ಪುಟ್ಟ ಕೆಂಚವ್ವ

ಹೊತ್ತಾರೆ ಸೂರ್‍ಯನ ಕಿರಣಗಳು ಮುತ್ತಿಡಲು
ಹಾಳು ಹಕ್ಕಿಯ ಹಾಡು ಕಿವಿ ತುಂಬಲು
ಕಿಸುರುಗಣ್ಣನು ತೆರೆದು ಸೆಟೆದ ಹೂ-ಮೈಯ ಮುರಿದು
ಆಕಳಿಸುವಳು ನಮ್ಮ ಪುಟ್ಟ ಕೆಂಚವ್ವ…..

ಚೂರು ಅಂಗಳವನೆ ಪರಪರ ಕೆರೆದು
ಒಡೆದ ಗಡಿಗೆಯ ಸೊಂಟಕ್ಕೆ ಕರೆದು
ಊರ ಗಟ್ಟಿಗಿತ್ತಿಯರೊಡನೆ ಗುದ್ದಾಡಿ
ನೀರು ತರುವಳು ನಮ್ಮ ಪುಟ್ಟ ಕೆಂಚವ್ವ…..

ಕರವೀರದ ಕೊಂಬೆಗಳ ಕಡಿದು
ಒಣಗಿದ ರೆಂಬೆಗಳನು ಬಡಿದು
ಕಡ್ಡಿ-ಪುರಳೆಯ ಒಟ್ಟಿಗೆ ಒಗೆದು
ಬೆಂಕಿ ಉರಿಸುವಳು ನಮ್ಮ ಪುಟ್ಟ ಕೆಂಚವ್ವ…..

ಚಟಾಕು ಹಾಲಿಗೆ ಚಿಟಿಕೆ ಪುಡಿಯನು ಬೆರೆಸಿ
ಪಾವು ನೀರನೆ ಸುರಿದು
ಘಮ್ಮೆನ್ನುವ ಹಾಗೆ ಟೀ ಕುದಿಸುವಳು
ಮಾಯಾವಿ ಹುಡುಗಿ ನಮ್ಮ ಪುಟ್ಟ ಕೆಂಚವ್ವ…..

ಹೊಲದಲ್ಲಿ ಸಂಜೆಯ ತನಕ ದುಡಿದು
ಅಕ್ಕಿ-ಮೆಣಸಿನಕಾಯಿ ಪಡೆದು
ತಮ್ಮನ ಬಾಯ ಚಪಲಕ್ಕೆ ಉದ್ದು-ಕಡಲೆಯ
ಕದ್ದು ತರುವಳು ನಮ್ಮ ಪುಟ್ಟ ಕೆಂಚವ್ವ…..

ದಾರಿಯಲಿ ಅಂತರಗಟ್ಟಮ್ಮನಿಗೆ ಕೈ ಮುಗಿವಳು
ಹೊಟ್ಟೆ ಬಟ್ಟೆಗಿಟ್ಟು ಮಡುಗು ಎಂದು ಬೇಡುವಳು
ಹಕ್ಕಿ ಗೂಡಿಗೆ ಮರಳುವಂತೆ
ಗುಡಲಿಗೆ ಮರಳುವಳು ನಮ್ಮ ಪುಟ್ಟ ಕೆಂಚವ್ವ…..

ಸೋರುವ ಬುಡ್ಡಿಯನೂ ಒಲಿಸಿ ಉರಿಸುವಳು
ಪಾವಕ್ಕಿಯಲಿ ತಂಗಿ ತಮ್ಮನ ಹೊಟ್ಟೆ ತೂಗಿಸುವಳು
ಹರಿದ ಹಚ್ಚಡವನೆ ಸಮನಾಗಿ ಎಲ್ಲರಿಗೆ ಹೊದಿಸಿ
ಕೈ ಚಳಕ ಮೆರೆವಳು ನಮ್ಮ ಪುಟ್ಟ ಕೆಂಚವ್ವ…..

ಅಪ್ಪನ ಕುಡಿತ-ಜೂಜಿಗೆ ಬೆದರುವಳು
ಅವ್ವನ ದಮ್ಮು-ಗೂರಲಿಗೆ ನೋಯುವಳು
ಸಿಟ್ಟಿನಲಿ ಕಟ್ಟಿರುವೆ, ಚಿಟ್ಟೆ ನಗೆಯವಳು
ದಿಟ್ಟ ನಡೆಯವಳು ನಮ್ಮ ಪುಟ್ಟ ಕೆಂಚವ್ವ…..

ಹೂವಿನ ವಾಸನೆ ಹಿಡಿದು ಹೆಸರು ಹೇಳುವಳು
ಹಕ್ಕಿಯ ಕೂಗನಳೆದು ಅಣಕಿಸುವಳು
ಎರೆಮಣ್ಣನು ಕಲಸಿ ಬೊಂಬೆಯ ಮಾಡುವಳು
ಬೊಂಬೆಗೂ ಜೀವ ಕೊಡುವಳು ನಮ್ಮ ಪುಟ್ಟ ಕೆಂಚವ್ವ…..

ಹುಲಿಯನಿಗೆ ಹಳ್ಳದಲಿ ಮಜ್ಜನ ಮಾಡಿಸುವಳು
ಭೂತಾಯಿ ಮೀನ ಕಿರುಬೆರಳಲಿ ಕುಣಿಸುವಳು
ಗಟ್ಟಿ ಗುಂಡಿಗೆಯವಳು ಕಾಳವ್ವನ
‘ಕಿಡಿ’ ಇವಳು ನಮ್ಮ ಪುಟ್ಟ ಕೆಂಚವ್ವ…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಜಯ ವಿಲಾಸ – ಸಪ್ತಮ ತರಂಗ
Next post ದೇವರು

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys