Home / ಕವನ / ಕವಿತೆ / ಹುಟ್ಟು

ಹುಟ್ಟು

ಕನಸುಗಳು ಹೆಚ್ಚಿ ರಾತ್ರಿ
ಕಪ್ಪು ಕಾಡಿಗೆ ಕಣ್ಣುಗಳಿಗೆ
ಮರದಲಿ ಸದ್ದಿಲ್ಲದೇ ಅರಳುವ
ಎಲೆಗಳೂ ಹಸಿರು ಸೇರಿಸುತ್ತವೆ
ಅರಸುತ ಅಲೆದಾಡುವ ಹೊರಳಾಡುವ
ಮೂಕಮರ್ವಕ ಹಾಸಿಗೆಯಲಿ
ದಪ್ಪ ಗಾಜಿನ ಕಿಟಕಿಯಾಚೆ ಚಿಕ್ಕಿಗಳು.

ಹೂವು ತುಂಬಿದ ಮರದ ಅಡಿ
ಹಾಸಿವೆ ಉದುರಿದ ಫಲಕುಗಳು
ನೆನಪುಗಳ ದಿವ್ಯತೆ ಸುಗಂಧವಾಗಿ
ಎದೆಯ ಕೊಳೆದತುಂಬ ಸ್ಪಂದನದಲೆಗಳು
ಅಂಗಳಗುಡಿಸಿದಾಗ ಬೆವರಿಗೆ ಅಂಟಿಕೊಳ್ಳುವುದು
ಧೂಳಿನ ಕಣಗಳು ಸರಿಗೆಯ ಮೇಲೆ
ಹಾರಾಡುವ ಬಣ್ಣ ಬಟ್ಟೆ ಚಿಟ್ಟೆಗಳು
ಸುರಿಯುತ್ತವೆ ಓಕುಳಿ ಏಕಾಂತದಲಿ.

ಬಯಲು ಗಾಳಿ ತೇಲಿದ ಮರದ ಹಸಿರು
ಹರಿದು ಹಾಯ್ದ ಪ್ರಭೆ ಬೆಳಕಿನ ಕಿರಣಗಳು
ಭಾವ ರಾಗವಾಗಿ ಎದೆಗಿಳಿದು ಎಲ್ಲೆಲ್ಲೂ
ಚಂದ್ರಬಿಂಬ ಹೂವಿನ ಹಾಸಿಗೆ ಚಿಲಿಪಿಲಿರಾಗ
ಬೆಚ್ಚಗೆ ಗುನುಗುಣಿಸುವ ಜೋಗುಳ ಹಿಡಿದ
ಕೈಗಳ ಬಳೆಯತುಂಬ ನೀಲಿಚಿಕ್ಕಿ ತೇಲಿ
ತೂಗಿ ತೂಗಿ ಜಗದ ತೊಟ್ಟಿಲು ಅವಳ ಕೈಯಲ್ಲಿ

ರೆಕ್ಕೆ ಬಿಚ್ಚಿ ಬಯಲ ಹಾರಿದ ಹಕ್ಕಿಯ
ದಾರಿಗುಂಟ ತೇಲಿ ಹೋದ ಮಧುರ ಗಾನ
ರೊಯೈಂದು ತಿದ್ದಿ ತೀಡಿ ತಣ್ಣಗೆ ಗಾಳಿ ಗಂಧ
ಬೆರಳಿಗಂಟಿದ ಚಿಟ್ಟೆ ಬಣ್ಣದ ಸರಗ ನೂಲಿನಲಿ
ನೇಯ್ದು ಹಗುರ ದೂರ ದಾರಿ ಒಳ ದಾರಿ
ಎಳೆ ಹಿಡಿದು ಜೇಡ ನೂತ ಬಿಡುಗಡೆಯ
ಬೆಚ್ಚನೆಯ ಸ್ಪರ್ಶ ಉಳಿದಂತೆ ಈಗ ಹುಟ್ಟಿದ ಕಂದನ ಬೊಗಸೆಯಲಿ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...