Home / ಕವನ / ಕವಿತೆ / ನೆಮ್ಮದಿಗೆ ಹಾಕಿದ ಅರ್ಜಿ

ನೆಮ್ಮದಿಗೆ ಹಾಕಿದ ಅರ್ಜಿ

ನೆಮ್ಮದಿಗೆ ಅವಳು ಹಾಕಿದ
ಅರ್ಜಿಗಳೆಲ್ಲಾ ವಜಾಗೊಂಡಿದೆಯಂತೆ.
ವಿನಂತಿ ಪತ್ರದ ಒಕ್ಕಣಿಕೆ ಒಂದು ಚೂರು ಸರಿಯಾಗಿಲ್ಲ,
ಎಲ್ಲಿಯೂ ಒಂದನ್ನು ಕಾಳಜಿಯಿಂದ ಪೂರ್ಣಗೊಳಿಸಿಲ್ಲ,
ಚಿತ್ತುಕಾಟು, ತಿದ್ದುಪಡಿಗಳಿದ್ದರೆ ಪರಿಗಣಿಸಲಾಗುವುದಿಲ್ಲ
-ಎಂಬುದು ತಲಾಟಿಯ ತಕರಾರು.

ಪತ್ರದಲ್ಲಷ್ಟೇ ಪ್ರಮಾದಗೊಂಡಿದೆ ಎಂದರೆ
ಅದು ಸುಳ್ಳೆ ಸುಳ್ಳು:
ಯಾಕೆಂದರೆ ಬದುಕಿನ ಪಾತ್ರಗಳೆಲ್ಲ
ಅದಲು ಬದಲಾಗಿವೆ. ಪಾತ್ರದ ಚಹರೆಗಳು ಕೂಡ
ಗುರುತೆ ಸಿಗದಷ್ಟು ಮಾರ್ಪಾಟಾಗಿವೆ.
ಅದರಲ್ಲಿ ಒಂದು ಅವಳದೂ..

ಅಂದೆಲ್ಲಾ ತಂಬೆಲರಿಗೆ ತೀಡಿಕೊಂಡ
ಎಳೆತಳಿರಂತೆ- ಮೋಹಕತೆಗೆ ಮರುಳಾಗಿ,
ಪರಸ್ಪರ ಮುಟ್ಟಗೊಡದೇ, ಪರಿಪರಿಯ ಭಾವದೋಕುಳಿಯಾಗುತ್ತ
ಹೊಂಬಾಳಿನ ಹಂಬಲವ ಮೈತುಂಬಾ ಹೊದ್ದು,
ಆ ತುಡಿತದಲ್ಲೇ ತವಕಿಸುತ್ತ ಕೂಗಳತೆಗೆ ಸಿಗದವನ ದಾರಿ ಕಾಯುತ್ತ-
ಇಲ್ಲ ಮುಟ್ಟಲೇ ಇಲ್ಲ ಕೂಗು,
ಹಾಗಾಗೇ ಪಾತ್ರ ಪಲ್ಲಟ.

ಆ ಪ್ರೀತಿಯ ಬೇಲಿ ಕೂಡ ಪರಭಾರೆ ವಹಿಸಿಕೊಂಡಿದೆ.
ಯಾರದೋ ಗರ್ಭಕ್ಕೆ ವೀರ್‍ಯದಾನಿಯಾಗಿ, ಆದರ್ಶ ಪತಿಯಾಗಿ,
ಅಪ್ಪಟ ತಂದೆಯಾಗಿ,
ಹಾಗಾಗೇ ಈಗ ವಾಸ್ತವದ ನೆರಳಲ್ಲಿ
ಅರ್ಜಿಯ ಮಂಜೂರಿ ಮಾಡಿಸಿಕೊಳ್ಳುವ
ತುರಾತುರಿಯಲ್ಲಿದ್ದಾಳೆ ಆಕೆ.
ನಾಲ್ಕಾರು ಬಾರು ಅಲೆದಾಡಿ ಅವರಿವರ ಬುದ್ದಿವಾದಕ್ಕೆ ಕಿವಿಕೊಟ್ಟು
ಅಸಂಬದ್ಧವನ್ನೆಲ್ಲಾ ನಿವಾರಿಸಿ,
ತಿದ್ದುಪಡಿಗಳನ್ನೆಲ್ಲಾ ಕಾಣದಂತೆ ಬಿಳಿ ಲೇಪನ ಬಳಿದು
ಮೇಲೆ ನಾಜೂಕಾಗಿ ಹೊಸ ಅಕ್ಷರ ಮೂಡಿಸುತ್ತಿದ್ಧಾಳೆ ಆಕೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...