ಮರಣ ಉಯಿಲು

ದಾರಿಯುದ್ದಕ್ಕೂ ಭರವಸೆಯ
ಕೋಲಹಿಡಿದು ಹೊರಟೆ
ಕನಸಿನಾ ಅರಮನೆ ಹುಡುಕಿ,
ಚಮಣಿಯಿಂದುರಿದಾ ಕಿರು
ಕಿಡಿಯೊಂದು ಕೇಕೆ ಹಾಕಿ:
ಮೆರೆಯುವುದೆಂಬ ಭ್ರಮೆ ಇರಲೇ ಇಲ್ಲ.

ಬಾಳ ಹಾದಿಯು ಹಾಗೆ ಸವೆಯುತಿದೆ
ಸುಮ್ಮನೆ,
ಆತ್ಮಜ್ಯೋತಿಯ ಬತ್ತಿ ಕರಗುತಿದೆ ಮೆಲ್ಲನೆ,
ಗೂಡಿನೊಳಗಿಂದ ಹಕ್ಕಿ ಇಣುಕುತಿದೆ ಚಾಚಿ
ಹಾರಿಹೋಗಲು ಮನಕೆ ಇಬ್ಬಗೆಯ ನೀತಿ:

ಸ್ವರ್ಗದಾ ಸನ್ನಿಧಿಗೋ, ನರಕದಾ ಸಂಧಿಗೋ
ಮೆಲಕು ಹಾಕುವ ನಡಿಗೆ ಶಾಶ್ವತದ ಕಡೆಗೆ
ನಕ್ಷತ್ರಗಳ ಹಾಡಿಯಲಿ
ನೇರ ನೆಗೆತದ ಬಯಕೆ
ಬೀದಿ ದೀಪದ ಆಸೆ ಬಿಟ್ಟ ಹಾತೆ
ಉರಿಯ ಉಯ್ಯಾಲೆ ಸುಡುಪಂಜು
ಬೆಂದರೂ ಬಯಕೆ
ಚಿತ್ತ ಚಾಂಚಲ್ಯ ಶೃಂಗಾರ ಸುಖಕೆ
ಕೊಂಡ ಹಾಯುತ್ತ ಕಾಲುಗಳ
ಹಳಹಳಿಕೆ

ನಸುಗೆಂಪು ಮಿದುತನ ಮರಳಿ ಪಾದಕ್ಕೆ
ನಶ್ವರವು ಬದುಕು
ಮತ್ತೆ ಶಾಶ್ವತದ ಬಯಕೆ,
ಕೂಲಿಗೂ ಕುಲೀನಗೂ
ಒಂದೇ ಉಯಿಲ ಹೊದಿಕೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮುನ್ನುಡಿಕಾರ
Next post ಶಬರಿ – ೧

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…