Home / ಕವನ / ಕವಿತೆ / ಸರಿದು ಹೋದ ಗಾಳಿ

ಸರಿದು ಹೋದ ಗಾಳಿ

ಗಾಳಿ ಸುಮ್ಮನೆ ಸರಿದು ಹೋಗಿದೆ
ಎದೆಯ ತಳಮಳ ಕಂಪನ ಹೊತ್ತು
ಈಗ ಸೂರ್ಯ ಮುಳುಗಿದ್ದಾನೆ
ಕತ್ತಲೆಯ ಗೂಡಿನೊಳಗೆ ಹಕ್ಕಿಮರಿಗಳು
ಏನೊಂದೂ ಹೇಳುವದಿಲ್ಲ ತಬ್ಬಿಮಲಗಿವೆ
ಸುಮ್ಮನೆ ಒಂದನ್ನೊಂದು.

ರಾತ್ರಿ ಚಿಕ್ಕಿಗಳು ಮೌನದಲಿ ಮಿನುಗುತ್ತಿವೆ
ಸರಿದು ಹೋದಗಾಳಿ ಮತ್ತೆ ಮರಳಿ ಬಂದು
ಕಿಟಕಿಯ ಸಂದಿಯಲಿ ಕೇದಿಗೆ ಹೂವ
ಗಂಧ ಸೂಸಿ ಮುಸುಕು ಹೋದ ರಾತ್ರಿ
ಮಬ್ಬು ಹಳದಿ ಬೆಳಕಕೋಲು ತೂರಿದೆ
ಕಂದು ಹೂವಿನ ತಲೆದಿಂಬಿನಲಿ.

ಮುದ್ದೇ ಮುದುಡಿದ ಕನಸ ತುಂಬ
ಹಾರಾಟ ತೇಲುಗಣ್ಣಿನ ಮಂಪರು
ಗಾಳಿಸುಮ್ಮನಿರುವದಿಲ್ಲ ಮತ್ತೆ
ಬೆವರ ಕಪ್ಪಕೂದಲ ನೇವರಿಸಿ
ಕಚಗುಳಿ ಇಟ್ಟಿದೆ ದಿಗ್ಗನೆ ಎದ್ದಿದ್ದಾಳೆ
ತಣ್ಣನೆ ಸ್ಪರ್ಶಕ್ಕೆ ಅವಳು, ಕಾಲಿನಿಂದ
ಸರಿದು ಹೋದ ಚಾದರು.

ಗಾಳಿಗೆ ಗಾಳಿಮಾತು ಗಂಧಸ್ಪರ್ಶ
ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಹರಡಿ ಹಾರಾಡಿ
ತೇಲುಪಟ ಬಾಲಂಗೋಚಿ ಸೆಳವು
ಒಂದಾದ ವಾಸನೆ ತೇಲುಕೊಳ ಚಿಮ್ಮಿ
ಎದ್ದ ಮುಖದ ಜಾರು ನೀರು ಹರಿದು
ಬೆಳದಿಂಗಳ ಮಾಯೆ ಅಂಗಳದಲಿ.

ಹೀಗೆ ಗಾಳಿ ಸುಮ್ಮನೆ ಸರಿದು ಹೋಗಿದೆ
ಎದೆಯ ಬದುವಿನಲಿ ಸುಂಟರಗಾಳಿಯಾಗಿ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...