ಓ ರಾಜಹಂಸರಿರ ಏಳಿ ಏಳಿ

ಓ ಏಳಿ ಮಕ್ಕಳಿರಾ ಚಲುವಾತ್ಮ ಕಂದರಿರಾ
ಅಮೃತದ ವರಗಳಿಗಿ ಬಂತು ಏಳಿ
ಶುಕ್ರತಾರೆಯ ತುಂಬಿ ಅಮೃತವ ತಂದಿರುವೆ
ಓ ರಾಜಹಂಸರಿರ ಏಳಿ ಏಳಿ

ರಾಜಹಂಸರು ನೀವು ರಾಜವಂಸರು ನೀವು
ಜ್ಞಾನಮುರಳಿಯ ಕೊಳಲು ಕೇಳಬನ್ನಿ
ಬಿಳಿಯಾನೆ ಬಿಳಿಹುಲಿಯು ಬಿಳಿಸಿಂಹ ನೀವಯ್ಯ
ನವಯುಗದ ರಂಗೋಲಿ ಬರೆಯಬನ್ನಿ

ಶಾಂತಿಧಾಮವ ಬಿಟ್ಟು ನಿಮ್ಮ ಧಾಮಕೆ ಬಂದೆ
ನಿಮ್ಮಾತ್ಮ ಬಾಗಿಲವ ತೆರೆಯ ಬಂದ
ಜ್ಯೋತಿ ಸಾಗರ ತಂದೆ ಪ್ರೀತಿ ಸಾಗರ ತಂದೆ
ಜ್ಞಾನಸಾಗರ ನಿಮಗೆ ಸುರಿಯು ಬಂದೆ

ಕಣ್ಣು ಮುಚ್ಚಲು ನರಕ ಕಣ್ಣು ಬಿಚ್ಚಲು ಸ್ವರ್ಗ
ನವಯುಗದ ಕಹಳೆಯನು ಊದಲೇಳಿ
ಕಲಿಯುಗದ ಕಲ್ಲುಗಳ ಕಲಹದಾ ಮುಳ್ಳುಗಳ
ಮಲ್ಲಿಗೆಯ ಹೂಗೊಳಿಸಿ ನಗಿಸಲೇಳಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಶಕುನಿ
Next post ನೈತಿಕತೆ

ಸಣ್ಣ ಕತೆ

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys