Home / ಕವನ / ಕವಿತೆ / ಹುಟ್ಟು

ಹುಟ್ಟು

ಕನಸುಗಳು ಹೆಚ್ಚಿ ರಾತ್ರಿ
ಕಪ್ಪು ಕಾಡಿಗೆ ಕಣ್ಣುಗಳಿಗೆ
ಮರದಲಿ ಸದ್ದಿಲ್ಲದೇ ಅರಳುವ
ಎಲೆಗಳೂ ಹಸಿರು ಸೇರಿಸುತ್ತವೆ
ಅರಸುತ ಅಲೆದಾಡುವ ಹೊರಳಾಡುವ
ಮೂಕಮರ್ವಕ ಹಾಸಿಗೆಯಲಿ
ದಪ್ಪ ಗಾಜಿನ ಕಿಟಕಿಯಾಚೆ ಚಿಕ್ಕಿಗಳು.

ಹೂವು ತುಂಬಿದ ಮರದ ಅಡಿ
ಹಾಸಿವೆ ಉದುರಿದ ಫಲಕುಗಳು
ನೆನಪುಗಳ ದಿವ್ಯತೆ ಸುಗಂಧವಾಗಿ
ಎದೆಯ ಕೊಳೆದತುಂಬ ಸ್ಪಂದನದಲೆಗಳು
ಅಂಗಳಗುಡಿಸಿದಾಗ ಬೆವರಿಗೆ ಅಂಟಿಕೊಳ್ಳುವುದು
ಧೂಳಿನ ಕಣಗಳು ಸರಿಗೆಯ ಮೇಲೆ
ಹಾರಾಡುವ ಬಣ್ಣ ಬಟ್ಟೆ ಚಿಟ್ಟೆಗಳು
ಸುರಿಯುತ್ತವೆ ಓಕುಳಿ ಏಕಾಂತದಲಿ.

ಬಯಲು ಗಾಳಿ ತೇಲಿದ ಮರದ ಹಸಿರು
ಹರಿದು ಹಾಯ್ದ ಪ್ರಭೆ ಬೆಳಕಿನ ಕಿರಣಗಳು
ಭಾವ ರಾಗವಾಗಿ ಎದೆಗಿಳಿದು ಎಲ್ಲೆಲ್ಲೂ
ಚಂದ್ರಬಿಂಬ ಹೂವಿನ ಹಾಸಿಗೆ ಚಿಲಿಪಿಲಿರಾಗ
ಬೆಚ್ಚಗೆ ಗುನುಗುಣಿಸುವ ಜೋಗುಳ ಹಿಡಿದ
ಕೈಗಳ ಬಳೆಯತುಂಬ ನೀಲಿಚಿಕ್ಕಿ ತೇಲಿ
ತೂಗಿ ತೂಗಿ ಜಗದ ತೊಟ್ಟಿಲು ಅವಳ ಕೈಯಲ್ಲಿ

ರೆಕ್ಕೆ ಬಿಚ್ಚಿ ಬಯಲ ಹಾರಿದ ಹಕ್ಕಿಯ
ದಾರಿಗುಂಟ ತೇಲಿ ಹೋದ ಮಧುರ ಗಾನ
ರೊಯೈಂದು ತಿದ್ದಿ ತೀಡಿ ತಣ್ಣಗೆ ಗಾಳಿ ಗಂಧ
ಬೆರಳಿಗಂಟಿದ ಚಿಟ್ಟೆ ಬಣ್ಣದ ಸರಗ ನೂಲಿನಲಿ
ನೇಯ್ದು ಹಗುರ ದೂರ ದಾರಿ ಒಳ ದಾರಿ
ಎಳೆ ಹಿಡಿದು ಜೇಡ ನೂತ ಬಿಡುಗಡೆಯ
ಬೆಚ್ಚನೆಯ ಸ್ಪರ್ಶ ಉಳಿದಂತೆ ಈಗ ಹುಟ್ಟಿದ ಕಂದನ ಬೊಗಸೆಯಲಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...