ಮುಗಿಯದ ಕತೆ

ಅವನು ರಾಮನು
ಗುಣ ಸಂಪನ್ನನು
ನೀತಿ ನೇಮಕ್ಕೆ
ತಲೆಬಾಗುವನು
ಗುರುಹಿರಿಯರಿಗೆ
ಪ್ರೀತಿಪಾತ್ರನು
ಯಾರನ್ನೂ ನೋಯಿಸನು.

ಅನು ರಹೀಮನು
ಅವನೂ ಗುಣ ಸಂಪನ್ನನು
ಕೊಂಚ ಸಂಕೋಚದ ಸ್ವಭಾವ
ಸದಾ ಧ್ಯಾನಸ್ಥನು
ಏಕಾಂತ ಪ್ರಿಯನು.

ಹೀಗೊಮ್ಮೆ
ರಾಮನೂ ರಹೀಮನೂ
ಭೆಟ್ಟಿಯಾದರು
ಅವನೊಳಗೆ ಅವನೊ
ಇವನೊಳಗೆ ಅವನೊ
ಎಂಬಂತೆ ಒಂದಾದರು.

ಒಂದೇ ನೋಟ
ಒಂದೇ ಮಾಟ
ಕಣ್ಣಿದ್ದವರಿಗೂ
ಕಗ್ಗಂಟಾದರು.
ಸೂರ್‍ಯಚಂದ್ರರ
ಜೋಡಿ ಕೂಡಿ
ನಲಿದಿದ್ದು ನೋಡಿ
ಜನ ತಬ್ಬಿಬ್ಬಾದರು.

ಹೀಗೆ….. ಇಬ್ಬರೂ ಕೂಡಿ
ಒಬ್ಬರೇ ಆಗಿ
ಆಟವಾಡಿದರು.

ಹಗಲು-ರಾತ್ರಿಯ ಆಟ
ಹೂವು-ಗಿಡದ ಆಟ
ಬೆಂಕಿ-ಬೆಳಕಿನ ಆಟ
ಮೋಡ-ಮಳೆಯ
ಆಟವಾಡಿದರು.

ಕೆರೆ-ದಡ, ದಡ-ಕೆರೆ,
ಎಂದು ಕುಪ್ಪಳಿಸಿದರು
ಕಣ್ಣಾಮುಚ್ಚೆ ಕಾಡೆಗೂಡೆ
ಎಂದು ಉದ್ದಿನ ಮೂಟೆ
ಉರುಳಿಸಿದರು.
ಮಾಯದ ಕೈಗಳಿಂದ
ಮರಳಿನ ಕಣಗಳಿಂದ
ಕಪ್ಪೆಗೂಡು ಕಟ್ಟಿದರು.


ರಾಮನಿಗೆ ಮೀಸೆ ಮೂಡಿ
ಮದುವೆಯಾಗಿ ಮಕ್ಕಳಾಗಿ
ಮರಣವೂ ಬಂತು.
ರಹೀಮ ಅಬ್ಬೆಪಾರಿಯಾಗಿ
ಅಲೆದು ಅಂತರ್‍ಧಾನನಾದನು.


ಇದೀಗ ಕೆರೆ ಬತ್ತಿ ದಡ ಕುಸಿದು
ಕಪ್ಪೆಗೂಡು ಹುಳುಹುಪ್ಪಟೆ
ಬಾವಲಿಗಳಿಗೆ ಬಿಡಾರವಾಯಿತು
ಹೆಬ್ಬಾಗಿಲಿನಲ್ಲಿ ಹಾವೊಂದು
ಪೊರೆಕಳಚಿ, ಪಹರೆ ನಡೆಸುತ್ತಿದ್ದ
ಮುಂಗುಸಿಗೆ ಮುಖಭಂಗವಾಗಿ
ಮುನಿಸು ಮುಗಿಲು ಮುಟ್ಟಿತು.

ಪ್ರಸಿದ್ದ ಕಪ್ಪೆಗೂಡಿನ ಕದನಲ್ಲಿ
ನೆಲವೂ ನೀರಾಗಿ
ಚರಿತ್ರೆಗೂ ಚುರುಕು ಮುಟ್ಟಿತು.


ಎಲ್ಲಾ ಮುಗಿಯಿತು
ಮುಗಿದೇ ಹೋಯಿತು ಅನ್ನುವಾಗ….
ಹೀಗೆಯೆ ಒಮ್ಮೆ
ಅಶೋಕನೂ, ಅಕ್ಬರನೂ
ಭೆಟ್ಟಿಯಾದರು.
ಮಾಯದ ಕೈಗಳಿಂದ
ಮರಳಿನ ಕಣಗಳಿಂದ
ಕಪ್ಪೆಗೂಡು ಕಟ್ಟತೊಡಗಿದರು…..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಬರಿ – ೧೦
Next post ಹೊನ್ನು

ಸಣ್ಣ ಕತೆ

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

cheap jordans|wholesale air max|wholesale jordans|wholesale jewelry|wholesale jerseys