರಲೇ ಇಲ್ಲ.

ಬಾಳ ಹಾದಿಯು ಹಾಗೆ ಸವೆಯುತಿದೆ
ಸುಮ್ಮನೆ,
ಆತ್ಮಜ್ಯೋತಿಯ ಬತ್ತಿ ಕರಗುತಿದೆ ಮೆಲ್ಲನೆ,
ಗೂಡಿನೊಳಗಿಂದ ಹಕ್ಕಿ ಇಣುಕುತಿದೆ ಚಾಚಿ
ಹಾರಿಹೋಗಲು ಮನಕೆ ಇಬ್ಬಗೆಯ ನೀತಿ:

ಸ್ವರ್ಗದಾ ಸನ್ನಿಧಿಗೋ, ನರಕದಾ ಸಂಧಿಗೋ
ಮೆಲಕು ಹಾಕುವ ನಡಿಗೆ ಶಾಶ್ವತದ ಕಡೆಗೆ
ನಕ್ಷತ್ರಗಳ ಹಾಡಿಯಲಿ
ನೇರ ನೆಗೆತದ ಬಯಕೆ
ಬೀದಿ ದೀಪದ ಆಸೆ ಬಿಟ್ಟ ಹಾತೆ
ಉರಿಯ ಉಯ್ಯಾಲೆ ಸುಡುಪಂಜು
ಬೆಂದರೂ ಬಯಕೆ
ಚಿತ್ತ ಚಾಂಚಲ್ಯ ಶೃಂಗಾರ ಸುಖಕೆ
ಕೊಂಡ ಹಾಯುತ್ತ ಕಾಲುಗಳ
ಹಳಹಳಿಕೆ

ನಸುಗೆಂಪು ಮಿದುತನ ಮರಳಿ ಪಾದಕ್ಕೆ
ನಶ್ವರವು ಬದುಕು
ಮತ್ತೆ ಶಾಶ್ವತದ ಬಯಕೆ,
ಕೂಲಿಗೂ ಕುಲೀನಗೂ
ಒಂದೇ ಉಯಿಲ ಹೊದಿಕೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುನ್ನುಡಿಕಾರ
Next post ಶಬರಿ – ೧

ಸಣ್ಣ ಕತೆ

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಉಪ್ಪು

    ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

cheap jordans|wholesale air max|wholesale jordans|wholesale jewelry|wholesale jerseys