Home / ಕವನ / ಕವಿತೆ / ಹುಟ್ಟು

ಹುಟ್ಟು

ಕನಸುಗಳು ಹೆಚ್ಚಿ ರಾತ್ರಿ
ಕಪ್ಪು ಕಾಡಿಗೆ ಕಣ್ಣುಗಳಿಗೆ
ಮರದಲಿ ಸದ್ದಿಲ್ಲದೇ ಅರಳುವ
ಎಲೆಗಳೂ ಹಸಿರು ಸೇರಿಸುತ್ತವೆ
ಅರಸುತ ಅಲೆದಾಡುವ ಹೊರಳಾಡುವ
ಮೂಕಮರ್ವಕ ಹಾಸಿಗೆಯಲಿ
ದಪ್ಪ ಗಾಜಿನ ಕಿಟಕಿಯಾಚೆ ಚಿಕ್ಕಿಗಳು.

ಹೂವು ತುಂಬಿದ ಮರದ ಅಡಿ
ಹಾಸಿವೆ ಉದುರಿದ ಫಲಕುಗಳು
ನೆನಪುಗಳ ದಿವ್ಯತೆ ಸುಗಂಧವಾಗಿ
ಎದೆಯ ಕೊಳೆದತುಂಬ ಸ್ಪಂದನದಲೆಗಳು
ಅಂಗಳಗುಡಿಸಿದಾಗ ಬೆವರಿಗೆ ಅಂಟಿಕೊಳ್ಳುವುದು
ಧೂಳಿನ ಕಣಗಳು ಸರಿಗೆಯ ಮೇಲೆ
ಹಾರಾಡುವ ಬಣ್ಣ ಬಟ್ಟೆ ಚಿಟ್ಟೆಗಳು
ಸುರಿಯುತ್ತವೆ ಓಕುಳಿ ಏಕಾಂತದಲಿ.

ಬಯಲು ಗಾಳಿ ತೇಲಿದ ಮರದ ಹಸಿರು
ಹರಿದು ಹಾಯ್ದ ಪ್ರಭೆ ಬೆಳಕಿನ ಕಿರಣಗಳು
ಭಾವ ರಾಗವಾಗಿ ಎದೆಗಿಳಿದು ಎಲ್ಲೆಲ್ಲೂ
ಚಂದ್ರಬಿಂಬ ಹೂವಿನ ಹಾಸಿಗೆ ಚಿಲಿಪಿಲಿರಾಗ
ಬೆಚ್ಚಗೆ ಗುನುಗುಣಿಸುವ ಜೋಗುಳ ಹಿಡಿದ
ಕೈಗಳ ಬಳೆಯತುಂಬ ನೀಲಿಚಿಕ್ಕಿ ತೇಲಿ
ತೂಗಿ ತೂಗಿ ಜಗದ ತೊಟ್ಟಿಲು ಅವಳ ಕೈಯಲ್ಲಿ

ರೆಕ್ಕೆ ಬಿಚ್ಚಿ ಬಯಲ ಹಾರಿದ ಹಕ್ಕಿಯ
ದಾರಿಗುಂಟ ತೇಲಿ ಹೋದ ಮಧುರ ಗಾನ
ರೊಯೈಂದು ತಿದ್ದಿ ತೀಡಿ ತಣ್ಣಗೆ ಗಾಳಿ ಗಂಧ
ಬೆರಳಿಗಂಟಿದ ಚಿಟ್ಟೆ ಬಣ್ಣದ ಸರಗ ನೂಲಿನಲಿ
ನೇಯ್ದು ಹಗುರ ದೂರ ದಾರಿ ಒಳ ದಾರಿ
ಎಳೆ ಹಿಡಿದು ಜೇಡ ನೂತ ಬಿಡುಗಡೆಯ
ಬೆಚ್ಚನೆಯ ಸ್ಪರ್ಶ ಉಳಿದಂತೆ ಈಗ ಹುಟ್ಟಿದ ಕಂದನ ಬೊಗಸೆಯಲಿ.
*****

Tagged:

Leave a Reply

Your email address will not be published. Required fields are marked *

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...