Home / ಕವನ / ಕವಿತೆ / ಮುಗಿಯದ ಕತೆ

ಮುಗಿಯದ ಕತೆ

ಅವನು ರಾಮನು
ಗುಣ ಸಂಪನ್ನನು
ನೀತಿ ನೇಮಕ್ಕೆ
ತಲೆಬಾಗುವನು
ಗುರುಹಿರಿಯರಿಗೆ
ಪ್ರೀತಿಪಾತ್ರನು
ಯಾರನ್ನೂ ನೋಯಿಸನು.

ಅನು ರಹೀಮನು
ಅವನೂ ಗುಣ ಸಂಪನ್ನನು
ಕೊಂಚ ಸಂಕೋಚದ ಸ್ವಭಾವ
ಸದಾ ಧ್ಯಾನಸ್ಥನು
ಏಕಾಂತ ಪ್ರಿಯನು.

ಹೀಗೊಮ್ಮೆ
ರಾಮನೂ ರಹೀಮನೂ
ಭೆಟ್ಟಿಯಾದರು
ಅವನೊಳಗೆ ಅವನೊ
ಇವನೊಳಗೆ ಅವನೊ
ಎಂಬಂತೆ ಒಂದಾದರು.

ಒಂದೇ ನೋಟ
ಒಂದೇ ಮಾಟ
ಕಣ್ಣಿದ್ದವರಿಗೂ
ಕಗ್ಗಂಟಾದರು.
ಸೂರ್‍ಯಚಂದ್ರರ
ಜೋಡಿ ಕೂಡಿ
ನಲಿದಿದ್ದು ನೋಡಿ
ಜನ ತಬ್ಬಿಬ್ಬಾದರು.

ಹೀಗೆ….. ಇಬ್ಬರೂ ಕೂಡಿ
ಒಬ್ಬರೇ ಆಗಿ
ಆಟವಾಡಿದರು.

ಹಗಲು-ರಾತ್ರಿಯ ಆಟ
ಹೂವು-ಗಿಡದ ಆಟ
ಬೆಂಕಿ-ಬೆಳಕಿನ ಆಟ
ಮೋಡ-ಮಳೆಯ
ಆಟವಾಡಿದರು.

ಕೆರೆ-ದಡ, ದಡ-ಕೆರೆ,
ಎಂದು ಕುಪ್ಪಳಿಸಿದರು
ಕಣ್ಣಾಮುಚ್ಚೆ ಕಾಡೆಗೂಡೆ
ಎಂದು ಉದ್ದಿನ ಮೂಟೆ
ಉರುಳಿಸಿದರು.
ಮಾಯದ ಕೈಗಳಿಂದ
ಮರಳಿನ ಕಣಗಳಿಂದ
ಕಪ್ಪೆಗೂಡು ಕಟ್ಟಿದರು.


ರಾಮನಿಗೆ ಮೀಸೆ ಮೂಡಿ
ಮದುವೆಯಾಗಿ ಮಕ್ಕಳಾಗಿ
ಮರಣವೂ ಬಂತು.
ರಹೀಮ ಅಬ್ಬೆಪಾರಿಯಾಗಿ
ಅಲೆದು ಅಂತರ್‍ಧಾನನಾದನು.


ಇದೀಗ ಕೆರೆ ಬತ್ತಿ ದಡ ಕುಸಿದು
ಕಪ್ಪೆಗೂಡು ಹುಳುಹುಪ್ಪಟೆ
ಬಾವಲಿಗಳಿಗೆ ಬಿಡಾರವಾಯಿತು
ಹೆಬ್ಬಾಗಿಲಿನಲ್ಲಿ ಹಾವೊಂದು
ಪೊರೆಕಳಚಿ, ಪಹರೆ ನಡೆಸುತ್ತಿದ್ದ
ಮುಂಗುಸಿಗೆ ಮುಖಭಂಗವಾಗಿ
ಮುನಿಸು ಮುಗಿಲು ಮುಟ್ಟಿತು.

ಪ್ರಸಿದ್ದ ಕಪ್ಪೆಗೂಡಿನ ಕದನಲ್ಲಿ
ನೆಲವೂ ನೀರಾಗಿ
ಚರಿತ್ರೆಗೂ ಚುರುಕು ಮುಟ್ಟಿತು.


ಎಲ್ಲಾ ಮುಗಿಯಿತು
ಮುಗಿದೇ ಹೋಯಿತು ಅನ್ನುವಾಗ….
ಹೀಗೆಯೆ ಒಮ್ಮೆ
ಅಶೋಕನೂ, ಅಕ್ಬರನೂ
ಭೆಟ್ಟಿಯಾದರು.
ಮಾಯದ ಕೈಗಳಿಂದ
ಮರಳಿನ ಕಣಗಳಿಂದ
ಕಪ್ಪೆಗೂಡು ಕಟ್ಟತೊಡಗಿದರು…..
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...